Asianet Suvarna News Asianet Suvarna News

ರಾಮನಗರ: ರೈಲು ಹೊಡೆತಕ್ಕೆ ಕುರಿಗಳ ಮಾರಣ ಹೋಮ

ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ದಾರುಣ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

Around 18 sheep crushed to death under train  in Ramanagara District
Author
Bengaluru, First Published Dec 23, 2018, 7:19 PM IST

ರಾಮನಗರ, [ಡಿ. 23]: ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ಘಟನೆ  ಇಂದು [ಭಾನುವಾರ] ಚನ್ನಪಟ್ಟಣದ ಮುದಗೆರೆ ಸಮೀಪ ನಡೆದಿದೆ.

ಕುರಿಗಳು ಮುದಗೆರೆಯ ದೇಸಿಗೌಡ ಎಂಬವರಿಗೆ ಸೇರಿವೆ. ಕುರಿಗಳು ಹಳಿ ದಾಟುತ್ತಿದ್ದ ವೇಳೆ ದಿಡೀರ್ ಆಗಿ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿವೆ.

ರೈಲಿನ ರಭಸದ ಹೊಡೆತಕ್ಕೆ ಕುರಿಗಳ ದೇಹದ ಭಾಗಗಳು ಛಿದ್ರ-ಛಿದ್ರವಾಗಿ ಎಲ್ಲೊಂದರಲ್ಲಿ ಬಿದ್ದಿವೆ.ಕುರಿಗಳ ಮಾರಣಹೋಮದಿಂದ ಲಕ್ಷಾಂತರ ರು. ನಷ್ಟವಾಗಿದ್ದು,  ಮಾಲೀಕ ಮುದಗೆರೆಯ ದೇಸಿಗೌಡಗೆ ದಿಕ್ಕು ತೋಚದಂತಾಗಿದೆ. 

Follow Us:
Download App:
  • android
  • ios