Asianet Suvarna News Asianet Suvarna News

'ನಾನು ಐದು ಸಲ MLA ಆದವನು ಏರ್ಪೋರ್ಟ್‌ ಒಳಗೆ ಬಿಡ್ರಿ'

ವಿಮಾನ ನಿಲ್ದಾಣದ ಒಳಗೆ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಬೆಂಬಲಿಗರನ್ನ ಬಿಡದ ಪೊಲೀಸರು| ಪೊಲೀಸರ ಜೊತೆ ವಾಗ್ದಾದಕ್ಕಿಳಿದ ಚಿಂಚನಸೂರ| ಸಿಎಂ ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಬಾಬುಬಾರ್‌ ಚಿಂಚನಸೂರ ಬೆಂಬಲಿಗರು| 

Baburao Chinchanasur Altercation with Police in Kalaburagi
Author
Bengaluru, First Published Feb 5, 2020, 11:43 AM IST

ಕಲಬುರಗಿ(ಫೆ.05):  ನಾನು ಐದು ಸಲ ಗೆದ್ದು ಶಾಸಕನಾಗಿದ್ದವನು ನನ್ನನ್ನೇ ಒಳಗೆ ಬಿಡಲ್ವಾ, 25 ವರ್ಷ ರಾಜಕೀಯದಲ್ಲಿದ್ದೇನೆ ಎಂದು ವಿಮಾನ ನಿಲ್ದಾಣದ ಒಳಗಡೆ ಬಿಡದಿರುವುದಕ್ಕೆ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ. 

"

ವಿಮಾನ ನಿಲ್ದಾಣದ ಪೊಲೀಸರು ಬಾಬುಬಾರ್ ಚಿಂಚನೂರ ಅವರ ಬೆಂಬಲಿಗರನ್ನು ಬಿಡದಕ್ಕೆ ಮತ್ತು ಹೂ ಗುಚ್ಛ ಒಳಗಡೆ ತೆಗೆದುಕೊಂಡು ಹೋಗಲು ಅನುಮತಿ ನಿರಾಕರಿಸಿದ್ದಾರೆ. ಈ ವೇಳೆ ಬಾಬುರಾವ ಚಿಂಚನಸೂರ ಅವರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಮಧ್ಯ ಪ್ರವೇಶಿದಿದ ಕಮೀಷನರ್ ನಾಗರಾಜ್ ಅವರು ಪರಿಸ್ಥಿತಿಯನ್ನ ತಿಳಿಸಿಗೊಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರು ಬಾಬುಬಾರ್ ಚಿಂಚನೂರ ಅವರ ಬೆಂಬಲಿಗರನ್ನು ಬಿಡದಕ್ಕೆ ಮತ್ತು ಹೂ ಗುಚ್ಛ ಒಳಗಡೆ ತೆಗೆದುಕೊಂಡು ಹೋಗಲು ಅನುಮತಿ ನಿರಾಕರಿಸಿದ್ದಾರೆ. ಈ ವೇಳೆ ಬಾಬುರಾವ ಚಿಂಚನಸೂರ ಅವರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಮಧ್ಯ ಪ್ರವೇಶಿದಿದ ಕಮೀಷನರ್ ನಾಗರಾಜ್ ಅವರು ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. 

ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಸ್ವಾಗತಕೋರಲು ಏರ್ಪೋರ್ಟ್ ಒಳಗಡೆ ಬಾಬುರಾವ್ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ.
 

Follow Us:
Download App:
  • android
  • ios