Asianet Suvarna News Asianet Suvarna News

ಜೆಡಿಎಸ್-ಬಿಜೆಪಿಯ ಹವಾ ಜೋರು : ನಡುವೆ ಕ್ಷೇತ್ರದಲ್ಲಿ ಕಾಣದ ‘ಕೈ’

ಬಿಜೆಪಿ ಜೆಡಿಎಸ್ ಬಿರುಸಿನ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್ ಮಾತ್ರ ಕಾಣದ ಕೈ ನಂತಾಗಿದೆ. ಚುನಾವಣಾ ಕಣ ಸಾಕಷ್ಟು ರಂಗೇರಿದೆ. 

BJP JDS Candidate Campaign for Teachers Constituency Election in Ramanagara snr
Author
Bengaluru, First Published Oct 7, 2020, 11:50 AM IST

ವರದಿ : ಎಂ.ಅ​ಫ್ರೋಜ್ ಖಾನ್‌
ರಾಮ​ನ​ಗರ (ಅ.07):
ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ​ದಿಂದ ವಿಧಾನ ಪರಿ​ಷತ್‌ ಗೆ ನಡೆ​ಯಲಿರುವ ಚುನಾ​ವ​ಣೆ​ಯಲ್ಲಿ ಬಿಜೆಪಿ ಮತ್ತು ಜೆಡಿ​ಎಸ್‌ ಬೆಂಬ​ಲಿತ ಅಭ್ಯ​ರ್ಥಿ​ಗಳು ಬಿರು​ಸಿನ ಪ್ರಚಾರ ನಡೆ​ಸಿ​ದ್ದರೆ, ಕಾಂಗ್ರೆಸ್‌ ಬೆಂಬ​ಲಿತ ಅಭ್ಯ​ರ್ಥಿ ಈವ​ರೆಗೂ ಕ್ಷೇತ್ರ​ದಲ್ಲಿ ಕಾಣಿ​ಸಿ​ಕೊಂಡಿಯೇ ಇಲ್ಲ.

ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ​ದಿಂದ ಹ್ಯಾಟ್ರಿಕ್‌ ಗೆಲುವು ಸಾಧಿ​ಸಿ​ರುವ ಪುಟ್ಟಣ್ಣ ಬಿಜೆಪಿ ಅಭ್ಯರ್ಥಿ. ಬೆಂಗ​ಳೂರು ವಕೀ​ಲರ ಸಂಘದ ಅಧ್ಯಕ್ಷ ಎ.ಪಿ.​ರಂಗ​ನಾಥ ಜೆಡಿ​ಎಸ್‌, ಪ್ರವೀಣ್‌ ಪೀಟರ್‌ ಕಾಂಗ್ರೆಸ್‌ ಹಾಗೂ ಚಂದ್ರ​ಶೇ​ಖರ್‌ ವಿ.ಸ್ಥಾ​ವರ ಮಠ ಜೆಡಿ​ಯು ಅಭ್ಯ​ರ್ಥಿ​ಗ​ಳಾಗಿ ಕಣ​ಕ್ಕಿ​ಳಿ​ಯು​ತ್ತಿದ್ದಾ​ರೆ.

ಬಿಜೆಪಿ, ಜೆಡಿಎಸ್‌ ಪ್ರಚಾರ ಜೋರು

ಬಿಜೆಪಿ ಹಾಗೂ ಜೆಡಿ​ಎಸ್‌ ಅಭ್ಯ​ರ್ಥಿ​ಗಳು ಕ್ಷೇತ್ರಾ​ದ್ಯಂತ ಸಂಚ​ರಿಸಿ ಮತ​ದಾ​ರ​ರನ್ನು ಸೆಳೆ​ಯು​ತ್ತಿ​ದ್ದಾರೆ. ಕಾಂಗ್ರೆಸ್‌ನಿಂದ ಬಿ ಫಾರಂ ಪಡೆದಿರುವ ಪ್ರವೀಣ್‌ ಪೀಟರ್‌ ಈವ​ರೆಗೂ ಕ್ಷೇತ್ರ​ದಲ್ಲಿ ಕಾಣಿ​ಸಿ​ಕೊಂಡಿಲ್ಲ. ಇನ್ನು ಜೆಡಿ​ಯು ಅಭ್ಯರ್ಥಿ ಚಂದ್ರ​ಶೇ​ಖರ್‌ ಸುಳಿವೇ ಇಲ್ಲ.

ಬಿಜೆಪಿ ನಾಯ​ಕರ ಆಸ್ತಿ ವಿರುದ್ಧ ‘ಕೈ’ ಹೋರಾ​ಟ ...

