ಜಯನಗರ ಕ್ಷೇತ್ರಕ್ಕೆ ಅನುದಾನ ತಡೆ ಹಿಡಿದಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಟೀಕೆಗೆ ಪ್ರತಿಯಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಯ ಬಗ್ಗೆ ಶಾಸಕರ ಟೀಕೆಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು (ನ.20): ರಾಜಧಾನಿಯ ಜಯನಗರ ವಿಧಾನಸಭಾ ಕ್ಷೇತ್ರದ ಹಣ ತಡೆಹಿಡಿಯಲಾಗಿದೆ ಎಂಬ ವಿವಾದದ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಅವರು ಸಾರ್ವಜನಿಕಗಾಗಿ ಮಾಡಿದ ಒಂದು ಟೀಕೆಯ ಕಾರಣದಿಂದಘ ಡಿಸ್ಕ್ರಿಷನರಿ ಕೋಟಾದಡಿ ಹಣವನ್ನು ತಡೆಹಿಡಿಯಲಾಗಿದೆ ಎಂದು ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ನಾನು ಬೆಂಗಳೂರಿಗೆ ಸಚಿವನಾದ ನಂತರ ನಗರವು ಹದಗೆಟ್ಟಿದೆ ಎಂದು ಅವರು ಹೇಳಿದ್ದರಿಂದ ನಾನು ಉದ್ದೇಶಪೂರ್ವಕವಾಗಿ ಜಯನಗರಕ್ಕೆ ಹಣ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರಿಗೆ ತಿಳಿಸಿದ್ದಾರೆ. ಜಯನಗರ ಕ್ಷೇತ್ರದ ಅಭಿವೃದ್ಧಿಗೆ ಹಣದ ಕೊರತೆ, ಹಣ ತಡೆಹಿಡಿಯುವ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯ ಕೇಳಿದಾಗ ಅವರ ಹೇಳಿಕೆ ಹೊರಬಿದ್ದಿದೆ.

ನಾನು ಬೆಂಗಳೂರಿನ ರಾಜರಾಜೇಶ್ವರಿನಗರ, ಪದ್ಮನಾಭನಗರ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿ ಕ್ಷೇತ್ರಗಳಿಗೆ (ಎಲ್ಲವೂ ಬಿಜೆಪಿ ಶಾಸಕರು ಪ್ರತಿನಿಧಿಸುವ) ಹಣ ನೀಡಿದ್ದೇನೆ. ಇದು ಉಪಮುಖ್ಯಮಂತ್ರಿಗಳಿಗೆ ನೀಡಿರುವ ವಿವೇಚನೆಯ ಅನುದಾನ. ನಾನು ಸಚಿವನಾದ ಬಳಿಕ ಬೆಂಗಳೂರು ಹದಗೆಟ್ಟಿದೆ ಎಂದು ಶಾಸಕ ಸಿಕೆ ರಾಮಮೂರ್ತಿ ಹೇಳುತ್ತಿದ್ದಾರೆ. ಆ ಅಧಃಪತನ ಏನೆಂದು ನೋಡೋಣ ಎಂದು ಶ್ರೀ ಶಿವಕುಮಾರ್ ಹೇಳಿದರು.

'ನಾನು ಬೇಕು ಅಂತಲೇ ಜಯನಗರ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ನಾನು ಬೆಂಗಳೂರು ಮಂತ್ರಿ ಆದ್ಮೇಲೆ ಬೆಂಗಳೂರು ಅದೋಗತಿ ಆಗಿದೆ ಎಂದಿದ್ದಾರೆ. ನಾನು ಆರ್ ಆರ್ ನಗರ, ಅಶೋಕ್ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೀನಿ. ಡಿಸಿಎಂ ಅವರಿಗೆ ಇರುವ ಗ್ರ್ಯಾಂಟ್ ಅದು. ಅದೇನೂ ಅದೋಗತಿ ಆಗಿದೆ ಅಂತ ನೋಡುತ್ತೇನೆ ಎಂಧು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಬೆಂಗಳೂರಿನ 'ಬಿಲಿಯನೇರ್‌ ಸ್ಟ್ರೀಟ್‌', 67.5 ಕೋಟಿಗೆ ಸೇಲ್‌ ಆಗಿದೆ ಇಲ್ಲಿನ ಒಂದು ಸೈಟ್‌!

ಅನುದಾನ ಸಿಕ್ಕಿಲ್ಲ ಎಂಬ ವಿಜಯಪುರ ಶಾಸಕ ಗವಿಯಪ್ಪ ಹೇಳಿಕೆ ಬಗ್ಗೆ ಮಾತನಾಡಿದ ಡಿಸಿಎಂ, ' ಕೆಲವರು ಅವರ ಅವರ ಲೆಕ್ಕಾಚಾರ ಹೇಳಬಹುದು ಅಷ್ಟೇ. ಅದಕ್ಕೆ ಪ್ರಕ್ರಿಯೆ ಇದೆ. ನೂರು ಕೋಟಿ ಕೇಳುತ್ತಾರೆ, ಹಾಗಂತ ನೂರು‌ಕೋಟಿ ಕೋಡೋದಕ್ಕೆ ಆಗುತ್ತಾ? ನೂರು ಐವತ್ತು ಕೋಟಿ ಕೋಡೋಕೆ ಆಗಲ್ಲ. ಒಂದೊಂದು ಕ್ಷೇತ್ರಕ್ಕೆ ಇಷ್ಟು ಕೊಡಬೇಕು ಅಂತ ಇದೆ, ಅದನ್ನ ಕೊಡುತ್ತೇವೆ ನಾವು ಎಂದಿದ್ದಾರೆ.

Exit Polls: ಮಹಾಯುತಿಗೆ ಮಹಾರಾಷ್ಟ್ರ, ಬಿಜೆಪಿಗೆ ಜಾರ್ಖಂಡ್‌ ಎಂದ ಚುನಾವಣೋತ್ತರ ಸಮೀಕ್ಷೆ