ಕೊರೋನಾ ಗೆದ್ದ ವೃದ್ಧರೊಬ್ಬರಿಗೆ ಅದ್ಧೂರಿ ಸ್ವಾಗತ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಘಟನೆ ವಿದ್ಯಾರಣ್ಯಪುರಂ ನಿವಾಸಿ 98 ವರ್ಷದ ಸೂರ್ಯನಾರಾಯಣ್ ಕೊರೋನಾ ಗೆದ್ದ ವೃದ್ಧ
ಮೈಸೂರು (ಜೂ.09):ಕೊರೋನಾ ಗೆದ್ದ ವೃದ್ಧರೊಬ್ಬರಿಗೆ ಅದ್ಧೂರಿ ಸ್ವಾಗತ ಕೋರಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ವಿದ್ಯಾರಣ್ಯಪುರಂ ನಿವಾಸಿ 98 ವರ್ಷದ ಸೂರ್ಯನಾರಾಯಣ್ ಎಂಬವರೇ ಕೊರೋನಾ ಗೆದ್ದವರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದು, ಗುಣಮುಖರಾಗಿ ಸೋಮವಾರ ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಅವರಿಗೆ ಪುಷ್ಪಾರ್ಚನೆ ಮೂಲಕ ಕುಟುಂಬಸ್ಥರು ಸ್ವಾಗತ ಕೋರಿದ್ದಾರೆ. ಇದಕ್ಕೆ ನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ್ ಅವರು ಸಹ ಸಾಥ್ ನೀಡಿ ಸ್ವಾಗತ ಕೋರಿದ್ದಾರೆ.
ಗುಡ್ ನ್ಯೂಸ್ : ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರೀ ಇಳಿಕೆ
ಕೊರೋನಾ ಬಂದವರನ್ನ ಮಾನವೀಯತೆ ದೃಷ್ಟಿಯಿಂದ ನೋಡಲಿ. ಅವರನ್ನ ದೂರ ಮಾಡುವುದು ಬೇಡ. ಈ ಹಿನ್ನಲೆಯಲ್ಲಿ ಅವರಿಗೆ ಈ ರೀತಿಯ ಅದ್ಧೂರಿ ಸ್ವಾಗತ ಕೋರಿದ್ದೇವೆ ಎಂದು ಪಾಲಿಕೆ ಸದಸ್ಯೆ ಶೋಭಾ ಸುನಿಲ್ ತಿಳಿಸಿದ್ದಾರೆ.
