* 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದ್ದ ಬಿಜೆಪಿ* ಮತ್ತದೇ ಪರಿಸ್ಥಿತಿ ಬರಬಾರದೆಂದು ಈ ಬಾರಿ ಎಚ್ಚರದಿಂದಿದೆ ಕಾಂಗ್ರೆಸ್‌* TMC ಹಾಗೂ AAP ಜೊತೆ ಮಾತನಾಡುತ್ತಿದ್ದೇವೆ ಎಂದ ಕಾಂಗ್ರೆಸ್ ಹಿರಿಯ ನಾಯಕ

ಪಣಜಿ(ಮಾ.09): 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಗೆದ್ದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಅಂದು ಬಿಜೆಪಿ ಗೆದ್ದಿತ್ತು. ಕಳೆದ ಬಾರಿಯ ತಪ್ಪುಗಳಿಂದ ಪಾಠ ಕಲಿತ ಕಾಂಗ್ರೆಸ್ ಈಗಾಗಲೇ ಎಲ್ಲಾ ಚುನಾವಣಾ ರಾಜ್ಯಗಳಲ್ಲಿ ತನ್ನದೇ ಅಧಿಕಾರಿಗಳನ್ನು ನೇಮಿಸಿದೆ. ಈಗಾಗಲೇ ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಗೋವಾಗೆ ತೆರಳಿದ್ದಾರೆ. ಗೋವಾದಲ್ಲಿ ಕಳೆದ ಬಾರಿಯಂತೆ ಯಾವುದೇ ಪ್ರಮಾದ ಆಗಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಿರಿಯ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಗೋವಾ ಡೆಸ್ಕ್ ಉಸ್ತುವಾರಿ ದಿನೇಶ್ ಗುಂಡೂರಾವ್ ಕೂಡಾ ಗೋವಾ ತಲುಪಿದ್ದಾರೆ.

Add Asianetnews Kannada as a Preferred SourcegooglePreferred

ಗೋವಾ ತಲುಪಿದ ಪಿ ಚಿದಂಬರಂ:

ಹೌದು, ಕಳೆದ ಬಾರಿಯ ತಪ್ಪುಗಳನ್ನು ನಾವು ಮಾಡುವುದಿಲ್ಲ ಮತ್ತು ಅದಕ್ಕಾಗಿಯೇ ನಾವು ಈ ಬಾರಿ ಎಎಪಿ ಮತ್ತು ತೃಣಮೂಲದೊಂದಿಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದರು. ಚುನಾವಣಾ ಪ್ರಚಾರದ ವೇಳೆ ಚಿದಂಬರಂ ಆಪ್ ಮತ್ತು ತೃಣಮೂಲ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಎರಡೂ ಪಕ್ಷಗಳು ವೋಟ್ ಕಟ್ ಮಾಡುತ್ತಿವೆ ಮತ್ತು ಎರಡೂ ಪಕ್ಷಗಳು ಪಕ್ಷಾಂತರಿಗಳಿಂದ ತುಂಬಿವೆ ಎಂದು ಹೇಳಿದ್ದಾರೆ. ಬಿಜೆಪಿಯೇತರ ಮತಗಳನ್ನು ಕಡಿಯಲು ಎರಡೂ ಪಕ್ಷಗಳು ಇಲ್ಲಿಗೆ ಬಂದಿವೆ ಎಂದ ಅವರು, ಬೇರೆ ಪಕ್ಷಗಳಿಂದ ಬಂದಿರುವ ಇಂತಹವರಿಗೆ ಎರಡೂ ಪಕ್ಷಗಳು ಟಿಕೆಟ್ ನೀಡಿವೆ.

