Asianet Suvarna News Asianet Suvarna News

ಕೋಲಾರ: ಪಡಿತರ ಪಡೆಯಲು ಚಾಂಪಲ್ಲಿ ಗ್ರಾಮಸ್ಥರು ಪರದಾಟ!

ಪಡಿತರ ರಾಗಿಯನ್ನು ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದ ವೇಳೆ ಸಾರ್ವಜನಿಕರೇ ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಾಂಪಲ್ಲಿ ಗ್ರಾಮದಲ್ಲಿ ಫೆಬ್ರವರಿ ತಿಂಗಳಲ್ಲಿ ಘಟನೆ ನಡೆದಿತ್ತು. 

Champally villagers troubled to get ration at kolar rav
Author
First Published Apr 1, 2024, 10:30 PM IST

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಏ.1): ಪಡಿತರ ರಾಗಿಯನ್ನು ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದ ವೇಳೆ ಸಾರ್ವಜನಿಕರೇ ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಾಂಪಲ್ಲಿ ಗ್ರಾಮದಲ್ಲಿ ಫೆಬ್ರವರಿ ತಿಂಗಳಲ್ಲಿ ಘಟನೆ ನಡೆದಿತ್ತು. 

ಘಟನೆ ಕುರಿತು ಗ್ರಾಮಸ್ಥರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲು ಮಾಡಿದ್ದರು.ದೂರು ದಾಖಲಾದ ಬಳಿಕ ಆಹಾರ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಕಾಲ ಸುಮ್ಮನಿದ್ದು ಪುನಃ ಮೊದಲು ಪಡಿತರ ನೀಡ್ತಿದ್ದ ವ್ಯಕ್ತಿಗೆ ವಿತರಣೆ ಮಾಡಲು ಆಹಾರ ಇಲಾಖೆಯವರು ಅನುಮತಿ ನೀಡಿದ್ದು ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದ ಈ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆಗೂ ಬಹಿಷ್ಕಾರ!

ಎರಡು ದಿನಗಳ ಕಾಲ ವಿತರಣೆ ಮಾಡಿದ ಬಳಿಕ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರಿಗೆ ಹೇಗೆ ನೀವು ಮತ್ತೆ ವಿತರಣೆ ಮಾಡಲು ಅನುಮತಿ ನೀಡಿದಿರಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಬಳಿಕ ಗ್ರಾಮದಲ್ಲಿ ವಿತರಣೆಯನ್ನು ಸ್ಥಗಿತಗೊಳಿ ಚಾಂಪಲ್ಲಿ ಗ್ರಾಮದಿಂದ ಸುಮಾರು ನಾಲ್ಕೈದು ದೂರದಲ್ಲಿರುವ ದೇವಲಪಲ್ಲಿ ಅನ್ನೋ ಗ್ರಾಮದ ಪಡಿತರ ವಿತರಣೆ ಕೇಂದ್ರಕ್ಕೆ ಪಡಿತರ ವಿತರಣೆ ಮಾಡಲು ಅನುಮತಿ ನೀಡಿದ್ದಾರೆ.

ಮಹಿಳೆಯರು, ವೃದ್ಧರು ಬಿರುಬಿಸಿಲಿನಲ್ಲಿ ದೂರದ ಪಡಿತರ ಕೆಂದ್ರಕ್ಕೆ ತೆರಳಿ ತಮ್ಮ ಪಡಿತರ ಪಡೆದು ವಾಪಸ್ಸು ಮನೆಗೆ ಬರುವಷ್ಟರಲ್ಲಿ ಸಾಕು ಸಾಕಾಗ್ತಿದೆ.ಈಗಾಗಿ ಆಹಾರ ಇಲಾಖೆಯ ಅಧಿಕಾರಿಗಳ ನಡೆಯ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕ್ತಿದ್ದಾರೆ. ಅಕ್ರಮವಾಗಿ ಪಡಿತರ ಮಾರಾಟ ಮಾಡ್ತಿದ್ದವರನ್ನು ತೆಗೆದು ಮತ್ತೊಬ್ಬರನ್ನು ನೇಮಕ ಮಾಡಿ ಪಡಿತರ ವಿತರಣೆ ಮಾಡುವ ಬದಲು,ಈ ರೀತಿ ಮತ್ತೊಂದು ಗ್ರಾಮಕ್ಕೆ ಹೋಗಿ ಅಂತ ಆದೇಶ ಮಾಡಿರುವ ಅಧಿಕಾರಿಗಳ ನಡೆಯ ಬಗ್ಗೆ ನಮಗೆ ಅನುಮಾನ ಕಾಡುತ್ತಿದೆ, ಇದರ ಹಿಂದೆ ಅಧಿಕಾರಿಗಳೇ ಶಾಮೀಳಾಗಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ, ಅಕ್ರಮವಾಗಿ ಪಡಿತರ ರಾಗಿ ಸಾಗಾಟ ಮಾಡುತ್ತಿದ್ದನ್ನು ಸಾರ್ವಜನಿಕರೇ ಹಿಡಿದುಕೊಟ್ಟುರೂ ಅಧಿಕಾರಿಗಳು ಯಾಕೆ ಪುನಃ ಅವರಿಗೆ ಪಡಿತರ ಅಕ್ಕಿ ವಿತರಣೆ ಮಾಡಲು ಕೊಟ್ಟಿದ್ದಾರೆ. 

Watch Video: ಹೇಗಿದೆ ಕೋಲಾರ ಮತದಾರರ ಲೆಕ್ಕಾಚಾರ..? ಅಸೆಂಬ್ಲಿಯಲ್ಲಿನ ಹೊಂದಾಣಿಕೆ ಲೋಕಸಭೆ ಹೊತ್ತಿಗೆ ಮಾಯವಾಗಿದ್ದೇಕೆ?

ಗ್ರಾಮಸ್ಥರಿಗೆ ಮಾಹಿತಿ ನೀಡದೇ ಏಕಾಏಕಿ ಚಾಂಪಲ್ಲಿಯಿಂದ ದೇವಳಪಲ್ಲಿಗೆ ವರ್ಗಾವಣೆ ಮಾಡಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow Us:
Download App:
  • android
  • ios