ಬೆಂಗ​ಳೂರು ನಗರ, ಬೆಂಗ​ಳೂರು ಗ್ರಾಮಾಂತರ ಹಾಗೂ ರಾಮ​ನ​ಗರ ಜಿಲ್ಲೆ​ಗಳ ವ್ಯಾಪ್ತಿಯಲ್ಲಿ 36 ವಿಧಾ​ನ​ಸಭಾ ಕ್ಷೇತ್ರ​ಗ​ಳಿವೆ. ಈ ಪೈಕಿ ​ಉಪ​ಚು​ನಾ​ವಣೆ ನಡೆ​ಯು​ತ್ತಿ​ರುವ ರಾ​ಜ​ರಾ​ಜೇ​ಶ್ವರಿ ಕ್ಷೇತ್ರ ಹೊರತು ಪಡಿಸಿ 14 ಬಿಜೆಪಿ, 14 ಕಾಂಗ್ರೆಸ್‌ , 6 ಜೆಡಿ​ಎಸ್‌ ಹಾಗೂ 1 ಪಕ್ಷೇ​ತರ ಶಾಸ​ಕರು ಇದ್ದಾ​ರೆ.

ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆ ಹೆಚ್ಚು:

ಸಾಮಾ​ನ್ಯ​ವಾಗಿ ಶಿಕ್ಷ​ಕರ ಕ್ಷೇತ್ರದ ಚುನಾ​ವ​ಣೆ​ಗಳಲ್ಲಿ ಪಕ್ಷ ನಿಷ್ಠೆ​ಗಿಂತ ವ್ಯಕ್ತಿ ನಿಷ್ಠೆ ಹೆಚ್ಚು ಕೆಲಸ ಮಾಡು​ತ್ತದೆ. ಆದರೆ, ಈ ಬಾರಿಯ ಚುನಾ​ವ​ಣೆ​ಯನ್ನು ಬಿಜೆಪಿ ಮತ್ತು ಜೆಡಿ​ಎಸ್‌ ಪ್ರತಿ​ಷ್ಠೆ​ಯಾಗಿ ತೆಗೆ​ದು​ಕೊಂಡಿ​ದ್ದು, ಕಾಂಗ್ರೆಸ್‌ ಅಭ್ಯ​ರ್ಥಿಯೂ ಸಕ್ರಿ​ಯ​ರಾ​ದರೆ ಚುನಾ​ವಣಾ ಕಣ ರಂಗೇ​ರ​ಲಿ​ದೆ

2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, ಮೂರು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿ ಕೊಂಡಿದ್ದಾರೆ. ಪಕ್ಷ, ಜಾತಿ, ಧರ್ಮದ ಹಂಗಿ​ಲ್ಲದೆ ಮಾಡಿ​ರುವ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ತಮ್ಮ ಗೆಲು​ವಿಗೆ ಸಹ​ಕಾ​ರಿ​ಯಾ​ಗ​ಲಿದೆ ಎಂದು ಪುಟ್ಟಣ್ಣ ನಂಬಿ​ಕೊಂಡಿ​ದ್ದಾ​ರೆ.

ಪುಟ್ಟಣ್ಣಗೆ ಬ್ರೇಕ್‌ ಹಾಕಲು ಯತ್ನ

ಪಕ್ಷಾಂತ​ರದ ಕಳಂಕ ಹೊತ್ತಿ​ರುವ ಬಿಜೆ​ಪಿಯ ಪುಟ್ಟ​ಣ್ಣ​ನ​ವರ ಗೆಲು​ವಿನ ನಾಗಾ​ಲೋ​ಟಕ್ಕೆ ಬ್ರೇಕ್‌ ಹಾಕಲು ಜೆಡಿ​ಎಸ್‌ನ ರಂಗ​ನಾಥ್‌ ಹವ​ಣಿ​ಸು​ತ್ತಿ​ದ್ದಾರೆ. ಪುಟ್ಟಣ್ಣ ಜೆಡಿ​ಎಸ್‌ನಿಂದ ಗೆಲುವು ಸಾಧಿ​ಸುತ್ತಾ ಬಂದಿ​ದ್ದರು. ಹೀಗಾಗಿ ತಮ್ಮ ಗೆಲವು ಸುಲಭವೆಂದು ಭಾವಿ​ಸಿ​ರುವ ರಂಗ​ನಾಥ್‌ ರವ​ರು ಮಾಜಿ ಪ್ರಧಾನಿ ದೇವೇ​ಗೌಡ ಹಾಗೂ ಮಾಜಿ ಸಿಎಂ ಕುಮಾ​ರ​ಸ್ವಾಮಿ ತಮ್ಮ ಅಧಿ​ಕಾ​ರ​ದಲ್ಲಿ ಶಿಕ್ಷ​ಕರ ಕ್ಷೇತ್ರಕ್ಕೆ ನೀಡಿದ ಕೊಡು​ಗೆ​ಯನ್ನೇ ಪ್ರಧಾ​ನ​ವಾಗಿ ಮುಂದಿ​ಟ್ಟು​ಕೊಂಡು ಮತ​ಯಾ​ಚನೆ ಮಾಡು​ತ್ತಿ​ದ್ದಾರೆ.

