ಬಿಜೆಪಿ ಶಾಸಕರೋರ್ವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಜನ್ಮ ದಿನ ಆಚರಣೆ ವೇಳೆ ಎಲ್ಲವನ್ನು ಮರೆತು ಎಂಜಾಯ್ ಮಾಡಿದ್ದಾರೆ. 

ಧಾರವಾಡ (ನ.17): ಶಾಸಕರಿಂದಲೇ ಕೊರೊನಾ ರೂಲ್ಸ್ ಬ್ರೆಕ್ ಆಗಿದ್ದು, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿಂದ ಅದ್ದೂರಿಯಾಗಿ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ತಮ್ಮ ಹುಟ್ಟಿದ ಹಬ್ಬವನ್ನ ತಮ್ಮ ನಿವಾಸದಲ್ಲಿಯೇ ಆಚರಣೆ ಮಾಡಿಕೊಂಡಿದ್ದಾರೆ. ಈ ವೇಳೆ ಶಾಸಕ ಅಮೃತ ದೇಸಾಯಿ ಮಾಸ್ಕ್ ಹಾಗೂ ಸೋಶಿಯಲ್ ಡಿಸ್ಟೆನ್ಸ್ ಎಲ್ಲವನ್ನೂ ಮರೆತಿದ್ದಾರೆ. 

ಬೈ ಎಲೆಕ್ಷನ್: ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ 3 ಹೆಸರು ಶಿಫಾರಸು..! .

ಕೊರೋನಾ ಸಂದರ್ಭದಲ್ಲಿಯೂ ಶಾಸಕ ಅಮೃತ ದೇಸಾಯಿ ಈ ರೀತಿ ನಡೆದುಕೊಂಡಿದ್ದು, ಜನರಿಗೊಂದು ನ್ಯಾಯ, ಶಾಸಕರಿಗೊಂದು ನ್ಯಾಯವೇ ಎನ್ನುವ ಪ್ರಶ್ನೆ ಮೂಡಿದೆ.

ಜನರು ಇದೆ ತಪ್ಪು ಮಾಡಿದರೆ ಅವರಿಗೆ ಪೈನ್ ಹಾಕುತ್ತಾರೆ. ಆದರೆ ಜನಪ್ರತಿನಿಧಿಗಳು ತಪ್ಪು ಮಾಡಿದರೆ ಕೆಳೋರು ಯಾರು ಎಂಬ ಪ್ರಶ್ನೆ ಮೂಡಿದೆ.