ದಸರಾ ಹಬ್ಬದ ದಿನವೇ ಬೃಹತ್ ಗಾತ್ರದ ಹಾವೊಂದು ಪತ್ತೆಯಾಗಿದೆ...
ಕೊಡಗು (ಅ.26): ದಸರಾ ಹಬ್ಬದ ದಿನ ಮನೆಯಂಗಳಕ್ಕೆ ಬುಸ್ ಬುಸ್ ನಾಗಪ್ಪ ಬಂದಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊಡಗಿನ ಕುಶಾಲನಗರದ ಶ್ರೀಧರ್ ಎಂಬುವವರ ಮನೆಯಂಗಳಕ್ಕೆ ನಾಗರಹಾವು ಬಂದಿದ್ದು, ಹಾವನ್ನು ಸೆರೆ ಹಿಡಿಯಲಾಗಿದೆ.
ಮನೆಯಂಗಳದಲ್ಲಿದ್ದ ಹಾವನ್ನು ಉರಗ ತಜ್ಞ ಶಾಜಿ ಸೆರೆ ಹಿಡಿದಿದ್ದಾರೆ. ಸುಮಾರು 6 ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.
ಈ ದ್ವೀಪಕ್ಕೆ ಹೋದವರು ಬದುಕಿ ಬರೋ ಚಾನ್ಸೇ ಇಲ್ಲ! ...
ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿರುವ ಶ್ರೀಧರ್ ಅವರ ಮನೆಯ ಮುಂದೆ ಬಂದ ವೇಳೆ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಕೊಡಗಿನಲ್ಲಿ ಈ ಹಿಂದೆಯೂ ಕೂಡ ಅನೇಕ ಬಾರಿ ಬೃಹತ್ ಗಾತ್ರದ ಹಾವುಗಳು ಪತ್ತೆಯಾಗಿದ್ದವು. ಮನೆಯ ಒಳಗೂ ಸಹ ಹಾವುಗಳು ಪ್ರತ್ಯಕ್ಷವಾಗುವುದು ಇಲ್ಲಿ ಸಾಮಾನ್ಯ ವಿಚಾರವಾಗಿದೆ.
