Asianet Suvarna News Asianet Suvarna News

ಬೆಂಗಳೂರಿಗೆ ಹೋದವರಿಗೆ ಮಂಡ್ಯದಲ್ಲಿ 1 ಸಾವಿರ ರೂ. ದಂಡ..!

ಬೆಂಗ​ಳೂ​ರಿಗೆ ಹೋದ​ವರು ಮತ್ತೆ ವಾಪಸ್‌ ಗ್ರಾಮಕ್ಕೆ ಹಿಂದಿ​ರು​ಗು​ವಂತಿಲ್ಲ, ಒಂದು ವೇಳೆ ಬೆಂಗ​ಳೂ​ರಿಗೆ ಕೂಲಿ ಕೆಲ​ಸಕ್ಕೆ ಹೋಗಿ ವಾಪಸ್‌ ಬಂದರೆ . 1,000 ದಂಡ ತೆರ​ಬೇಕು. ಇದು ಮಂಡ್ಯ ತಾಲೂಕು ಬೇಲೂರು ಗ್ರಾಮದ ಯಜ​ಮಾ​ನರು ತೀರ್ಮಾನ ಮಾಡಿ ಗ್ರಾಮ​ದಲ್ಲಿ ಡಂಗುರ ಸಾರಿಸಿದ್ದಾರೆ.

1 Thousand fine to people who go bangalore in mandya village
Author
Bangalore, First Published Jul 8, 2020, 10:53 AM IST

ಮಂಡ್ಯ(ಜು.08): ಬೆಂಗ​ಳೂ​ರಿಗೆ ಹೋದ​ವರು ಮತ್ತೆ ವಾಪಸ್‌ ಗ್ರಾಮಕ್ಕೆ ಹಿಂದಿ​ರು​ಗು​ವಂತಿಲ್ಲ, ಒಂದು ವೇಳೆ ಬೆಂಗ​ಳೂ​ರಿಗೆ ಕೂಲಿ ಕೆಲ​ಸಕ್ಕೆ ಹೋಗಿ ವಾಪಸ್‌ ಬಂದರೆ . 1,000 ದಂಡ ತೆರ​ಬೇಕು. ಇದು ಮಂಡ್ಯ ತಾಲೂಕು ಬೇಲೂರು ಗ್ರಾಮದ ಯಜ​ಮಾ​ನರು ತೀರ್ಮಾನ ಮಾಡಿ ಗ್ರಾಮ​ದಲ್ಲಿ ಡಂಗುರ ಸಾರಿಸಿದ್ದಾರೆ.

ಗ್ರಾಮದ ಮುಖಂಡ​ರು ಜಾರಿಗೊಳಿಸಿರುವ ನಿರ್ಬಂಧದಿಂದ ಬಡ ಕೂಲಿ ಕಾರ್ಮಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ದಿನ​ನಿ​ತ್ಯದ ಬದು​ಕಿನ ಬಂಡಿ ಎಳೆ​ಯಲು ಮನೆ​ಯಿಂದ ಹೊರಗೆ ಹೋಗಿ ದುಡಿ​ಯು​ವುದು ಅನಿ​ವಾರ್ಯ.

ಪಾಸಿಟಿವ್‌ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್‌ ನಿಲ್ದಾಣ ಸೀಲ್‌ ಡೌನ್

ಆದರೆ, ಕೊರೋನಾ ವ್ಯಾಪ​ಕ​ವಾ​ಗಿ ಹರ​ಡು​ತ್ತಿ​ರು​ವು​ದ​ರಿಂದ ಗ್ರಾಮದ ಮುಖಂಡರು ನಮ್ಮ ಗ್ರಾಮಕ್ಕೂ ಕೊರೋನಾ ವಕ್ಕ​ರಿ​ಸ​ಬ​ಹುದು ಎಂಬ ಶಂಕೆಯ ಹಿನ್ನ​ಲೆ​ಯಲ್ಲಿ ಮುಖಂಡರು ಗ್ರಾಮ​ದಲ್ಲಿ ಡಂಗುರ ಸಾರಿಸಿ ಯಾರೂ ಸಹ ಬೆಂಗ​ಳೂ​ರಿಗೆ ಹೋಗ​ಬಾ​ರದು ಮತ್ತು ಅಲ್ಲಿಂದ ಬರ​ಬಾ​ರದು ಎಂದು ಎಚ್ಚ​ರಿಕೆ ನೀಡಿ​ದ್ದಾರೆ.

ಬೆಂಗಳೂರು ಪ್ರಯಾಣಿಕರಿಗೆ ಗ್ರಾಮಗಳಲ್ಲಿ ತರಾಟೆ, 1000 ದಂಡ!

ಕೊರೋನಾ ಮುಕ್ತ ಗ್ರಾಮ​ವ​ನ್ನಾಗಿ ಮಾಡಲು ಯಜ​ಮಾ​ನರು ತೀರ್ಮಾನಿ​ಸಿದ್ದು, ಗ್ರಾಮ​ದಲ್ಲಿ ಮದ್ಯ ಮಾರಾ​ಟಕ್ಕೂ ನಿಷೇದ ಹೇರ​ಲಾ​ಗಿದೆ. ಈ ಮೊದಲು ಚಿಲ್ಲರೆ ಅಂಗ​ಡಿ​ಗ​ಳಲ್ಲಿ ಕದ್ದು ಮುಚ್ಚಿ ಮದ್ಯ ಮಾರಾಟ ಮಾಡ​ಲಾ​ಗು​ತ್ತಿತ್ತು. ಇದೀಗ ಗ್ರಾಮದ ಮುಖಂಡರ ಕಟು ನಿರ್ಧಾರ​ದಿಂದಾಗಿ ಮದ್ಯ ಮಾರಾ​ಟಕ್ಕೂ ಪೆಟ್ಟು ಬಿದ್ದಿದೆ.

Follow Us:
Download App:
  • android
  • ios