ರಾಜ್ಯ ರಾಜಕೀಯ ದಿನದಿನವೂ ಹೊಸ ಬೆಳವಣಿಗೆ ಬಿಜೆಪಿಯಲ್ಲಿ ತಾರಕಕ್ಕೇರಿದ ಮುಖ್ಯಮಂತ್ರಿ ಬದಲಾವಣೆ ವಿಚಾರ ಈ ಎಲ್ಲದರ ನಡುವೆ ಇಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಗುಂಡ್ಲುಪೇಟೆ (ಜು.22): ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಬಿಜೆಪಿಯ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಮುಖಂಡ ಎಚ್‌ ಎಂ ಗಣೇಶ್ ಪ್ರಸಾದ್, ಚಾಮುಲ್ ಅಧ್ಯಕ್ಷ ನಂಜುಂಡ ಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮದ ಬಿಜೆಪಿ ಮುಖಂಡರಾದ ಚಂದ್ರು ಶಿವಮೂರ್ತಿ ಎಂ.ಸಿ ಸ್ವಾಮಿ , ಮಾಣಿಕ್ಯ, ಬಸವರಾಜು, ಬಿ. ಮಹೇಶ್, ರಾಜಪ್ಪ ಮತ್ತವರ ಬೆಂಬಲಿಗರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದರು.

ನಿರಂತರ ಕಮಲ ಪಾಳಯ ಸಂಪರ್ಕ : ಕೊಳ್ಳೇಗಾಲ ಶಾಸಕ ಶೀಘ್ರ ಬಿಜೆಪಿ ಸೇರ್ಪಡೆ?

ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಮುಖಂಡರನ್ನು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಪಕ್ಷದ ಶಲ್ಯ ಹಾಕುವ ಮೂಲಕ ಬರಮಾಡಿಕೊಂಡರು.

ಈ ಸಮಯದಲ್ಲಿ ಹಲವು ಮುಖಂಡರು, ಕೈ ನಾಯರು ಸ್ಥಳದಲ್ಲಿ ಹಾಜರಿದ್ದರು.