Asianet Suvarna News Asianet Suvarna News

ಗುಂಡ್ಲುಪೇಟೆ: ಹೊಲದಲ್ಲಿ ಕಟಾವಿಗೆ ಬಂದಿದ್ದ 150 ಕೆ.ಜಿ. ಟೊಮೆಟೊ ಕಳವು

ಈ ಬಾರಿ ಟೊಮೆಟೊ ಇಳುವರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಜಮೀನು ಮತ್ತು ಅಂಗಡಿಯಲ್ಲಿ ಟೊಮೆಟೊ ಕಳುವಾಗದಂತೆ ನೋಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. 

150 kg Tomato theft in Field at Gundlupet in Chamarajanagara grg
Author
First Published Jul 21, 2023, 3:15 AM IST

ಗುಂಡ್ಲುಪೇಟೆ(ಜು.21): ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಟೊಮೆಟೊವನ್ನು ಕೆಲವರು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ವಡ್ಡನಹೊಸಹಳ್ಳಿಯಲ್ಲಿ ನಡೆದಿದೆ. 

ಸುಮಾರು 100 ರಿಂದ 150 ಕೆ.ಜಿ. ಟೊಮೆಟೊ ಕಳವಾಗಿದೆ ಎಂದು ದೂರಲಾಗಿದೆ. ಈ ಬಾರಿ ಟೊಮೆಟೊ ಇಳುವರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಜಮೀನು ಮತ್ತು ಅಂಗಡಿಯಲ್ಲಿ ಟೊಮೆಟೊ ಕಳುವಾಗದಂತೆ ನೋಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. 

ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌: ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ

ವಡ್ಡನಹೊಸಹಳ್ಳಿಯ ರೈತ ವಿಜಯ್‌ ಎಂಬುವರು ತಮ್ಮ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಕೆಲವೇ ದಿನಗಳಲ್ಲಿ ಕಟಾವು ಮಾಡುವುದರಲ್ಲಿದ್ದರು.ಅಷ್ಟರಲ್ಲೇ ಒಂದೂವರೆ ಎಕರೆ ಪ್ರದೇಶದಲ್ಲಿದ್ದ 100ರಿಂದ 150 ಕೆ.ಜಿ. ಟೊಮೆಟೊವನ್ನು ಕಳ್ಳರು ಕಟಾವು ಮಾಡಿ ಕದ್ದೊಯ್ದಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios