ಚುನಾವಣೆ ಹಿನ್ನೆಲೆ ಮಾಜಿ ಶಿಕ್ಷಕರೋರ್ವರು ನಾಮಪತ್ರ ಸಲ್ಲಿಸಿದ್ದು, ಅವರ ಸಂಪೂರ್ಣ ಆಸ್ತಿ ಘೋಷಿಸಿಕೊಂಡಿದ್ದಾರೆ

ಧಾರವಾಡ (ಅ.07): ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ ಬಸವರಾಜ ಗುರಿಕಾರ ಅವರು ತಾವು, ಪತ್ನಿ ಹಾಗೂ ಪುತ್ರ ಸೇರಿದಂತೆ ಒಟ್ಟು 1.44 ಕೋಟಿ ಕುಟುಂಬದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ನಿವೃತ್ತ ಶಿಕ್ಷಕರಾಗಿರುವ ಗುರಿಕಾರ ಅವರ ಕೈಯಲ್ಲಿ 45 ಸಾವಿರ ನಗದು ಇದ್ದು, ಪತ್ನಿ ನಾಗರತ್ನ ಬಳಿ 41 ಸಾವಿರ ರು. ಹಾಗೂ ಪುತ್ರ ಪ್ರವೀಣ ಬಳಿ 48 ಸಾವಿರ ಇದೆ. 

ಮೂವರು ಸೇರಿ ಒಟ್ಟು ಚಿರಾಸ್ತಿ 81.07 ಲಕ್ಷ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಅದೇ ರೀತಿ ಗುರಿಕಾರ ಅವರ ಹೆಸರಿನಲ್ಲಿ ಯಾವ ಸ್ಥಿರಾಸ್ತಿ ಇಲ್ಲ. 

ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಡಿ.ಕೆ.ಶಿವಕುಮಾರ್

ಆದರೆ, ಪತ್ನಿ ನಾಗರತ್ನಾ ಅವರ ಹೆಸರಿನಲ್ಲಿ ವಿವಿಧೆಡೆ 35 ಲಕ್ಷ ರು. ಮೌಲ್ಯದ ಕೃಷಿಯೇತರ ಭೂಮಿ ಇದೆ. ಪುತ್ರ ಪ್ರವೀಣ ಬಳಿ 28 ಲಕ್ಷ ರು. ಮೌಲ್ಯದ ಕೃಷಿಯೇತರ ಭೂಮಿ ಇದೆ. ಒಟ್ಟು 63 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.