ಡಬಲ್ ಸೆಕ್ಯುರಿಟಿ ಮಾಡುತ್ತಿದ್ದಾರೆ

ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಎನ್‌ಡಿಟಿವಿ ಜೊತೆ ಮಾತನಾಡುತ್ತಾ, “ನಾವು ಮಮತಾ ಬ್ಯಾನರ್ಜಿ ಅವರ ತೃಣಮೂಲ ಮತ್ತು ಕೇಜ್ರಿವಾಲ್ ಅವರ ಎಎಪಿ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕಳೆದ ಬಾರಿಯ ಚುನಾವಣೆಯನ್ನು ಉಲ್ಲೇಖಿಸಿದ ಅವರು, ಕಳೆದ ಬಾರಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಆದರೆ ನಾವು ಈ ಬಾರಿ ಡಬಲ್ ಕಾವಲು ಮಾಡುತ್ತಿದ್ದೇವೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಮನೆಯಲ್ಲಿ ಕಳ್ಳತನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ನಾವು 17 ಸ್ಥಾನಗಳನ್ನು ಗೆದ್ದಿದ್ದೇನೆ ಆದರೆ ಬಿಜೆಪಿ 13 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು. ಎರಡು ವರ್ಷಗಳ ನಂತರ, ಅದರ 15 ಶಾಸಕರು ಪಕ್ಷದಿಂದ ಬಂಡಾಯವೆದ್ದು ಬಿಜೆಪಿ ಸೇರಿದಾಗ ಕಾಂಗ್ರೆಸ್‌ಗೆ ಇನ್ನಷ್ಟು ಮುಜುಗರದ ಪರಿಸ್ಥಿತಿ ಬಂದಿತು. ಇವರಲ್ಲಿ ಬಿಜೆಪಿಯಿಂದ ಉಪ ಮುಖ್ಯಮಂತ್ರಿಯಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಬು ಕಾವ್ಲೇಕರ್ ಸೇರಿದ್ದಾರೆ.

ಗೋವಾ ಎಕ್ಸಿಟ್ ಪೋಲ್‌ಗಳ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ

ನೀವು ತೃಣಮೂಲ ಮತ್ತು ಆಮ್ ಆದ್ಮಿ ಪಕ್ಷದೊಂದಿಗೆ ಮಾತನಾಡುತ್ತಿದ್ದೀರಾ ಎಂಬ ಪ್ರಶ್ನೆಗೆ, "ಇಲ್ಲ, ನಾನು ನೇರವಾಗಿ ಮಾತನಾಡುತ್ತಿಲ್ಲ ಆದರೆ ಗೋವಾದ ನಮ್ಮ ನಾಯಕರು ಇತರ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ನಾವು ಯಾವುದೇ ವೆಚ್ಚದಲ್ಲಿ ಸರ್ಕಾರ ರಚಿಸಲು ಸಿದ್ಧರಿದ್ದೇವೆ" ಎಂದು ಚಿದಂಬರಂ ಹೇಳಿದರು. ಎಕ್ಸಿಟ್ ಪೋಲ್‌ಗಳು ಗೋವಾದಲ್ಲಿ ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನು ತೋರಿಸುತ್ತಿವೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್ ತನ್ನ ಸಂಭಾವ್ಯ ಶಾಸಕರನ್ನು ಬೇರೆ ಪಕ್ಷಕ್ಕೆ ಹೋಗದಂತೆ ರಕ್ಷಿಸಲು ಉತ್ತರ ಗೋವಾದ ಕೆಲವು ರೆಸಾರ್ಟ್‌ಗಳಿಗೆ ಕರೆತರಲು ಪ್ರಾರಂಭಿಸಿದೆ ಎಂಬ ವರದಿಗಳಿವೆ. ಎಕ್ಸಿಟ್ ಪೋಲ್‌ಗಳಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಪಕ್ಷಕ್ಕೂ ಕೆಲವು ಸ್ಥಾನಗಳನ್ನು ನೀಡಲಾಗಿದೆ. ಇದರೊಂದಿಗೆ ಪಕ್ಷದಲ್ಲಿ ಈಗಿನಿಂದಲೇ ಮಾತುಕತೆ ಶುರುವಾಗಿದೆ.