Asianet Suvarna News Asianet Suvarna News

ಬೆಂಗಳೂರು: ರೈಲಿನಿಂದ ಬಿದ್ದು ಮಾಜಿ ಶಾಸಕನ ಪುತ್ರ ಸಾವು

ಬೆಳಗಾವಿ ಎಂಇಎಸ್ ಮಾಜಿ ಶಾಸಕರ ಪುತ್ರ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Belagavi former MES MLA Sambhaji Patil Son Dies in Bengaluru
Author
Bengaluru, First Published Dec 4, 2018, 10:22 AM IST

ಬೆಂಗಳೂರು, [ಡಿ.04]: ಬೆಳಗಾವಿ ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್ ಪುತ್ರ ಸಾಗರ್​ ಪಾಟೀಲ್ (28) ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. 

ನಿನ್ನೆ [ಸೋಮವಾರ] ರಾತ್ರಿ ಸ್ನೇಹಿತರ ಜೊತೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 

"

ಶ್ರೀರಾಮಪುರದಲ್ಲಿ ರೈಲು ಬರುತ್ತಿದ್ದ ವೇಳೆ ಡೋರ್ನಲ್ಲಿ ನಿಂತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿದೆ. ಬಿದ್ದಿರುವ ರಭಸಕ್ಕೆ ತೆಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಈ ಸಂಬಂಧ ಬೆಂಗಳೂರಿನ ಸಿಟಿ ರೈಲ್ವೆ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದ್ದು, ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios