ಮುಂದುವರೆದ ಕೃಷ್ಣಾ ಪ್ರವಾಹ ಭೀತಿ| ಬಸವಸಾಗರ ಜಲಾಶಯಕ್ಕೆ 2,70,000 ಕ್ಯುಸೆಕ್‌ ಒಳಹರಿವಿದ್ದು, 28 ಕ್ರಸ್ಟ್‌ ಗೇಟ್‌ಗಳ ಮುಖಾಂತರ 3 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಯಿತು| ಬಸವಸಾಗರಕ್ಕೂ ಒಳಹರಿವು ಹೆಚ್ಚಾಗಲಿದೆ| ನದಿಪಾತ್ರದ ಹಲವು ಹಳ್ಳಿಗಳು ಪ್ರವಾಹ ಪರಿಸ್ಥಿತಿ ಎದುರಿಸಲಿವೆ| 

ಹುಣಸಗಿ(ಆ.20): ನಾರಾಯಣಪೂರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದರಿಂದ ಕೃಷ್ಣಾ ನದಿ ಪಾತ್ರದಲ್ಲಿರುವ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ರಾಜ್ಯದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾಗಿದ್ದು, ಅಪಾಯಮಟ್ಟದ ಮೀರಿ ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಸ್ಥರಿಗೆ ಆತಂಕ ಉಂಟುಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಬುಧವಾರ ಬಸವಸಾಗರ ಜಲಾಶಯಕ್ಕೆ 2,70,000 ಕ್ಯುಸೆಕ್‌ ಒಳಹರಿವಿದ್ದು, 28 ಕ್ರಸ್ಟ್‌ ಗೇಟ್‌ಗಳ ಮುಖಾಂತರ 3 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಯಿತು. ಆಲಮಟ್ಟಿಯ ಲಾಲ್‌ಬಹುದ್ದೂರ ಶಾಸ್ತ್ರೀ ಜಲಾಶಯದಿಂದ ನೀರು ಹರಿದು ಬರುತ್ತಿರುವುದರಿಂದ ಯಾವುದೇ ಕ್ಷಣದಲ್ಲಾದರೂ ನದಿಗೆ ಇನ್ನು ಹೆಚ್ಚಿನ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಸಂಬಂಧ​ಪಟ್ಟಅಧಿಕಾರಿಗಳು ತಿಳಿ​ಸಿ​ದ್ದಾ​ರೆ.

ಬಸವಸಾಗರ ಜಲಾಶಯ ಭರ್ತಿ: ರಾಯಚೂರು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ

ಕಳೆದ ಜು.28ರಿಂದ ಬಸವಸಾಗರ ಜಲಾಶಯದಿಂದ ನದಿಗೆ ನೀರು ಹರಿಸಲಾಗುತಿದ್ದು, ಹಲವೆಡೆ ಸೇತುವೆ ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಒಂದು ವೇಳೆ ಕೋಯ್ನಾ ಜಲಾಶಯದಿಂದ ಲಾಲ್‌ಬಹದ್ದೂರ ಶಾಸ್ತಿ್ರ ಅಣೆಕಟ್ಟಿಗೆ ಒಳಹರಿವು ಹೆಚ್ಚಾ​ದರೆ, ಬಸವಸಾಗರಕ್ಕೂ ಒಳಹರಿವು ಹೆಚ್ಚಾಗಲಿದೆ. ಕಳೆದ 8 ದಿನದಿಂದ ಪ್ರತಿನಿತ್ಯ ಸುಮಾರು 2 ಲಕ್ಷ ಕ್ಯುಸೆಕ್‌ ನದಿಗೆ ನೀರು ಹರಿಸಲಾಗುತ್ತಿದೆ. ಇನ್ನಷ್ಟು ಒಳಹರಿವು ಬಂದಲ್ಲಿ ನದಿಪಾತ್ರದ ಹಲವು ಹಳ್ಳಿಗಳು ಪ್ರವಾಹ ಪರಿಸ್ಥಿತಿ ಎದುರಿಸಲಿವೆ.

ಛಾಯಾ ಭಗವತಿ ಪ್ರವೇಶಿಸಿದ ಕೃಷ್ಣೆ:

ಬಸವಸಾಗರ ಜಲಾಶಯಕ್ಕೆ ಹತ್ತಿರುವಿರುವ ಛಾಯಾ ಭಗವತಿ ದೇಗುಲದ ಕೆಳಮೆಟ್ಟಿಲುಗಳು ಈಗಾಗಲೇ ಮುಳುಗಿವೆ. ಕೃಷ್ಣ ನದಿ ಮಧ್ಯ ಇರುವ 18 ಪವಿತ್ರ ತೀರ್ಥಗಳು ಮುಳುಗಿದ್ದು, ನೀರಿನ ರಭಸ ಅಪಾಯವನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚಿವೆ.