Asianet Suvarna News Asianet Suvarna News

ಕೈ ಹಿಡಿಯುತ್ತಾರಾ ಹಾಸನದ ಜೆಡಿಎಸ್ ಶಾಸಕ?

ಜೆಡಿಎಸ್ ಒಂದೊಂದೆ ವಿಕೆಟ್ ಗಳು ಪತನವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ಮತ್ತೋರ್ವ ಶಾಸಕ ಕೂಡ ಜೆಡಿಎಸ್ ಬಿಟ್ಟು ಕೈ ಹಿಡಿಯುವ ಸಾಧ್ಯತೆ ಇದೆ. 

Arkalgud MLA AT Ramaswamy May Quit JDS Party
Author
Bengaluru, First Published Sep 16, 2019, 12:20 PM IST

ಹಾಸನ [ಸೆ.16]: ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಮಾತುಗಳು ಇದೀಗ ದಟ್ಟವಾಗಿ ಕೇಳಿಬರುತ್ತಿದೆ.

 ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ನಾಯಕ ಎ.ಮಂಜು ಮತ್ತು ಜೆಡಿಎಸ್‌ ಪಕ್ಷದ ಶಾಸಕ ಎ.ಟಿ.ರಾಮಸ್ವಾಮಿ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎ.ಮಂಜು ಕಾಂಗ್ರೆಸ್‌ ತೊರೆದು ಬಿಜೆಪಿಯಲ್ಲಿದ್ದು, ಇತ್ತ ರಾಮಸ್ವಾಮಿ ಜೆಡಿಎಸ್‌ ಪಕ್ಷದ ಪ್ರಾಭಲ್ಯತೆ ದಿನದಿಂದ ದಿನಕ್ಕೆ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯ ಸ್ಥಿತಿ ಎದುರಾದರೆ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಸೇರುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮುಖಂಡರೊಂದಿಗಿನ ಸಖ್ಯ ಬಯಸುತ್ತಿದ್ದಾರೆ ಎನ್ನಲಾಗಿದೆ. 

 ಒಟ್ಟಾರೆಯಾಗಿ ಸ್ಥಳೀಯ ರಾಜಕೀಯ ಮೇಲಾಟದಲ್ಲಿ ಅಧಿಕಾರಿಯೊಬ್ಬರ ವರ್ಗಾವಣೆ ಪ್ರಹಸನ ನಡೆದಿದೆ.

Follow Us:
Download App:
  • android
  • ios