‘ಜೋಗಿ ಜತೆ ಮಾತು ಕತೆ’ಗೆ ನೀವು ಬರ್ತಿರಾ ತಾನೆ?
ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಥಮದರ್ಜೆ ಕಾಲೇಜು ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ‘ಜೋಗಿ ಜತೆ ಮಾತು ಕತೆ’ ಎಂಬ ಟೈಟಲ್ ಸಹ ನೀಡಿದೆ.
ಕಟೀಲು[ಆ.1] ಶ್ರೀ ದುರ್ಗಾ ಪರಮೇಶ್ವರೀ ಪ್ರಥಮದರ್ಜೆ ಕಾಲೇಜು ಕಟೀಲು ಭಾಷಾ ಸಂಘ ಮತ್ತು ಲಲಿತ ಕಲಾ ಸಂಘ ಆಗಸ್ಟ್ 6 ರಂದು ಒಂದು ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿದೆ. ಕನ್ನಡಪ್ರಭ ಪುರವಣಿ ವಿಭಾಗದ ಸಂಪಾದಕ, ಅಂಕಣಕಾರ, ವಿಮರ್ಶಕ ಜೋಗಿ ಅವರೊಂದಿಗೆ ಸಂವಾದ ನಡೆಯಲಿದ್ದು ‘ಜೋಗಿ ಜತೆ ಮಾತು ಕತೆ’ ಎಂಬ ವಿನೂತನ ಸಂವಹನಕ್ಕೆ ಸಾಕ್ಷಿಯಾಗಬಹುದು.
ಆಗಸ್ಟ್ 6, ಸೋಮವಾರ ಮಧ್ಯಾಹ್ನ 2.30ಕ್ಕೆ ಕಟೀಲು ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್.ಕಾಂ ಸಂಪಾದಕ ಎಸ್.ಕೆ.ಶಾಮ ಸುಂದರ್, ಸಾಹಿತಿ ಗೋಪಾಲಕೃಷ್ಣ ಕುಂಟಿನಿ, ಕಟೀಲು ಕಾಲೇಜು ಪ್ರಾಚಾರ್ಯ ಎಂ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಜೋಗಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