ಮನೆಗೆ ಬರ್ಬೇಡಿ, ಹೆಂಡತಿ ಬೈಯ್ತಾಳೆ: ಕಾರ‍್ಯಕರ್ತರಿಗೆ ಡಿಸಿಎಂ ಮನವಿ!| ಅಧಿಕೃತ ಬಂಗಲೆ ದೊರೆಯದ ಕಾರಣ, ಸಮಸ್ಯೆ

ಪುಣೆ[ಜ.12]: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಇನ್ನೂ ಅಧಿಕೃತ ಬಂಗಲೆ ದೊರೆಯದ ಕಾರಣ, ಸಮಸ್ಯೆ ಹೇಳಿಕೊಂಡು ಬರುವ ಕಾರ್ಯಕರ್ತರನ್ನು ಭೇಟಿ ಆಗಲು ಜಾಗದ ಸಮಸ್ಯೆ ಎದುರಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಮನೆಯ ಡೈನಿಂಗ್‌ ಹಾಲ್‌ನಲ್ಲೇ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಇದು ಪತ್ನಿ ಸುನೇತ್ರಾ ಕೋಪಕ್ಕೆ ಕಾರಣವಾಗಿದೆ. ನೀವು ಕಾರ್ಯಕರ್ತರನ್ನು ಭೇಟಿ ಆಗುವುದಾದರೆ ಸರ್ಕಾರ ಬಂಗಲೆ ಸಿಗುವವರೆಗೂ ತಾನು ಈ ಮನೆಯಲ್ಲಿ ಇರುವುದಿಲ್ಲ ಎಂದು ಸುನೇತ್ರಾ ಹೇಳಿದ್ದಾರಂತೆ.

'ಮಹಾ' ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಪುತ್ರ ಆದಿತ್ಯ ಠಾಕ್ರೆಗೆ ಸಿಕ್ತು ಈ ಖಾತೆ!

ಹೀಗಾಗಿ ತೀರಾ ಅಗತ್ಯದ ಕೆಲಸದ ಹೊರತಾಗಿ ಸಣ್ಣಪುಟ್ಟವಿಷಯಗಳಿಗೆ ನನ್ನನ್ನು ಭೇಟಿ ಆಗಲು ಮುಂಬೈಗೆ ಬರಬೇಡಿ ಎಂದು ಅಜಿತ್‌ ಪವಾರ್‌ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.