350 Kg ಗಾಂಜಾ(350 Kg Ganja) ಜೊತೆ ಸಿಕ್ಕಿಬಿದ್ದಾತನಿಗೆ ಜಾಮೀನು(Bail) ಸಿಕ್ಕಿಬಿದ್ದಾತನಿಗೆ ಜಾಮೀನು ನೀಡಿದ ಅಲಹಬಾದ್ ಹೈಕೋರ್ಟ್(Allahabad HC)

ಅಲಹಾಬಾದ್(ಅ.28): ದೇಶದಲ್ಲಿ ಭಾರೀ ಸುದ್ದಿಯಾಗಿದ್ದ 350 ಕೆಜಿ ಗಾಂಜಾ(Ganja) ಪ್ರಕರಣದಲ್ಲಿ ವ್ಯಕ್ತಿಗೆ ಜಾಮೀನು ನೀಡಲಾಗಿದೆ. ಸುಮಾರು 350 ಕೆಜಿ ಗಾಂಜಾವನ್ನು ಇಟ್ಟುಕೊಂಡಿದ್ದ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಬಂಧಿಸಲ್ಪಟ್ಟಿದ್ದ ಅಯೋಧ್ಯೆಯ ವ್ಯಕ್ತಿಗೆ ಅಲಹಾಬಾದ್(Allahabad HC)ಹೈಕೋರ್ಟ್ ಜಾಮೀನು ನೀಡಿದೆ.

Add Asianetnews Kannada as a Preferred SourcegooglePreferred

2019 ರ ಜನವರಿಯಲ್ಲಿ ಎನ್‌ಡಿಪಿಎಸ್(NDPS) ಕಾಯಿದೆಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿ ಅಯೋಧ್ಯೆ ನಿವಾಸಿ ಕಲೀಮ್‌ ವಿರುದ್ಧ ದೂರು ದಾಖಲಾಗಿತ್ತು. ಈಗ ಹೈಕೋರ್ಟ್‌ನ ಲಕ್ನೋ ಪೀಠವು ಕಲೀಮ್‌ಗೆ ಜಾಮೀನು ಮಂಜೂರು ಮಾಡಿದೆ. ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು ಒಳಗೊಂಡ ಭಾರತದ ಸಂವಿಧಾನದ 21 ನೇ ವಿಧಿಯ ಪ್ರಕಾರ ಜಾಮೀನಿಗೆ ಸೂಕ್ತ ಎಂದು ತೀರ್ಪು ನೀಡಿತು.

ಅಕ್ಟೋಬರ್ 21 ರಂದು ಆರೋಪಿಗಳಿಗೆ ಜಾಮೀನು ನೀಡುವಾಗ, ನ್ಯಾಯಮೂರ್ತಿ ಸಿದ್ಧಾರ್ಥ್ ಅವರ ಪೀಠವು ಆರೋಪಗಳ ಸ್ವರೂಪ ಮತ್ತು ಅದಕ್ಕೆ ಪೂರಕವಾದ ಸಾಕ್ಷ್ಯದ ಸ್ವರೂಪದ ದೃಷ್ಟಿಯಿಂದ ಆರೋಪಿಯನ್ನು ಜಾಮೀನಿನ ಮೇಲೆ ವಿಸ್ತರಿಸುವ ಮೌಲ್ಯದ ಪ್ರಕರಣವನ್ನು ಪರಿಗಣಿಸಿತು.

ಆರೋಪಿಗಳು ಜನವರಿ 18, 2019 ರಿಂದ ಜೈಲಿನಲ್ಲಿದ್ದ. ಎನ್‌ಸಿಬಿಯು(NCB) ಆರೋಪಿಯನ್ನು ಭಾರೀ ಅಕ್ರಮ ಗಾಂಜಾ ಸ್ಟಾಕ್ ಜೊತೆ ಬಂಧಿಸಿತ್ತು. ಆದ್ದರಿಂದ ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಅಯೋಧ್ಯೆ ಜಿಲ್ಲೆಯ ಎನ್‌ಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಎಫ್‌ಐಆರ್ ದಾಖಲಾಗಿದೆ.

ಆರೋಪಿಯು ತನ್ನ ಜಾಮೀನು ಅರ್ಜಿಯಲ್ಲಿ, ಅಲ್ಲಿ ಯಾರೂ ಸ್ವತಂತ್ರ ಸಾಕ್ಷಿಗಳಿರಲಿಲ್ಲ. ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದಾನೆ. 
ಡ್ರಗ್ಸ್ ಸೀಜ್ ಮಾಡಿರುವುದಕ್ಕೆ ಯಾವುದೇ ಸ್ವತಂತ್ರ ಸಾಕ್ಷಿಗಳಿಲ್ಲ ಎಂದು ಅವರು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದರೆ, ಜಾಮೀನಿನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಅವರು ಪೀಠಕ್ಕೆ ಭರವಸೆ ನೀಡಿದ್ದಾರೆ. ಜಾಮೀನು ಅರ್ಜಿಯನ್ನು ವಿರೋಧಿಸಿದ ಎನ್‌ಸಿಬಿ ವಕೀಲರು, ಆರೋಪಿಗಳ ಮೇಲೆ ಅಂತಹ ಭಾರೀ ನಿಷಿದ್ಧ ಗಾಂಜಾವನ್ನು ಹೋಗಿ ಇಡುವ ಯಾವುದೇ ಸಂದರ್ಭವಿರಲಿಲ್ಲ ಎಂದು ವಾದಿಸಿದ್ದಾರೆ. ಪ್ರಕರಣದ ಪೂರ್ವ-ವಿಚಾರಣಾ ಹಂತದಲ್ಲಿ ಆರೋಪಿಯ ಮುಗ್ಧತೆಯನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಎನ್‌ಸಿಬಿ ವಕೀಲರು ವಾದಿಸಿದರು.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಅವನು ಇದೇ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾನೆ ಎಂದು ಎನ್‌ಸಿಬಿ ವಕೀಲರು ವಾದಿಸಿದ್ದರು. ಆದರೂ ಪೀಠವು ಜಾಮೀನು ಅರ್ಜಿಯನ್ನು ಅಂಗೀಕರಿಸಿತು.