ಚುನಾವಣಾ ಕದನ: ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ...

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಪೀಟರ್‌ ಅವ​ರಿಗೆ ಕಾಂಗ್ರೆಸ್‌ ಪಕ್ಷದ ನಾಮ​ಬ​ಲವೇ ಶ್ರೀರ​ಕ್ಷೆ​ಯಾ​ಗಿದೆ. ಪುಟ್ಟ​ಣ್ಣ​ನ​ವರ ವೈಫಲ್ಯ ಹಾಗೂ ಸಿದ್ದ​ರಾ​ಮ​ಯ್ಯ​ನ​ವರು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ಶಿಕ್ಷ​ಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮನ​ವ​ರಿಕೆ ಮಾಡಿ​ಕೊ​ಡಲಿದ್ದು, ಪ್ರಜ್ಞಾ​ವಂತ ಶಿಕ್ಷ​ಕರು ತಮ್ಮನ್ನು ಬೆಂಬ​ಲಿ​ಸು​ವು​ದ​ರಲ್ಲಿ ಅನು​ಮಾ​ನ​ವಿಲ್ಲ ಎಂಬ ಹುಮ್ಮ​ಸ್ಸಿ​ನ​ಲ್ಲಿ​ದ್ದಾರೆ.

ನಾಳೆ ಪುಟ್ಟಣ್ಣ ನಾಮಪತ್ರ ಸಲ್ಲಿಕೆ

ಜೆಡಿ​ಎಸ್‌ ಅಭ್ಯರ್ಥಿ ಎ.ಪಿ.​ರಂಗ​ನಾಥ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಪೀಟರ್‌ ನಾಮ​ಪತ್ರ ಸಲ್ಲಿ​ಸಿದ್ದು, ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅ.8ರಂದು ಉಮೇ​ದು​ವಾ​ರಿಕೆ ಸಲ್ಲಿ​ಸ​ಲಿ​ದ್ದಾ​ರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್‌ ಮತ್ತು ಸಿಂಡಿಕೇಟ್‌ ಸದಸ್ಯರಾಗಿದ್ದ ಪುಟ್ಟಣ್ಣ ಕಾಂಗ್ರೆಸ್‌ ಮುಖಂಡರಾಗಿ ಗುರುತಿಸಿ ಕೊಂಡಿದ್ದರು. ಡಿ.ಕೆ.ಶಿವಕುಮಾರ್‌ ಜತೆಗಿನ ವಿರಸದ ಹಿನ್ನೆಲೆಯಲ್ಲಿ 2001ರಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.

2002 ರಿಂದ ಮೂರು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ , ಮಾಜಿ ಸಿಎಂ ಕುಮಾರಸ್ವಾಮಿ ಅವರ ಒಡನಾಡಿ ಎನಿಸಿಕೊಂಡಿದ್ದರು. 2017ರಲ್ಲಿ ಜೆಡಿಎಸ್‌ ಶಾಸಕರು ರೆಬಲ್‌ ಆದಾಗಿನಿಂದ ಕುಮಾರಸ್ವಾಮಿ ಆಪ್ತವಲಯದಿಂದ ದೂರ ಸರಿಯುತ್ತಾ ಕೊನೆಗೆ ಪಕ್ಷದಿಂದ ಹೊರ ಹಾಕಲ್ಪಟ್ಟರು. ಇದೀಗ ಬಿಜೆಪಿ ಅಭ್ಯ​ರ್ಥಿ​ಯಾಗಿ ಪುಟ್ಟಣ್ಣ ಅದೃಷ್ಟಪರೀ​ಕ್ಷೆಗೆ ಮುಂದಾ​ಗಿ​ದ್ದಾರೆ.

Follow Us:
Download App:
  • android
  • ios