* ಕರ್ನಾ​ಟ​ಕ-ತಮಿ​ಳ್ನಾಡು ಗಡಿಯಲ್ಲಿ ನಕ್ಸಲ್‌ ಚಟುವಟಿಕೆ* ತಮಿ​ಳು​ನಾಡು ಮುಖಾಂತರ ಸತ್ಯ​ಮಂಗಲ ಹುಲಿ ರಕ್ಷಿತಾರಣ್ಯ ಪ್ರದೇಶ ಸೇರಿ​ದಂತೆ ಇನ್ನಿ​ತರ ಪ್ರದೇ​ಶ​ಗ​ಳಲ್ಲಿ ಚಟುವಟಿಕೆ* ಚಾಮರಾಜನಗರ ಗಡಿಭಾಗದಲ್ಲಿ ಭದ್ರತೆ ಹೆಚ್ಚಳ

ಈರೋ​ಡ್‌(ಜೂ.17): ತಮಿ​ಳು​ನಾಡು ಮುಖಾಂತರ ಸತ್ಯ​ಮಂಗಲ ಹುಲಿ ರಕ್ಷಿತಾರಣ್ಯ ಪ್ರದೇಶ ಸೇರಿ​ದಂತೆ ಇನ್ನಿ​ತರ ಪ್ರದೇ​ಶ​ಗ​ಳಲ್ಲಿ ಮಾವೋ​ವಾ​ದಿ​(​ನಕ್ಸ​ಲ​ರು)ಗಳ ಚಟು​ವ​ಟಿ​ಕೆ​ಗಳು ಹೆಚ್ಚು​ತ್ತಿವೆ ಎಂಬ ಆತಂಕ​ಕಾರಿ ಮಾಹಿತಿ ಲಭ್ಯ​ವಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ತಮಿ​ಳು​ನಾ​ಡು-ಕರ್ನಾ​ಟಕ ಗಡಿ ಪ್ರದೇ​ಶ​ಗ​ಳಲ್ಲಿ ಭದ್ರತಾ ವ್ಯವ​ಸ್ಥೆ​ಯನ್ನು ಬಿಗಿ​ಗೊ​ಳಿ​ಸ​ಲಾ​ಗಿದೆ.

ಮಾವೋವಾದಿಗಳ ನುಸು​ಳು​ವಿಕೆ ತಡೆ​ಯಲು ಕರ್ನಾ​ಟಕ ಮತ್ತು ತಮಿ​ಳು​ನಾ​ಡಿನ ಗಡಿ ಪ್ರದೇ​ಶ​ಗ​ಳಾದ ತಾಳ​ವಾಡಿ, ಹಸ್ಸ​ನೂರ್‌, ಭವಾ​ನಿ​ಸಾ​ಗರ, ಕಡಂಬೂರು ಮತ್ತು ಬರಗೂರು ಪೊಲೀ​ಸ್‌ ಠಾಣೆ​ಗ​ಳಲ್ಲಿ ಸಶಸ್ತ್ರ ಪೊಲೀಸ್‌ ಸಿಬ್ಬಂದಿ​ಯನ್ನು ನಿಯೋ​ಜಿ​ಸಲಾ​ಗಿದೆ ಎಂದು ಬುಧ​ವಾರ ಪೊಲೀ​ಸರು ಮಾಹಿ​ತಿ ನೀಡಿದ್ದಾರೆ.

ಅಲ್ಲದೆ ಈರೋಡ್‌ ಜಿಲ್ಲೆಯ ಅರ​ಣ್ಯ​ಗ​ಳಿಂದ ನಕ್ಸ​ಲೀ​ಯರು ನುಸು​ಳ​ದಂತೆ ತಮಿ​ಳು​ನಾ​ಡು-ಕರ್ನಾ​ಟ​ಕದ ಗಡಿಯ 10 ಚೆಕ್‌​ಪೋ​ಸ್ಟ್‌​ಗ​ಳಲ್ಲಿ ದಿನದ 24 ಗಂಟೆಯೂ ಗಸ್ತು ತಿರು​ಗಲು ಹೆಚ್ಚು​ವರಿ ಸಶ​ಸ್ತ್ರ​ಪ​ಡೆ​ಗ​ಳನ್ನು ನಿಯೋ​ಜಿ​ಸ​ಲಾ​ಗಿದೆ. ಜೊತೆ​ಗೆ ವಿಶೇಷ ತರ​ಬೇತಿ ಪಡೆದ ಕಮಾಂಡೋ ಸಿಬ್ಬಂದಿ​ಯನ್ನು ಸಶಸ್ತ್ರ ಮೀಸಲು ಪೊಲೀಸ್‌ ಪಡೆ​ಯಿಂದ ಆಯ್ಕೆ ಮಾಡ​ಲಾ​ಗಿದ್ದು, ಅವ​ರನ್ನು ಪೊಲೀಸರ ಜತೆ ಅರ​ಣ್ಯ​ಗ​ಳಿಗೆ ರವಾ​ನಿ​ಸ​ಲಾ​ಗು​ತ್ತದೆ ಎಂದು ಪೊಲೀಸ್‌ ಸೂಪ​ರಿಂಟೆಂಡೆಂಟ್‌ ವಿ. ಶಶಿಮೋಹನ್‌ ತಿಳಿ​ಸಿ​ದ್ದಾರೆ.