ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಆನೆಗಳ ಕಾಳಗದಲ್ಲಿ ಗಂಡಾನೆಯೊಂದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ. 

ಹುಣಸೂರು (ಮೇ.03): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅನೆಚೌಕೂರು ವನ್ಯಜೀವಿ ವಲಯದಲ್ಲಿ ಕಾಡಾನೆಗಳ ಕಾಳಗದಲ್ಲಿ 35 ರಿಂದ 40 ವರ್ಷದ ವಯಸ್ಸಿನ ಗಂಡು ಆನೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

Add Asianetnews Kannada as a Preferred SourcegooglePreferred

 ಚೆನ್ನಂಗಿ ಶಾಖೆಯ ಅಬ್ಬೂರು ಗಸ್ತಿನ ಅನಂತರಾಮ ತೋಟದ ಅರಣ್ಯ ಗಡಿ ಭಾಗದಲ್ಲಿ ಗಾಯಗೊಂಡ ಆನೆ ಕೆರೆಯಲ್ಲಿ ಮೃತಪಟ್ಟಿದೆ.

ನಾಗರಹೊಳೆ ಅಭಯಾರಣ್ಯ : ವನ್ಯಜೀವಿ ಪ್ರಿಯರ ಕಣ್ಣಿಗೆ ಈಗ ಹಬ್ಬ! .

ಮತ್ತಿಗೋಡು ಆನೆ ಶಿಬಿರದ ಸಾಕಾನೆಗಳಾದ ಅಭಿಮನ್ಯು ಹಾಗೂ ಮಹೇಂದ್ರ ಸಹಾಯದಿಂದ ಮೃತಪಟ್ಟಆನೆಯ ಕಳೆಬರಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ. 

ಮರಣೋತ್ತರ ಪರೀಕ್ಷೆಯನ್ನು ವನ್ಯ ಜೀವಿ ಪಶುವೈದ್ಯ ಡಾ.ಮುಜಿಬ್‌ ನಡೆಸಿದರು.