40 ಮಂದಿ ಕಾರ್ಮಿಕರನ್ನು ಅಮಾನತ್ತುಗೊಳಿಸಿರುವ ಬೆನ್ನ ಹಿಂದೆಯೇ ಮತ್ತೆ 20 ಕಾರ್ಮಿಕರನ್ನು ಅಶಿಸ್ತಿನ ಆರೋಪ ಹೊರೆಸಿ ಸೇವೆಯಿಂದ ಅಮಾನತ್ತುಗೊಳಿಸಿದೆ.
ರಾಮನಗರ (ಡಿ.05): ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿ 40 ಮಂದಿ ಕಾರ್ಮಿಕರನ್ನು ಅಮಾನತ್ತುಗೊಳಿಸಿರುವ ಬೆನ್ನ ಹಿಂದೆಯೇ ಮತ್ತೆ 20 ಕಾರ್ಮಿಕರನ್ನು ಅಶಿಸ್ತಿನ ಆರೋಪ ಹೊರೆಸಿ ಸೇವೆಯಿಂದ ಅಮಾನತ್ತುಗೊಳಿಸಿದೆ.
ಈಗ 20 ಮಂದಿ ಕಾರ್ಮಿಕರ ಮೇಲೆ ಅಶಿಸ್ತಿನ ಆರೋಪ ಹೊರೆಸಿ ವಿಚಾರಣೆ ಕಾಯ್ದಿರಿಸಿ ನೋಟಿಸ್ ಜಾರಿ ಮಾಡಿದೆ. ಇದು ಮುಷ್ಕರ ನಿರತ ಕಾರ್ಮಿಕರನ್ನು ಮತ್ತಷ್ಟುಕೆರಳಿಸಿದೆ.
ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದು ಅಲ್ಲದೆ, ದುರ್ನಡತೆ ಮತ್ತು ಅಶಿಸ್ತು ನಡತೆಯ ಬಗ್ಗೆ ಪ್ರಾಥಮಿಕ ಪುರಾವೆಗಳು ಲಭಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿಯ ಪ್ರಕಟಣೆ ತಿಳಿಸಿದೆ.
ನ.6ರಂದು ಒಬ್ಬರು ಮತ್ತು ನ.12ರಂದು 39 ಮಂದಿ ಕಾರ್ಮಿಕರನ್ನು ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿಲಾಗಿತ್ತು.
ಟೊಯೋಟಾ ಇನೋವಾ ಕ್ರೈಸ್ಟಾ ಮತ್ತಷ್ಟು ಆಕರ್ಷಕ; ಫೇಸ್ಲಿಫ್ಟ್ ವರ್ಶನ್ ಬಿಡುಗಡೆ! .
ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿರುವುದು ಶಿಕ್ಷೆಯಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂಬರ್ಥವೂ ಅಲ್ಲ. ಮುಕ್ತ ವಿಚಾರಣೆ ನಡೆಯಲಿ ಎಂಬ ಕಾರಣಕ್ಕೆ ಅಮಾನತ್ತಿನಲ್ಲಿಡಲಾಗಿದೆ. ಕಾನೂನು ಪ್ರಕಾರ ಈ ಕಾರ್ಮಿಕರಿಗೆ ಸಲ್ಲಬೇಕಾದ ಸವಲತ್ತು ಸಲ್ಲುತ್ತದೆ ಎಂದು ಸಂಸ್ಥೆಯ ವಕ್ತಾರರು (ಹೆಸರು ತಿಳಿಸಿಲ್ಲ) ಹೇಳಿಕೆ ನೀಡಿದ್ದಾರೆ.
ಕ್ಷುಲ್ಲಕ ಕಾರಣ- ಕಾರ್ಮಿಕ ಸಂಘ ಆರೋಪ:
20 ಮಂದಿ ಕಾರ್ಮಿಕರನ್ನು ಅಮಾನತ್ತು ಮಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ನಡೆಯನ್ನು ಟೊಯೋಟಾ ಕಾರ್ಮಿಕರ ಸಂಘ ತೀವ್ರವಾಗಿ ಖಂಡಿಸಿದೆ. ಕ್ಷುಲ್ಲಕ ಕಾರಣ ನೀಡಿ ಕಾರ್ಮಿಕರನ್ನು ಅಮಾನತ್ತಿನಲ್ಲಿಡಲಾಗಿದೆ. ಲಾಕೌಟ್ ಘೋಷಿಸಿ ಕಾರ್ಮಿಕರನ್ನು ಹೊರಗಿಡಲಾಗಿದೆ.
ಸಂಸ್ಥೆಯ ಅಕ್ರಮಗಳ ವಿರುದ್ಧ ಸಂಸ್ಥೆಯ ಹೊರಗೆ ಅನಿವಾರ್ಯವಾಗಿ ಹೋರಾಟ ನಡೆಸುತ್ತಿರುವುದಾಗಿ, ಸಂಸ್ಥೆಗೆ ಸಂಬಂಧವಿಲ್ಲದ ಹೊರಗಿನ ವಿಷಯಗಳ ಆರೋಪದ ಮೇಲೆ ಅಮಾನತ್ತು ಮಾಡಿದೆ ಎಂದು ಕಾರ್ಮಿಕರು ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರವೂ ನೂರಾರು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 5, 2020, 3:02 PM IST