Asianet Suvarna News Asianet Suvarna News

ಕಾಂಗ್ರೆಸ್‌, ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಡೆದಾಟ

ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯಲ್ಲಿ ನಡೆದ ಘಟನೆ| ಅರ್ಧ ಗಂಟೆ ಮತ​ದಾ​ನ ಸ್ಥಗಿ​ತ​| ಬಿಜೆಪಿ ಜಿಪಂ ಸದಸ್ಯ ಮತದಾನ ಮಾಡಲು ತೆರಳಿದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ಷೇಪ| 

Clashes Between Congress BJP During Grama Panchayat Election grg
Author
Bengaluru, First Published Dec 28, 2020, 9:33 AM IST | Last Updated Dec 28, 2020, 10:01 AM IST

ರೋಣ(ಡಿ.28): ಮತದಾನ ವಿಷಯಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯಲ್ಲಿ ಭಾನುವಾರ ಬೆಳಗ್ಗೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಜಿಪಂ ಸದಸ್ಯ ಶಿವಕುಮಾರ್‌ ನೀಲಗುಂದ ಗಾಯಗೊಂಡಿದ್ದಾರೆ. 

ಈ ವೇಳೆ ಲಘು ಲಾಠಿ ಪ್ರಹಾರ ಮಾಡಿ, ಘಟ​ನೆ​ಯಲ್ಲಿ ಪಾಲ್ಗೊಂಡಿದ್ದ ಹಲ​ವ​ರನ್ನು ಪೊಲೀ​ಸರು ಬಂಧಿ​ಸಿ​ದ್ದಾರೆ. ಅರ್ಧ ಗಂಟೆ ಮತ​ದಾ​ನ ಸ್ಥಗಿ​ತ​ಗೊ​ಳಿಸ​ಲಾಗಿತ್ತು. 

ಗ್ರಾಮ ಪಂಚಾಯ್ತಿ ಚುನಾವಣೆ: ಒಂದಕ್ಕೆ ಬಟನ್‌ ಒತ್ತಿದ್ರೆ ಇಬ್ಬರಿಗೆ ಮತ

ಬಿಜೆಪಿ ಜಿಪಂ ಸದಸ್ಯ ಮತದಾನ ಮಾಡಲು ತೆರಳಿದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತ​ಪ​ಡಿಸಿ ವಾಗ್ವಾದ ನಡೆಸಿದರು. ಆ ಬಳಿಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios