Asianet Suvarna News Asianet Suvarna News

Dharwad News: ಆದಿವಾಸಿಗಳ ಭಾಷೆಗೆ ಧ್ವನಿಭಾಷಾನುವಾದ ರೋಬೋಟ್‌

  • ಆದಿವಾಸಿಗಳ ಭಾಷೆಗೆ ಧ್ವನಿಭಾಷಾನುವಾದ ರೋಬೋಟ್‌
  • ಸೆ. 26ರಂದು ರಾಷ್ಟ್ರಪತಿಗೆ ಐಐಐಟಿಯ ರೋಬೋಟ್‌ ಯಂತ್ರದ ಮಾಹಿತಿ
  • ಓರಿಸ್ಸಾದ ಕುಯಿ, ಮುಂಡಾರಿ, ಕರ್ನಾಟಕದ ಲಂಬಾಣಿ, ಸೋಲಿಗ ಭಾಷೆಗಳ ಆಯ್ಕೆ
  • ಇಂಗ್ಲಿಷ್‌ನಿಂದ ಆದಿವಾಸಿಗಳ ಭಾಷೆ, ಆದಿವಾಸಿಗಳ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದ
A robot that speaks the language of tribals dharwad rav
Author
First Published Sep 24, 2022, 8:40 AM IST

ವಿಶೇಷ ವರದಿ

 ಧಾರವಾಡ (ಸೆ.24) : ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾಗಿರುವ ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಲೋಕಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಯು ರಾಷ್ಟ್ರಪತಿಗಳ ಮೂಲ ರಾಜ್ಯವಾದ ಓರಿಸ್ಸಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್‌ ಯಂತ್ರವನ್ನು ಸಿದ್ಧಪಡಿಸುತ್ತಿದ್ದು, ಅದರ ಬಗ್ಗೆ ಮುರ್ಮು ಅವರಿಗೆ ವಿವರಿಸಲಿದೆ.

Feelings ಇರೋ ರೋಬೋಟ್‌, ಗದರಿಸಿದ್ರೆ Sorry ಕೇಳೋವರೆಗೂ ಮಾತೇ ಆಡಲ್ಲ!

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ. 26ರಂದು ಐಐಐಟಿ ಸಂಸ್ಥೆಯ ನೂತನ ಕ್ಯಾಂಪಸ್‌ನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ‘ಹ್ಯುಮುನೊಯ್ಡ ರೋಬೋಟ್‌’ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ. ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿ ಭಾಷಾನುವಾದದ ಉಪಕರಣ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಪ್ರಸ್ತುತ ಈ ರೋಬೋಟ್‌ ತಂತ್ರಜ್ಞಾನದಲ್ಲಿ ಬುಡಕಟ್ಟು ಜನರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯು ಬುಡಕಟ್ಟಿನ ಭಾಷೆಯಲ್ಲಿ ದೊರೆಯಲಿದೆ. ಈ ಯೋಜನೆಯಲ್ಲಿ ಓರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆ ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇಂಗ್ಲಿಷ್‌ನಿಂದ ಹೇಳಲ್ಪಟ್ಟಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲಿಷ್‌ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದÜ ತಂತ್ರಲಿಪಿಯನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕರು ಹಾಗೂ ಈ ಯೋಜನೆಯ ಪ್ರಧಾನ ಪರೀಕ್ಷಕ ಡಾ. ಕೆ.ಟಿ. ದೀಪಕ ಮಾಹಿತಿ ನೀಡಿದರು.

ಉಪಯೋಗ ಏನು?:

ಬುಡಕಟ್ಟು ಜನಾಂಗದಲ್ಲಿ ಈ ತಂತ್ರಜ್ಞಾನ ಉಪಯೋಗವಾದರೆ ಜೀವ ವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿಯನ್ನು ಡಿಜಿಟಲ್‌ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ಪರಿಚಯಿಸಬಹುದು. ಸರ್ಕಾರಿ ಯೋಜನೆಗಳ ಬಗ್ಗೆ ಅರಿವು, ಸದುಪಯೋಗಪಡಿಸಿಕೊಳ್ಳುವ ಬಗ್ಗೆಯೂ ಇದರಿಂದ ತಿಳಿದುಕೊಳ್ಳಬಹುದಾಗಿದೆ. ಧಾರವಾಡ, ಹೈದರಾಬಾದ್‌ ಹಾಗೂ ಭುವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಡಾ. ಪ್ರಕಾಶ ಪವಾರ ಹಾಗೂ ಡಾ. ಸಿಬಾಶಂಕರಪಾಡಿ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ . 44.53 ಲಕ್ಷ ಅನುದಾನ ನೀಡಿದೆ.

ಮಾನವರೂಪಿ ರೋಬೋಟ್‌:

ವಯಸ್ಸಾದ ಹಿರಿಯರ ಸೇವೆಗೆ ಅನುಕೂಲವಾಗುವ ದೃಷ್ಟಿಯಿಂದ ಸ್ವಯಂಚಾಲಿತ ಮಾನವರೂಪಿ ರೋಬೋಟ್‌ನ್ನು ಸಹ ಐಐಐಟಿ ಧಾರವಾಡದಲ್ಲಿ ರೂಪಿಸಲಾಗುತ್ತಿದೆ. ಪ್ರಸ್ತುತ ಸಂಶೋಧನಾ ಯೋಜನೆಯು ಭಾರತದ ವಾತಾವರಣಕ್ಕೆ ಒಗ್ಗುವಂತಹ, ವಯಸ್ಸಾದವರ ಆರೈಕೆಗಾಗಿ ಮಾನವರೂಪಿ ರೋಬೋಟ್‌ನ್ನು ತಯಾರಿಸುವುದಾಗಿದೆ. ಅದಲ್ಲದೆ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಮಾರ್ಪಾಡು ಮಾಡುವುದರಿಂದ ಇತರ ಉಪಯೋಗಗಳಿಗೂ ಬಳಸಬಹುದಾಗಿದೆ. ನಿಯೋಜಿಸಿದ ರೋಬೋಟ್‌ ನಿಯಮಿತ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಹೈದರಾಬಾದ್‌ ತಿಹಾನ್‌ ಐಐಟಿ ಏಜೆನ್ಸಿ ಮೂಲಕ . 70 ಲಕ್ಷ ಅನುದಾನದದಲ್ಲಿ ಸ್ವಯಂಚಾಲಿತ ಮಾನವರೂಪಿ ರೋಬೋಟ್‌ ತಯಾರಿಸಲಾಗುತ್ತಿದೆ. ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಪ್ರೊ. ಕವಿ ಮಹೇಶ್‌, ಡಾ. ರಾಜೇಂದ್ರ ಹೆಗಡಿ, ಡಾ.ಪವನ್‌ ಕುಮಾರ್‌ ಸಿ, ಡಾ. ರಮೇಶ ಆತೆ, ಡಾ. ಚಿನ್ಮಯಾನಂದ ಎ. ತೊಡಗಿಸಿಕೊಂಡಿದ್ದಾರೆ ಎಂದು ಡಾ. ಕೆ.ಟಿ. ದೀಪಕ ಮಾಹಿತಿ ನೀಡಿದರು.

ರೋಬೋಟ್ ನಡೆಸುತ್ತೆ ಕೋವಿಡ್ ಪರೀಕ್ಷೆ, ಮಾತುಕತೆ ಹಾಗೂ ಹರಟೆ, ಬೆರುಗುಗೊಳಿಸಿದ ತಂತ್ರಜ್ಞಾನ ಉತ್ಸವ!

3 ವರ್ಷಗಳ ಸಂಶೋಧನೆ:

ಹ್ಯುಮುನೊಯ್ಡ ಹಾಗೂ ಸ್ವಯಂ ಚಾಲಿತ ಮಾನವರೂಪಿ ರೋಬೋಟ್‌ ಮೂರು ವರ್ಷಗಳ ಸಂಶೋಧನೆಯ ಫಲ. ಕಳೆದ ಒಂದು ವರ್ಷದಿಂದ ಎರಡೂ ಸಂಶೋಧನೆಗಳು ನಡೆಯುತ್ತಿವೆ. ಹ್ಯುಮುನೊಯ್ಡ ರೋಬೋಟ್‌ ನಾಲ್ಕು ಸಂಸ್ಥೆಗಳ ಜತೆಗೂಡಿ .256 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು ಐಐಐಟಿ ಪಾಲು . 44.53 ಲಕ್ಷ. ಅದೇ ರೀತಿ ಸ್ವಯಂ ಚಾಲಿತ ಮಾನವರೂಪಿ ರೋಬೋಟ್‌ ಸಂಶೋಧನೆಗೆ ಒಟ್ಟು . 70 ಲಕ್ಷ ಅನುದಾನವಿದೆ. ಎರಡೂ ಸಂಶೋಧನೆಗಳಿಗೆ ಇನ್ನೂ ಎರಡು ವರ್ಷಗಳು ಬಾಕಿ ಇದೆ. ಕಾಕತಾಳೀಯ ಎಂಬಂತೆ ರಾಷ್ಟ್ರಪತಿ ಐಐಐಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಅವರ ಗಮನಕ್ಕೆ ತರಲಾಗುತ್ತಿದೆ.

ಡಾ. ಕೆ.ಟಿ. ದೀಪಕ, ಪ್ರಧಾನ ಪರೀಕ್ಷಕರು, ಐಐಐಟಿ

Follow Us:
Download App:
  • android
  • ios