Asianet Suvarna News Asianet Suvarna News

ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾರರ ನೋಂದಣಿ ಆರೋಪ

ಬಿಜೆಪಿ ಅಭ್ಯರ್ಥಿ ನಕಲಿ ಮತರಾರರ ನೋಂದಣಿ ಮಾಡುವ ಮೂಲಕ ವಾಮಮಾರ್ಗದಲ್ಲಿ ಗೆಲುವು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಕೇಳಿದ್ದಾರೆ.

BJP Candidate Puttanna Registers Fake  Voters  JDS Leader Allegation snr
Author
Bengaluru, First Published Sep 30, 2020, 12:44 PM IST

ರಾಮನಗರ (ಸೆ.30):  ವಿಧಾನ ಪರಿ​ಷತ್‌ನ ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ ಚುನಾ​ವ​ಣೆ​ಯ ಮತ​ದಾ​ರರ ಪಟ್ಟಿ​ಯಲ್ಲಿ ನಕಲಿ ಮತ​ದಾ​ರ​ರನ್ನು ನೋಂದಣಿ ಮಾಡಿ​ಸುವ ಮೂಲಕ ಬಿಜೆಪಿ ಅಭ್ಯರ್ಥಿ ಪುಟ್ಟ​ಣ್ಣ​ ವಾಮ​ಮಾ​ರ್ಗ​ದಲ್ಲಿ ಗೆಲುವು ಸಾಧಿ​ಸುವ ಪ್ರಯತ್ನ ನಡೆ​ಸಿ​ದ್ದಾರೆ ಎಂದು ಜೆಡಿ​ಎಸ್‌ ಅಭ್ಯರ್ಥಿ ಎ.ಪಿ.​ರಂಗ​ನಾಥ್‌ ಆರೋ​ಪಿ​ಸಿ​ದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮೂರು ಚುನಾ​ವ​ಣೆ​ಗ​ಳಲ್ಲಿ ಪುಟ್ಟ​ಣ್ಣ ವಿಫ​ಲತೆ ನಡು​ವೆಯೂ ಸಫ​ಲತೆ ​ಕಂಡ​ವರು. ಆದ​ರೀಗ ನಕಲಿ ಮತ​ದಾ​ರರ ಹೊರಗೆ ಬಂದಿ​ರುವ ಕಾರಣ ಪುಟ್ಟ​ಣ್ಣ​ರ​ವರ ಪರಿ​ಸ್ಥಿ​ತಿ ಅರ್ಧ ವಾರ್ಷಿಕ ಪರೀ​ಕ್ಷೆ​ಯಲ್ಲಿ ಪಾಸಾ​ದ​ವರು, ಅಂತಿಮ ವರ್ಷದ ಪರೀ​ಕ್ಷೆ​ಯಲ್ಲಿ ಫೇಲಾ​ದವರಂತಾ​ಗಿದೆ ಎಂದು ವ್ಯಂಗ್ಯ​ವಾ​ಡಿ​ದರು.

ಶಿಕ್ಷ​ಕರ ಕ್ಷೇತ್ರ ಚುನಾ​ವ​ಣೆ​ಯಲ್ಲಿ ಮತ​ದಾ​ರರ ನೋಂದ​ಣಿಗೆ 26 ವರ್ಷ ಮೇಲ್ಪ​ಟ್ಟಿ​ರ​ಬೇಕು. ಆದರೆ, 21 ವರ್ಷ ವಯ​ಸ್ಸಿ​ನ​ವರು ನೋಂದಣಿ ಆಗಿ​ದ್ದಾ​ರೆ. ಖಾಸಗಿ ಶಿಕ್ಷಣ ಸಂಸ್ಥೆ​ಗಳ ವಾಹನ ಚಾಲ​ಕರು, ಕ್ಲೀನರ್‌ ಗಳು ಹಾಗೂ ಗಾರ್ಮೆಂಟ್ಸ್‌ ನೌಕ​ರರು ಮತ​ದಾ​ರರ ಪಟ್ಟಿ​ಯಲ್ಲಿದ್ದಾ​ರೆ. ಇದೆ​ಲ್ಲ​ವೂ ಪುಟ್ಟ​ಣ್ಣ​ರ​ವರ ಕೈಚ​ಳ​ಕ​ದಿಂದ ಸಾಧ್ಯ​ವಾ​ಗಿದೆ. ಈಗ ಮತ​ದಾ​ರರ ಪಟ್ಟಿ​ಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನಕಲಿ ಮತ​ದಾ​ರರು ಹೊರಗೆ ಬಂದಿ​ದ್ದಾರೆ. ನಕಲಿ ಶಿಕ್ಷಕರನ್ನು ಸೃಷ್ಟಿಸಿ ಅವರಿಂದ ಮತ ಹಾಕಿಸಿಕೊಂಡು ಪುಟ್ಟಣ್ಣ ಗೆಲ್ಲುತ್ತಿದ್ದರು. ಇದೀಗ ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾ​ಗಿಯೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ವಿಳಂಬವಾಗುತ್ತಿದೆ ಎಂದರು.

