Asianet Suvarna News Asianet Suvarna News

ಕತ್ತರಿ ಕಾಣೆ: ತಾಳ್ಮೆ ಕಳೆದುಕೊಂಡ ಸಿಎಂ ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ!

  • ರಿಬ್ಬನ್ ಕತ್ತರಿಸಲು ಕತ್ತರಿ ಕಾಣೆ, ಉದ್ಘಾಟನೆ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ
  • ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ ಮಾಡಿದ ವಿಡಿಯೋ ವೈರಲ್
  • ಕಮ್ಯೂನಿಟಿ ಹೌಸ್ ಉದ್ಘಾಟನೆ ವೇಳೆ ನಡೆದ ಘಟನೆ
Telangana cm K Chandrashekar Rao pulls out ribbon after not getting scissors for inauguration ckm
Author
Bengaluru, First Published Jul 5, 2021, 4:17 PM IST

ತೆಲಂಗಾಣ(ಜು.05):  ಉದ್ಘಾಟನೆಗೆ ವೇದಿಕೆ ರೆಡಿಯಾಗಿದೆ, ಕಾರ್ಯಕ್ರಮಕ್ಕೆ ತೆಲಂಗಾಣ ಮುಖ್ಯಮಂತ್ರಿ  ಕೆ ಚಂದ್ರಶೇಖರ್ ರಾವ್ ಆಗಮಿಸಿದ್ದಾರೆ. ಸುತ್ತಲು ಜನ ನಿಂತಿದ್ದಾರೆ. ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡಲು ಸಜ್ಜಾದ ಮುಖ್ಯಮಂತ್ರಿಗೆ ಕತ್ತರಿ ಇಲ್ಲ. ಆಯೋಜಕರು ಕತ್ತರಿಗಾಗಿ ತಡಬಡಿಸಿದ್ದಾರೆ. ಒಂದೆರಡು ನಿಮಿಷ ಕಾದರೂ ಕತ್ತರಿ ಬರಲಿಲ್ಲ. ತಾಳ್ಮೆ ಕಳೆದುಕೊಂಡ ರಾವ್, ಕೈಯಲ್ಲಿ ರಿಬ್ಬನ್ ಎಳೆದು ಉದ್ಘಾಟನೆ ಮಾಡಿದ್ದಾರೆ.

ಕೋಳಿ ಮರಿಗೆ ಸಿಹಿ ಮುತ್ತು ನೀಡಿ ಬಿಗಿದಪ್ಪಿದ ಕೋತಿ ಮರಿ; ಹೃದಯಸ್ಪರ್ಶಿ ವಿಡಿಯೋ ವೈರಲ್!

ತೆಲಂಗಾಣದ ಮಂದೆಪಲ್ಲಿ ಗ್ರಾಮದಲ್ಲಿನ ಕಮ್ಯೂನಿಟಿ ಹೌಸ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ತಕ್ಕ ಸಮಯಕ್ಕೆ ಮುಖ್ಯಮಂತ್ರಿ ಉದ್ಘಾಟನೆಗೆ ಹಾಜರಾಗಿದ್ದಾರೆ.  

 

ಆಯೋಜಕರು ಮಾಡಿದ ಸಣ್ಣ ಎಡವಟ್ಟಿನಿಂದ ಸಿಎಂ ಸಿಟ್ಟಾಗಿದ್ದಾರೆ. ಉದ್ಘಾಟನೆ ಮಾಡಲು ಅಲಂಕೃತ ಟ್ರೇ ನೀಡಲಾಗಿತ್ತು. ಈ ಟ್ರೇನಲ್ಲಿ ಕತ್ತರಿ ಇಡಲು ಆಯೋಜಕರು ಮರೆತಿದ್ದಾರೆ. ರಿಬ್ಬನ್ ಕತ್ತರಿಸಲು ರಾವ್ ಮುಂದಾದಾಗ ಕತ್ತರಿ ಇಲ್ಲ. ಆಯೋಜಕರು ಕತ್ತರಿಗಾಗಿ ಹುಡುಕಾಟ ನಡೆಸಿದ್ದಾರೆ. ತಕ್ಷಣಕ್ಕೆ ಸಿಗಲಿಲ್ಲ.

ಸುಂದರಿಯ ನೋಡಿ ಕಮೆಂಟರಿ ಬಿಟ್ಟು ಹಾಡು ಹಾಡಿದ ಕಮೆಂಟೇಟರ್; ವಿಡಿಯೋ ವೈರಲ್!

ಇತ್ತ ಸಿಎಂ ತಾಳ್ಮೆ ಕಳೆದುಕೊಂಡಿದ್ದಾರೆ. ಬಳಿಕ ಕೈಯಲ್ಲಿ ರಿಬ್ಬನ್ ಎಳದು ಉದ್ಘಾಟನೆ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

Follow Us:
Download App:
  • android
  • ios