ನಮ್ಮ ಮೆಟ್ರೋದ 2ನೇ ಹಂತದ ಯೋಜನೆಗಾಗಿ ಕಡಿಯಲಾದ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು 76.9 ಕೋಟಿ ವೆಚ್ಚದಲ್ಲಿ 15 ಸಾವಿರ ಸಸಿ ನೆಡಲಿದೆ.

ಬೆಂಗಳೂರು (ಮೇ.08): ನಮ್ಮ ಮೆಟ್ರೋದ 2ನೇ ಹಂತದ ಯೋಜನೆಗಾಗಿ ಕಡಿಯಲಾದ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು 76.9 ಕೋಟಿ ವೆಚ್ಚದಲ್ಲಿ 15 ಸಾವಿರ ಸಸಿ ನೆಡಲಿದೆ. ಒಟ್ಟು ಮೂರು ವಿಭಾಗಗಳಲ್ಲಿ ತಲಾ 2.03 ಕೋಟಿ ಮೊತ್ತದಲ್ಲಿ 5 ಸಾವಿರದಂತೆ 15 ಸಾವಿರ ಸಸಿಗಳನ್ನು ಶೀಘ್ರ ನೆಡಲಾಗುವುದು. ಪ್ರಥಮ ಹಂತದಲ್ಲಿ ದಾಬಸ್ ಪೇಟೆ 4ನೇ ಹಂತದ ಕೈಗಾರಿಕಾ ಪ್ರದೇಶ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸುತ್ತಮುತ್ತಲ ಸರ್ಕಾರಿ ಜಾಗಗಳಲ್ಲಿ 5 ಸಾವಿರ ಸಸಿ ನೆಡುತ್ತಿದೆ. 

Add Asianetnews Kannada as a Preferred SourcegooglePreferred

2ನೇ ಹಂತದಲ್ಲಿ ದೊಡ್ಡಬಳ್ಳಾಪುರ 3ನೇ ಹಂತದ ಕೆಐಎಡಿಬಿಯ 2, 12 ಮತ್ತು 13ನೇ ಉದ್ಯಾನ ಮತ್ತು ಬಫರ್ ವಲಯ ಹಾಗೂ ಸುತ್ತಮುತ್ತಲಿನ ಇತರೆ ಸರ್ಕಾರಿ ಜಾಗದಲ್ಲಿ ಸಸಿ ನೆಡಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ನಮ್ಮ ಮೆಟ್ರೊ ಯೋಜನೆಗಳಿಗಾಗಿ 2021 - 2023 ಅವಧಿಯಲ್ಲಿ 3,626 ಮರಗಳನ್ನು ಕತ್ತರಿಸಲಾಗಿದೆ. 2021ರಿಂದ 2022 ರವರೆಗೆ 856 ಮರಗಳನ್ನು ನಗರದ ವಿವಿಧ ಭಾಗ ಮತ್ತು ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಹಂತ -2 ಮತ್ತು ಹಂತ 2 'ಎ' ಯೋಜನೆಗಳಿಗಾಗಿ 2,461 ಮರಗಳನ್ನು ಕಡಿಯಲಾಗಿದೆ. 

ಅದೇ ರೀತಿ, 2022ರಿಂದ ಜನವರಿ 2023 ರವರೆಗೆ, ಹಂತ 2 'ಎ' ಮತ್ತು 2 'ಬಿ' ಗಾಗಿ 107 ಮರ ಸ್ಥಳಾಂತರಿಸಲಾಗಿದೆ ಮತ್ತು 1,165 ಮರಗಳನ್ನು ಕಡಿಯಲಾಗಿದೆ. 1,193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕರೆದ ಟೆಂಡರ್‌ನಲ್ಲಿ ಕೆಲ ಪರಿಸರ ಕಾರ್ಯದ ಸಂಸ್ಥೆಗಳು ಪಾಲ್ಗೊಂಡಿದ್ದು, ಮೌಲ್ಯಮಾಪನ ಹಂತ ನಡೆಯುತ್ತಿದೆ. ಮಳೆಗಾಲದ ವೇಳೆಗೆ ಸಸಿ ನೆಡಲಿದ್ದೇವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

16 ಇಂಟರ್‌ಚೇಂಜ್‌ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಿದ್ಧತೆ: ಬಿಎಂಆರ್‌ಸಿಎಲ್‌

ಮುಂಗಾರು ಮಳೆ, ರೆಂಬೆಗೆ ಕೊಡಲಿ: ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್‌ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ನಲ್ಲಿವರೆಗಿನ ನೇರಳ ಮಾರ್ಗದಲ್ಲಿ 370 ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ನಾಗಸಂದ್ರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ವರೆಗೆ 380 ಸೇರಿ ಒಟ್ಟೂ 750 ಮರಗಳ ಕೊಂಬೆಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ರೆಂಬೆಗಳು ಬಿದ್ದು ಮೆಟ್ರೋ ಮಾರ್ಗಕ್ಕೆ ಹಾನಿ ತಪ್ಪಿಸಲು, ಸಿಗ್ನಲಿಂಗ್ ಸಮಸ್ಯೆ ನಿವಾರಣೆ ಮುಂಜಾಗ್ರತೆ ಕ್ರಮವಾಗಿ ರೆಂಬೆ ಕಡಿಯಲು ಮುಂದಾಗಲಾಗಿದೆ.