Asianet Suvarna News Asianet Suvarna News

ಕಸಾಯಿಖಾನೆ ವಿರುದ್ಧ ಪ್ರತಿಭಟನಾಕಾರರ ದಾಳಿಗೆ ಪೊಲೀಸ್​ ಅಧಿಕಾರಿ ಬಲಿ


ಅಕ್ರಮ ಗೋ ಸಾಗಾಟ, ಕಸಾಯಿಖಾನೆಗಳ ವಿರುದ್ಧದ ಜನಾಂದೋಲನಗಳ ಮೂಲಕ  ಉತ್ತರ ಪ್ರದೇಶದ ಗದ್ದುಗೆ ಏರಿದ್ದ ಯೋಗಿ ಆದಿತ್ಯನಾಥ್ ಅವರಿಗೆ  ಇಂದಿನ ಅಕ್ರಮ ಕಸಾಯಿಖಾನೆ ವಿರುದ್ಧದ ಹೋರಾಟ ತಲೆಬಿಸಿಯೇರಿಸಿದೆ. 

UP cop among 2 killed by mob protesting cow slaughter in Bulandshahar
Author
Bengaluru, First Published Dec 3, 2018, 7:27 PM IST

ಬುಲಂದ್​ಶಹರ್​( ಉತ್ತರ ಪ್ರದೇಶ), [ಡಿ03]: ಇಂದು [ಸೋಮವಾರ] ಉತ್ತರ ಪ್ರದೇಶದಲ್ಲಿ ದಿಢೀರ್ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸೇರಿ ಇಬ್ಬರು ಬಲಿಯಾಗಿದ್ದು. ರಾಜಕೀಯ ಅಖಾಡಕ್ಕೆ ವೇದಿಕೆಯಾಗಿದೆ.

ಕಸಾಯಿಖಾನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ನಿಯಂತ್ರಿಸಲು ಮುಂದಾದ ಪೊಲೀಸ್​ ಅಧಿಕಾರಿ ಗುಂಪಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿದ್ದ ಅಕ್ರಮ ಕಸಾಯಿಖಾನೆ ವಿರುದ್ಧ ಸ್ಥಳೀಯ ಗುಂಪು ಸೋಮವಾರ ಪ್ರತಿಭಟನೆ ನಡೆಸುತ್ತಿತ್ತು.  ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಗಲಭೆ ನಿಯಂತ್ರಿಸಲು ಮುಂದಾಗಿದ್ದಾರೆ.  ಈ ವೇಳೆ ಪ್ರತಿಭಟನಾ ಕಾರರು ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ಮಾಡಿದ್ದಾರೆ. 

ಅಲ್ಲದೆ, ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪೊಲೀಸ್​ ಅಧಿಕಾರಿಯ ಸಾವು ಸಂಭವಿಸಿರುವ ಬಗ್ಗೆ ಜಿಲ್ಲಾಧಿಕಾರಿ ಅನುಜ್​ ಜಾ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಘಟನೆಯ ತನಿಖೆಗೂ ಆದೇಶಿಸಲಾಗಿದೆ.

Follow Us:
Download App:
  • android
  • ios