Asianet Suvarna News Asianet Suvarna News

ಅತ್ತ ಡಿಕೆಸು ಚುರುಕು - ಇತ್ತ ಅನಿತಾ ಬಿರುಸು : ತಣ್ಣಗಿರುವ ಬಿಜೆಪಿಗರು

ಅತ್ತ ಸಂಸದ ಡಿಕೆ ಸುರೇಶ್ ಚುರುಕಾಗಿದ್ದು ಇತ್ತ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ  ಬಿರುಸಾಗಿದ್ದಾರೆ. ಇದೆಲ್ಲದರ ನಡುವೆ  ಬಿಜೆಪಿ ತಣ್ಣಗಿದೆ. 

Congress JDS  Prepare for Gram Panchayat Election snr
Author
Bengaluru, First Published Dec 4, 2020, 1:43 PM IST

ವರದಿ : ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಡಿ.04):  ಗ್ರಾಮ ಪಂಚಾ​ಯಿತಿ ಚುನಾ​ವಣೆ ಘೋಷ​ಣೆ​ಯಾದ ಬೆನ್ನ ಹಿಂದೆಯೇ ರಾಜ​ಕೀಯ ಪಕ್ಷ​ಗಳ ನಾಯ​ಕರು ಹಳ್ಳಿ​ಗ​ಳತ್ತ ಮುಖ ಮಾಡಿ​ದ್ದಾರೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ಮುಖಂಡರು ಗ್ರಾಮ ಸಂಚಾರ ಆರಂಭಿ​ಸಿದ್ದು, ಶಾಸ​ಕರು, ಜಿಪಂ, ತಾಪಂ ಅಧ್ಯ​ಕ್ಷರು ಮತ್ತು ಸದ​ಸ್ಯರು ಹಳ್ಳಿ ಜನರ ಮನೆ ಬಾಗಿ​ಲಿಗೆ ತೆರ​ಳುತ್ತಿ​ದ್ದಾರೆ.

ರಾಮ​ನ​ಗರ ಜಿಲ್ಲೆ ಮೇಲ್ನೋ​ಟಕ್ಕೆ ಮಾತ್ರ ಮೂವರು ಶಾಸ​ಕ​ರನ್ನು ಹೊಂದಿ​ರುವ ಜೆಡಿ​ಎಸ್‌ನ ಭದ್ರ​ಕೋ​ಟೆ​ಯಂತೆ ಕಾಣು​ತ್ತಿದೆ. ಕಾಂಗ್ರೆಸ್‌ ಓರ್ವ ಸಂಸ​ದ, ಶಾಸ​ಕ, ಮೂವರು ವಿಧಾನ ಪರಿ​ಷತ್‌ ಸದ​ಸ್ಯರು, ಬಿಜೆಪಿ​ಯ​ಲ್ಲಿ ​ಮೂ​ವರು ವಿಧಾನ ಪರಿ​ಷತ್‌ ಸದ​ಸ್ಯ​ರು ಇದ್ದಾ​ರೆ. ಜಿಲ್ಲಾ ಪಂಚಾ​ಯಿತಿ, ನಾಲ್ಕು ತಾ.ಪಂ.ಗ​ಳಲ್ಲಿ ಕಾಂಗ್ರೆಸ್‌ ಪಕ್ಷ ಅಧಿ​ಕಾರದಲ್ಲಿದೆ. ಪಕ್ಷವನ್ನು ಬಲಿ​ಷ್ಠ​ವಾಗಿ ಸಂಘ​ಟಿ​ಸಲು ಮೂರು ಪಕ್ಷ​ಗಳಿಗೂ ಗ್ರಾಪಂ ಚುನಾ​ವಣೆ ಸವಾ​ಲಾಗಿದೆ. ಚುನಾ​ವ​ಣೆ​ಯಲ್ಲಿ ತಮ್ಮ ಬೆಂಬ​ಲಿಗ ಅಭ್ಯ​ರ್ಥಿ​ಗ​ಳನ್ನು ಅತಿ ಹೆಚ್ಚಿನ ಸಂಖ್ಯೆ​ಯಲ್ಲಿ ಗೆಲ್ಲಿ​ಸಿ​ದರೆ ಮುಂದಿನ ದಿನ​ಗ​ಳಲ್ಲಿ ನಡೆ​ಯುವ ದೊಡ್ಡ ಚುನಾ​ವ​ಣೆ​ಗ​ಳನ್ನು ಗೆಲ್ಲು​ವುದು ಸುಲ​ಭ​ವಾ​ಗ​ಲಿದೆ ಎನ್ನು​ವುದು ರಾಜ​ಕೀಯ ಪಕ್ಷ​ದ​ವರ ಲೆಕ್ಕಾ​ಚಾ​ರ​ವಾ​ಗಿದೆ.

ಚುರು​ಕಾದ ಕಾಂಗ್ರೆಸ್‌ ಪಡೆ:

ಜಿಲ್ಲೆಯ ಸ್ಥಳೀಯ ಸಂಸ್ಥೆ​ಗ​ಳಲ್ಲಿ ಅಧಿ​ಕಾ​ರ​ದ​ಲ್ಲಿ​ರುವ ಕಾಂಗ್ರೆಸ್‌ ಪಕ್ಷ ಗ್ರಾಪಂ ಚುನಾ​ವಣೆ ಘೋಷ​ಣೆ​ಯಾ​ಗು​ತ್ತಿ​ದ್ದಂತೆ ಮತ್ತಷ್ಟುಚುರು​ಕಾ​ಗಿದೆ. ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ ಮೂರ್ನಾಲ್ಕು ತಿಂಗಳ ಹಿಂದೆಯೇ ಚುನಾವಣೆಗೆ ಸಿದ್ಧತೆ ಆರಂಭಿ​ಸಿತ್ತು. ಪಕ್ಷದ ಮುಖಂಡರು ಗ್ರಾಮಾಂತರದಲ್ಲಿರುವ ಬೆಂಬಲಿಗರ ಮನೆಗೆ ಎಡತಾಕಿ, ಬೇರೆ ಪಕ್ಷದ ಕಡೆಗೆ ವಾಲದಂತೆ ಮನವೊಲಿಸಿದ್ದಾರೆ.

ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ಇರಲ್ಲ: ರೇವಣ್ಣಗೆ ಟಾಂಗ್ ..

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ರಾಜ್ಯ​ಪ್ರ​ವಾಸ ಕೈಗೊ​ಳ್ಳುವ ಹಿನ್ನೆ​ಲೆ​ಯಲ್ಲಿ ಅವರ ಅನು​ಪ​ಸ್ಥಿ​ತಿ​ಯಲ್ಲಿ ಸಂಸದ ಡಿ.ಕೆ.​ಸು​ರೇಶ್‌, ಮಾಜಿ ಶಾಸ​ಕ​ರಾದ ಎಚ್‌.ಸಿ.​ಬಾ​ಲ​ಕೃಷ್ಣ, ವಿಧಾನ ಪರಿಷತ್‌ ಸದ​ಸ್ಯ​ರಾದ ಸಿ.ಎಂ.ಲಿಂಗಪ್ಪ, ಎಸ್‌.ರ​ವಿ, ಎಚ್‌.ಎಂ.​ರೇ​ವಣ್ಣ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಅಧ್ಯಕ್ಷ ಎಚ್‌.ಎನ್‌.ಅ​ಶೋಕ್‌ ಚುನಾ​ವಣೆ ಜವಾ​ಬ್ದಾರಿ ನಿರ್ವ​ಹಿ​ಸ​ಲಿ​ದ್ದಾರೆ. ಇವ​ರೆ​ಲ್ಲರು ಹಳ್ಳಿ​ಗ​ಳಲ್ಲಿ ಬೆಳ​ಗ್ಗೆ​ಯಿಂದ ಸಂಜೆ​ವ​ರೆಗೆ ಸುತ್ತಾ​ಡುತ್ತಾ ವಾತಾ​ವ​ರ​ಣ​ವನ್ನು ಸೂಕ್ಷ್ಮ​ವಾಗಿ ಅರಿ​ಯು​ತ್ತಿ​ದ್ದಾರೆ.

ಜೆಡಿ​ಎಸ್‌ನಿಂದ ಬಿರು​ಸಿ​ನ ತಯಾರಿ :

ಗ್ರಾಪಂ ಚುನಾ​ವ​ಣೆ​ಯನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸಿ​ರುವ ಜೆಡಿ​ಎಸ್‌ ಬೇರು ಮಟ್ಟ​ದಲ್ಲಿ ಪಕ್ಷ​ವನ್ನು ಭದ್ರ ಪಡಿ​ಸಿ​ಕೊ​ಳ್ಳು​ವು​ದಕ್ಕೆ ಸಿದ್ಧತೆ ನಡೆ​ಸಿದೆ. ಈಗಾ​ಗಲೇ ಹೋಬ​ಳಿ​ವಾರು ಪಕ್ಷದ ಮುಖಂಡರ ಸಭೆ ನಡೆ​ಸಿ​ದ್ದ ಮಾಜಿ ಸಿಎಂ ಕುಮಾ​ರ​ಸ್ವಾಮಿ ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಗ್ರಾಮ ಸಂಚಾರ ನಡೆಸು​ತ್ತಿ​ದ್ದಾರೆ. ಕಳೆದ ಎರಡು ವಾರಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೆ ಚಾಲನೆ ನೀಡುವ ನೆಪ​ದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಜನ​ಸಂಪರ್ಕ ಸಭೆಯ ಹೆಸ​ರಿ​ನಲ್ಲಿ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

ಶಾಸಕ ಎ.ಮಂಜು​ನಾಥ್‌ ಹಾಗೂ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ರಾಮ​ನ​ಗರ ಹಾಗೂ ಕನ​ಕ​ಪುರ ಕ್ಷೇತ್ರದ ಗ್ರಾಮೀಣ ಭಾಗ​ದಲ್ಲಿ ಸುತ್ತಾಡಿ ಯುವ​ಕ​ರನ್ನು ಪಕ್ಷದ ಕಡೆ ಸೆಳೆ​ಯುವ ಪ್ರಯತ್ನ ಮಾಡು​ತ್ತಿ​ದ್ದಾ​ರೆ.

ನಿಧಾ​ನ​ಗತಿ​ಯಲ್ಲಿ ಕಮಲ:

ಬಿಜೆ​ಪಿ​ಯಿಂದ ಜಿಲ್ಲೆ​ಯಲ್ಲಿ ಸಿ.ಪಿ.​ಯೋ​ಗೇ​ಶ್ವರ್‌, ಅ.ದೇ​ವೇ​ಗೌ​ಡ ಹಾಗೂ ಪುಟ್ಟಣ್ಣ ವಿಧಾನ ಪರಿ​ಷತ್‌ ಸದ​ಸ್ಯರು. ಉಪ​ಮು​ಖ್ಯ​ಮಂತ್ರಿ ಅಶ್ವತ್ಥ ನಾರಾ​ಯಣ ಜಿಲ್ಲಾ ಉಸ್ತು​ವಾರಿ ಸಚಿ​ವರೂ ಆಗಿ​ದ್ದಾರೆ. ಇವ​ರೆ​ಲ್ಲರೂ ಗ್ರಾಪಂ ಚುನಾ​ವ​ಣೆ​ಯಲ್ಲಿ ಅಧಿಕ ಸ್ಥಾನ​ಗ​ಳಲ್ಲಿ ಗೆಲ್ಲು​ವು​ದಕ್ಕೆ ಪಣ ತೊಟ್ಟಿ​ರುವ ಮಾತು​ಗ​ಳ​ನ್ನಾ​ಡು​ತ್ತಿ​ದ್ದಾರೆ. ಆದರೆ, ಜಿಲ್ಲೆಯ ಯಾವ ತಾಲೂ​ಕು​ಗ​ಳ​ಲ್ಲಿಯೂ ಬಿಜೆಪಿ ಹವಾ ಕಂಡು ಬರು​ತ್ತಿಲ್ಲ. ಬಿಜೆ​ಪಿಯಿಂದ ಗ್ರಾಪಂ ಚುನಾ​ವ​ಣೆಗೆ ಯಾವುದೇ ತಯಾರಿ ನಡೆ​ದಿ​ರ​ಲಿಲ್ಲ. ಉಪ​ಮು​ಖ್ಯ​ಮಂತ್ರಿ ಅಶ್ವತ್ಥನಾರಾ​ಯಣ ಅವರು ತಮ್ಮ ತಂಡ​ದೊಂದಿಗೆ ಚನ್ನ​ಪ​ಟ್ಟಣ ಹಾಗೂ ಮಾಗಡಿ ವಿಧಾ​ನಸಭಾ ಕ್ಷೇತ್ರ​ದಲ್ಲಿ ಗ್ರಾಮ ಸ್ವರಾಜ್ಯ ಸಮಾ​ವೇಶದ ಮೂಲಕ ಕಾರ್ಯ​ಕ​ರ್ತ​ರಿಗೆ ಟಾನಿಕ್‌ ನೀಡಿ ಹೋಗಿ​ದ್ದಾರೆ.

ಚುನಾ​ವಣೆ ಸನಿ​ಹ​ದ​ಲ್ಲಿ​ರು​ವು​ದ​ರಿಂದ ರಾಜ​ಕೀಯ ಪಕ್ಷ​ಗಳ ನಾಯ​ಕರು ಬೆಳ​ಗ್ಗೆ​ಯಿಂದ ಸಂಜೆ​ವ​ರೆಗಿ​ನ ಗ್ರಾಮ ಸಂಚಾರದಲ್ಲಿ ಸ್ಥಳೀಯ ಮುಖಂಡ​ರೊ​ಡನೆ ಚರ್ಚಿ​ಸುತ್ತಾ ಗೆಲ್ಲುವ ಅಭ್ಯ​ರ್ಥಿ​ಗ​ಳಿ​ಗಾಗಿ ಹುಡು​ಕಾಟ ನಡೆ​ಸು​ತ್ತಿ​ದ್ದಾರೆ.

Follow Us:
Download App:
  • android
  • ios