RR ನಗರ ಉಪಕದನ: ಮುನಿರತ್ನ ವಿರುದ್ಧ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಡಿಕೆಶಿ ಪ್ಲಾನ್ ...

ನಕಲಿ ಮತ​ದಾ​ರರು ಬೆಳ​ಕಿಗೆ ಬಂದಿ​ರು​ವುದು ಹಾಗೂ ಕ್ಷೇತ್ರ ವ್ಯಾಪ್ತಿಯ ಜಿಲ್ಲೆ​ಗ​ಳಲ್ಲಿ ಜೆಡಿ​ಎಸ್‌ ಬಲಿ​ಷ್ಠ​ವಾ​ಗಿ​ರುವ ಕಾರಣ ಪ್ರತಿ​ಸ್ಪರ್ಧಿಗೆ ಸೋಲಿನ ಭೀತಿ ಆವ​ರಿ​ಸಿದೆ. ಮೂರು ಅವ​ಧಿಯ ಅಧಿ​ಕಾ​ರ​ದಲ್ಲಿ ತವರು ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಕೋವಿಡ್‌ ನಂತ​ಹ ಸಂಕ​ಷ್ಟ​ದ​ಲ್ಲಿಯೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅಧಿಕಾರಿಗಳನ್ನು ಬೆದರಿಸಿ, ನಕಲಿ ಮತದಾರರನ್ನು ಸೃಷ್ಟಿಸಿಕೊಂಡು ವಾಮಮಾರ್ಗದಿಂದ ಗೆಲುವು ಸಾಧಿಸುತ್ತಿದ್ದರು. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೆ ಪುಟ್ಟ​ಣ್ಣ​ರ​ವರ ದೊಡ್ಡ ಸಾಧನೆ ಎಂದು ಲೇವಡಿ ಮಾಡಿ​ದ​ರು.

ರಾಜ್ಯ ಉಪನ್ಯಾಸಕರ ಸಂಘದ ಮಾಜಿ ಉಪಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ರಂಗನಾಥ್‌ ಅವರು ವೃತ್ತಿಯಲ್ಲಿ ವಕೀಲರಾಗಿದ್ದರೂ ಶಿಕ್ಷಕ ಸಮುದಾಯದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ರಾಜ್ಯಾದಂತ ಕೆಲಸ ಮಾಡುತ್ತಿದ್ದಾರೆ. ಅವ​ರಿಗೆ ಶಕ್ತಿ ತುಂಬುವ ಕೆಲ​ಸ​ವನ್ನು ಶಿಕ್ಷ​ಕರು ಮಾಡ​ಬೇ​ಕೆಂದು ಮನವಿ ಮಾಡಿ​ದ​ರು.

ಸುದ್ದಿ​ಗೋ​ಷ್ಠಿ​ಯಲ್ಲಿ ಜೆಡಿಎಸ್‌ ರಾಜ್ಯ ವಕ್ತಾರ ಬಿ.ಉಮೇಶ್‌, ಜೆಡಿಎಸ್‌ ಕಾನೂನು ಘಟಕದ ಮುಖಂಡ ರಾಜಶೇಖರ್‌, ನಿವೃತ್ತ ಪ್ರಾಂಶುಪಾಲ ವನರಾಜು, ಮುಖಂಡ ಕರೀಗೌಡ ಇದ್ದರು.

Follow Us:
Download App:
  • android
  • ios