Punjab Politics: ಹೀಗಾಗದಿದ್ದರೆ ರಾಜಕೀಯಕ್ಕೆ ಗುಡ್ಬೈ: ಚುನಾವಣೆಗೂ ಮುನ್ನ ಸಿಧು ಶಾಕಿಂಗ್ ಹೇಳಿಕೆ!
* ಪಂಜಾಬ್ ಚುನಾವಣೆಗೆ ಇನ್ನು ಕೆಲವೇ ಸಮಯ
* ಚುನಾವಣಾ ಕಣದಲ್ಲಿ ರಾಜಕೀಯ ನಾಯಕರ ಹೇಳಿಕೆಗಳ ಸದ್ದು
* ಹೀಗಾಗದಿದ್ದರೆ ರಾಜಕೀಯಕ್ಕೆ ಗುಡ್ಬೈ ಎಂದ ಸಿಧು
ಚಂಡೀಗಢ(ಜ.03): ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭಾನುವಾರ ಫಗ್ವಾರಾ ತಲುಪಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ಸಾರ್ವಜನಿಕರಿಗೆ 5 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಹೀಗಾಗದಿದ್ದರೆ ರಾಜಕೀಯ ತ್ಯಜಿಸುವುದಾಗಿಯೂ ಹೇಳಿದ್ದಾರೆ. ಭಾಷಣದಲ್ಲಿ ಸಿಧು, ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯ ನಾಯಕರನ್ನು ಬೆದರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರೊಂದಿಗೆ ಅವರು ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಶಿರೋಮಣಿ ಅಕಾಲಿದಳ (ಎಸ್ಎಡಿ) ವಿರುದ್ಧವೂ ಕಿಡಿ ಕಾರಿದ್ದಾರೆ.
ತಮ್ಮ 13 ಅಂಶಗಳ ಕಾರ್ಯಕ್ರಮ ಬಡವರ ಕಲ್ಯಾಣಕ್ಕಾಗಿ ಎಂದು ಭರವಸೆ ನೀಡುವುದಾಗಿ ಸಿಧು ಭಾನುವಾರ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಲಕ್ಷ ಉದ್ಯೋಗ ನೀಡದಿದ್ದರೆ ರಾಜಕೀಯ ತ್ಯಜಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದ ಅವರು, ಕೇಂದ್ರದ ಸಂಸ್ಥೆಗಳಿಂದ ನಾಯಕರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಬಿಜೆಪಿಗೆ ಸೇರಿ ಇಲ್ಲ ಇಲ್ಲವೇ ಕ್ರಮ ಕೈಗೊಳ್ಳಿ ಎಂದು ನಾಯಕರಿಗೆ ಬೆದರಿಕೆಗಳು ಬರುತ್ತಿವೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ಜಲಂಧರ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಿಧು ವಾಗ್ದಾಳಿ ನಡೆಸಿದ್ದಾರೆ. ರೈತರ ಭಯದಿಂದ 5 ವರ್ಷಗಳಿಂದ ಪಕ್ಷದ ಕಚೇರಿ ತೆರೆಯಲಿಲ್ಲ ಎಂದರು. ಬಿಜೆಪಿ ಕಚೇರಿ ತೆರೆಯುವುದೆಂದರೆ ಒಂದೋ ‘ಆ ಜಾವೋ ಸಾಡೇ ಆಫೀಸ್ ಜಲಂಧರ್, ನಹೀ ತಾ ಕರ್ ದಿಯಂಗೇ, ಜೈಲ್ ದೇ ಇಂಡೋರ್’ ಎಂದರ್ಥ. ದೆಹಲಿಯಲ್ಲಿ 22 ಸಾವಿರ ಶಿಕ್ಷಕರು ಬೀದಿಯಲ್ಲಿ ಕುಳಿತಿದ್ದಾರೆ, ಆದರೆ ಸಿಎಂ ಏನೂ ಮಾಡುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಧು ಗುರಿಯಾಗಿಸಿಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆಗಳು ಮುಂದಿನ ಪೀಳಿಗೆಗೆ ಮತ್ತು ಪಂಜಾಬ್ ಅನ್ನು ಮಾಫಿಯಾದಿಂದ ರಕ್ಷಿಸಲು ಸಿಧು ಭಾನುವಾರ ಹೇಳಿದ್ದಾರೆ. ನೀವು ಪಂಜಾಬ್ ಮತ್ತು ಮುಂದಿನ ಪೀಳಿಗೆಯನ್ನು ಉಳಿಸಬೇಕಾದರೆ ನಮಗೆ ಮತ ನೀಡಿ, ಆದರೆ ನೀವು ಪಂಜಾಬ್ ಅನ್ನು ವಾಸಯೋಗ್ಯ ರಾಜ್ಯ ಮಾಡಲು ಬಯಸದಿದ್ದರೆ, ನೀವು ಕಳ್ಳರು ಮತ್ತು ಮಾಫಿಯಾಗಳಿಗೆ ಮತ ಚಲಾಯಿಸಬಹುದು ಎಂದು ಅವರು ಹೇಳಿದರು. ಸತ್ಯ ಮತ್ತು ಸುಳ್ಳು ಇದರಲ್ಲಿ ಒಂದನ್ನು ಆಯ್ಕೆ ಮಾಡಲು ಚುನಾವಣೆ ಉತ್ತಮ ಅವಕಾಶ ಎಂದಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಫಗ್ವಾರಾ ಶಾಸಕ ಬಲ್ವಿಂದರ್ ಸಿಂಗ್ ಧಲಿವಾಲ್ ಆಯೋಜಿಸಿದ್ದ ರ್ಯಾಲಿಗೆ ಆಗಮಿಸಿದ್ದರು.