Asianet Suvarna News Asianet Suvarna News

ಬೆಂಕಿ​ಗಾ​ಹು​ತಿ​ಯಾದ ಬಸ್‌ : ಸಂಪೂರ್ಣ ಭಸ್ಮ

ಬಸ್ಸೊಂದು ಬೆಂಕಿಗೆ ಆಹುತಿಯಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದುರಂತವಾಗಿದೆ.

Bus Catches Fire In Ramanagara
Author
Bengaluru, First Published Dec 13, 2019, 10:18 AM IST

ರಾಮನಗರ [ಡಿ.13]:  ತಾಲೂ​ಕಿನ ಪಾದ​ರ​ಹ​ಳ್ಳಿಯ ಶಿಲ್ಹಾಂದರ ರೆಸಾರ್ಟ್‌ ಬಳಿ ಪ್ರವಾ​ಸಿ​ಗ​ರನ್ನು ಕರೆ ತಂದಿದ್ದ ಖಾಸಗಿ ಬಸ್ಸೊಂದು ಕ್ಷಣಾ​ರ್ಧ​ದಲ್ಲಿ ಬೆಂಕಿ​ಗಾ​ಹು​ತಿ​ಯಾಗಿರುವ ಘಟನೆ ನಡೆ​ದಿದೆ.

ರೆಸಾರ್ಟ್‌ ವೀಕ್ಷ​ಣೆಗೆ ಆಗ​ಮಿ​ಸಿದ್ದ ಎಲ್ಲಾ ಪ್ರವಾ​ಸಿ​ಗರು ಬಸ್ಸಿ​ನಿಂದ ಇಳಿದು ತೆರ​ಳಿದ ನಂತರ ದುರ್ಘ​ಟನೆ ಸಂಭ​ವಿ​ಸಿದೆ. ಯಾವುದೇ ಪ್ರಾಣ ಹಾನಿ​ಯಾ​ಗಿಲ್ಲ.

ಎಸ್‌ಆರ್‌ಎಸ್‌ ಕಂಪ​ನಿಗೆ ಸೇರಿದ ಬಸ್‌ ಬೆಂಗ​ಳೂ​ರಿ​ನಿಂದ ಪಾದ​ರ​ಹ​ಳ್ಳಿಯ ಶಿಲ್ಹಾಂದರ ರೆಸಾರ್ಟ್‌ಗೆ ಬೆಳಿಗ್ಗೆ 11 ಗಂಟೆಗೆ ಪ್ರವಾ​ಸಿ​ಗ​ರನ್ನು ಹೊತ್ತು ಬಂದಿದೆ. ಪ್ರಯಾ​ಣಿ​ಕರು ಬಸ್ಸಿ​ನಿಂದ ಇಳಿದು ರೆಸಾರ್ಟ್‌ನೊಳಗೆ ಪ್ರವೇ​ಶಿ​ಸಿ​ದ್ದಾರೆ. ಇತ್ತ ಚಾಲಕ ಮತ್ತು ನಿರ್ವಾ​ಹಕ ಎಸಿ ಆನ್‌ನಲ್ಲಿಯೇ ಇಟ್ಟು ಬಸ್ಸಿ​ನಿಂದ ಕೆಳ​ಗಿ​ಳಿ​ದಿ​ದ್ದಾ​ರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಧ್ಯಾ​ಹ್ನದ ವೇಳೆಗೆ ಬಸ್ಸಿ​ನಲ್ಲಿ ಶಾರ್ಟ್‌ ಸಕ್ರ್ಯೂಟ್‌ ಉಂಟಾಗಿ ಬಸ್ಸಿ​ನಲ್ಲಿ ಬೆಂಕಿ ಕಾಣಿ​ಸಿ​ಕೊಂಡಿದೆ. ಕ್ಷಣಾ​ರ್ಧ​ದಲ್ಲಿ ಬೆಂಕಿಯ ಜ್ವಾಲೆ ಇಡೀ ಬಸ್ಸನ್ನು ಆವ​ರಿ​ಸಿದೆ. ಯಾರು ಕೂಡ ಬಸ್ಸಿನ ಬಳಿ​ಗೆ ತೆರ​ಳು​ವ ಧೈರ್ಯ ಮಾಡ​ಲಿಲ್ಲ. ಪ್ರಯಾ​ಣಿ​ಕರಿಗೆ ಸೇರಿದ ಕೆಲವು ವಸ್ತು​ಗಳು ಸುಟ್ಟು ಕರ​ಕ​ಲಾ​ಗಿ​ತ್ತು.

ಘಟನೆ ವಿಷ​ಯ ತಿಳಿಯುತ್ತಿ​ದ್ದಂತೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಆದರೆ, ಅಷ್ಟ​ರೊ​ಳ​ಗೆ ಬಸ್‌ ಸಂಪೂ​ರ್ಣ​ವಾಗಿ ಭಸ್ಮ​ಗೊಂಡಿತ್ತು. ಸಬ್‌ ಇನ್ಸ್‌ ಪೆಕ್ಟರ್‌ ಲಕ್ಷ್ಮಣ್‌ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆ​ಸಿ​ದರು. ಈ ಸಂಬಂಧ ರಾಮ​ನಗರ ಗ್ರಾಮಾಂತರ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.

Follow Us:
Download App:
  • android
  • ios