Asianet Suvarna News Asianet Suvarna News

ಜಡ್ಜ್‌​ ನೇಮಕ ವಿಳಂಬ: ಸುಪ್ರೀಂ ಗರಂ; ಕೇಂದ್ರದಿಂದ ಮತ್ತೆ 20 ನ್ಯಾಯಮೂರ್ತಿಗಳ ಹೆಸರು ವಾಪಸ್..!

ಕಾಲಮಿತಿಯಲ್ಲಿ ಸರ್ಕಾರ ಜಡ್ಜ್‌ಗಳನ್ನು ನೇಮಿಸುತ್ತಿಲ್ಲ, ಇದರಿಂದ ವ್ಯವಸ್ಥೆಯೇ ಕೆಡುತ್ತಿದೆ. ಕೊಲಿಜಿಯಂ 2ನೇ ಬಾರಿ ಶಿಫಾರಸು ಮಾಡಿದರೆ ಸರ್ಕಾರ ಒಪ್ಪಲೇಬೇಕು ಎಂದು ಸುಪ್ರೀಂಕೋರ್ಟ್‌ ತಾಕೀತು ಮಾಡಿದೆ. 

supreme court raps centre for sitting on recommendations for appointment of judges ash
Author
First Published Nov 29, 2022, 8:28 AM IST

ನವ​ದೆ​ಹ​ಲಿ: ಉನ್ನತ ನ್ಯಾಯಾ​ಲ​ಯ​ಗ​ಳಿಗೆ ನ್ಯಾಯಾ​ಧೀ​ಶರ ನೇಮ​ಕದಲ್ಲಿ ಆಗು​ತ್ತಿ​ರುವ ವಿಳಂಬದ ಬಗ್ಗೆ ಮತ್ತೊಮ್ಮೆ ಕಿಡಿ​ಕಾ​ರಿ​ರುವ ಸುಪ್ರೀಂಕೋರ್ಟ್‌, ‘ಕೇಂದ್ರವು ನಿರ್ಧಾರ ಕೈಗೊ​ಳ್ಳು​ವಲ್ಲಿ ಮಾಡು​ತ್ತಿ​ರುವ ವಿಳಂಬವು ನೇಮ​ಕಾತಿ ಪ್ರಕ್ರಿ​ಯೆಯ ವ್ಯವ​ಸ್ಥೆ​ಯನ್ನೇ ಹತಾ​ಶ​ಗೊ​ಳಿ​ಸು​ತ್ತಿ​ದೆ’ ಎಂದು ಚಾಟಿ ಬೀಸಿ​ದೆ. ಇದೇ ವೇಳೆ, ಕಾಲ​ಮಿ​ತಿ​ಯಲ್ಲಿ ನ್ಯಾಯಾ​ಧೀ​ಶರ ನೇಮಕ ಆಗ​ಬೇಕು ಎಂದು ಈ ಹಿಂದೆಯೇ ಸುಪ್ರೀಂಕೋರ್ಟ್‌ ಆದೇಶ ಹೊರ​ಡಿ​ಸಿತ್ತು. ಆ ಆದೇಶ ಪಾಲನೆ ಆಗ​ಲೇ​ಬೇಕು ಎಂದಿ​ರುವ ಕೋರ್ಚ್‌, ತನ್ನ ಆದೇಶ ಪಾಲನೆ ಆಗು​ವಂತೆ ನೋಡಿಕೊಳ್ಳ​ಬೇಕು ಎಂದು ಸರ್ಕಾ​ರದ ವಕೀ​ಲ​ರಾದ ಸಾಲಿ​ಸಿ​ಟರ್‌ ಜನ​ರಲ್‌ ತುಷಾರ್‌ ಮೆಹ್ತಾ ಹಾಗೂ ಅಟಾರ್ನಿ ಜನ​ರಲ್‌ ಆರ್‌.ವೆಂಕ​ಟ​ರ​ಮಣಿ ಅವ​ರಿ​ಗೆ ಸೂಚಿಸಿ ಡಿಸೆಂಬರ್‌ 8ಕ್ಕೆ ಮುಂದಿನ ವಿಚಾ​ರಣೆ ನಿಗ​ದಿ​ಪ​ಡಿ​ಸಿ​ದೆ.

ಉನ್ನತ ನ್ಯಾಯಾ​ಲ​ಯ​ಗ​ಳಿಗೆ ನ್ಯಾಯಾ​ಧೀ​ಶರ ನೇಮ​ಕಕ್ಕೆ ಸುಪ್ರೀಂಕೋರ್ಟ್‌ನ ಕೊಲಿ​ಜಿಯಂ ಮಂಡಳಿ ಮಾಡುವ ಶಿಫಾ​ರ​ಸು​ಗ​ಳನ್ನು ಕಾಲ​ಮಿ​ತಿ​ಯಲ್ಲಿ ಸರ್ಕಾರ ಒಪ್ಪಿ​ಕೊ​ಳ್ಳ​ಬೇಕು ಎಂದು ಕಳೆದ ವರ್ಷ ಏ.20ರಂದು ಸುಪ್ರೀಂ ಕೋರ್ಚ್‌ ಆದೇಶ ಹೊರ​ಡಿ​ಸಿತ್ತು. ಆದರೆ ಆ ಆದೇಶ ಪಾಲನೆ ಆಗು​ತ್ತಿಲ್ಲ ಎಂದು ಬೆಂಗ​ಳೂರು ವಕೀ​ಲರ ಸಂಘ ಅರ್ಜಿ ಸಲ್ಲಿ​ಸಿ​ತ್ತು.

ಇದನ್ನು ಓದಿ: ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ

ಸೋಮ​ವಾರ ಇದರ ವಿಚಾ​ರಣೆ ಮುಂದು​ವ​ರಿ​ಸಿದ ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ಹಾಗೂ ನ್ಯಾಯಮೂರ್ತಿ ಅಭಯ್‌ ಓಕಾ, ‘ಒಮ್ಮೆ ಶಿಫಾ​ರ​ಸಾದ ಹೆಸ​ರನ್ನು ಕೊಲಿ​ಜಿಯಂ ಪುನ​ರು​ಚ್ಚ​ರಿ​ಸಿತು ಎಂದರೆ ಸರ್ಕಾರ ಅಂಗೀ​ಕ​ರಿ​ಸ​ಲೇ​ಬೇಕು ಎಂದಿ​ದೆ. ಆದರೆ ಸರ್ಕಾರ ಅಂಗೀ​ಕ​ರಿ​ಸು​ತ್ತಿಲ್ಲ. ಕೇಂದ್ರ ಸರ್ಕಾರ ನ್ಯಾಯಾ​ಧೀ​ಶರ ನೇಮ​ಕ​ಕ್ಕೆ 2014ರಲ್ಲಿ ನ್ಯಾಯಾಂಗ ನೇಮಕ ಆಯೋ​ಗ ಕಾಯ್ದೆ ಜಾರಿ​ಗೊ​ಳಿಸಲು ಮುಂದಾ​ಗಿತ್ತು. 2015ರಲ್ಲಿ ಈ ಕಾಯ್ದೆ​ಯನ್ನು ಸುಪ್ರೀಂಕೋರ್ಟ್‌ ರದ್ದು​ಗೊ​ಳಿ​ಸಿತು. ಇದನ್ನೇ ನೆಪ ಮಾಡಿ​ಕೊಂಡು ಸರ್ಕಾ​ರವು ಜಡ್ಜ್‌​ಗಳ ನೇಮ​ಕಕ್ಕೆ ಅನು​ಮೋ​ದನೆ ನೀಡು​ವು​ದನ್ನು ವಿಳಂಬ ಮಾಡ​ಕೂ​ಡ​ದು’ ಎಂದು ಹೇಳಿ​ತು.

‘ನಾವು ಒಂದೇ ಸಲಕ್ಕೆ ಹಲವು ಹೆಸ​ರು​ಗ​ಳನ್ನು ಶಿಫಾ​ರಸು ಮಾಡು​ತ್ತೇವೆ. ಆಗ ಆ ಗುಂಪಿ​ನಲ್ಲಿ ಒಬ್ಬ​ರ ಹೆಸ​ರನ್ನು ಮಾತ್ರ ಸರ್ಕಾರ ಅನು​ಮೋ​ದಿಸಿ, ಉಳಿ​ದ​ವರ ಹೆಸ​ರನ್ನು ಬಾಕಿ ಉಳಿ​ಸಿ​ಕೊ​ಳ್ಳು​ತ್ತ​ದೆ. ಹೀಗಾ​ದಾಗ ಸೇವಾ ಹಿರಿ​ತ​ನ​ದಲ್ಲಿ ವ್ಯತ್ಯಾ​ಸ​ವಾ​ಗು​ತ್ತದೆ. ನಾವು ಸೇವಾ ಹಿರಿ​ತನ ಗಮ​ನಿಸಿ ಮಾಡಿದ ಶಿಫಾ​ರ​ಸು​ಗ​ಳಿಗೆ ಚ್ಯುತಿ ಬರು​ತ್ತ​ದೆ’ ಎಂದು ಕೋರ್ಟ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ತು.
‘ಕೆಲವು ಶಿಫಾ​ರ​ಸು​ಗ​ಳನ್ನು ಸರ್ಕಾರ ಒಂದೂ​ವರೆ ವರ್ಷ​ದಿಂದ ಬಾಕಿ ಇರಿ​ಸಿ​ಕೊಂಡಿದೆ. ಇದ​ರಿಂದಾಗಿ ಜಡ್ಜ್‌ ಹುದ್ದೆಗೆ ಶಿಫಾ​ರ​ಸಾದ ಕೆಲವು ವಕೀ​ಲರು ಬೇಸತ್ತು ತಮ್ಮ ಹೆಸ​ರನ್ನು ಹಿಂಪ​ಡೆ​ಯು​ತ್ತಿ​ದ್ದಾ​ರೆ. ಸ​ರ್ಕಾರ ಮಾಡುವ ವಿಳಂಬ​ದಿಂದ ಜಡ್ಜ್‌​ಗಳ ನೇಮಕ ವ್ಯವ​ಸ್ಥೆಯೇ ಹತಾ​ಶ​ವಾ​ಗು​ತ್ತಿ​ದೆ’ ಎಂದು ಪೀಠ ಕಿಡಿ​ಕಾ​ರಿ​ತು.

ಇದನ್ನೂ ಓದಿ: ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ

ಇದ​ಕ್ಕೆ ಪ್ರತಿ​ಕ್ರಿ​ಯಿ​ಸಿದ ಅಟಾರ್ನಿ ಜನ​ರಲ್‌ ವೆಂಕ​ಟ​ರ​ಮಣಿ, ‘ನವೆಂಬರ್‌ 11ರಂದು ಈ ಕುರಿತು ನೀವು ನೀಡಿದ ಸೂಚ​ನೆ​ಗಳ ಬಗ್ಗೆ ಸರ್ಕಾರ ಚರ್ಚೆ ನಡೆ​ಸು​ತ್ತಿದೆ. ಶೀಘ್ರ ನಮ್ಮ ಪ್ರತಿ​ಕ್ರಿಯೆ ಸಲ್ಲಿಸುತ್ತೇವೆ’ ಎಂದರು. ಆಗ ಪೀಠವು, ‘ಡಿ.ಸೆಂಬರ್‌ 8ಕ್ಕೆ ವಿಚಾ​ರಣೆ ಮುಂದೂ​ಡು​ತ್ತೇವೆ. ಅಷ್ಟರೊ​ಳಗೆ ನೆಲದ ಕಾನೂನು (ಕೋರ್ಟ್ ಆದೇ​ಶ) ಪಾಲನೆ ಆಗು​ವಂತೆ ಸರ್ಕಾ​ರಕ್ಕೆ ನೀವು ಸಲಹೆ ನೀಡು​ತ್ತೀ​ರಿ ಎಂದು ಅಪೇ​ಕ್ಷಿ​ಸು​ತ್ತೇ​ವೆ’ ಎಂದು ಹೇಳಿ ಕಲಾಪ ಮುಗಿ​ಸಿ​ತು.

ಕೊಲಿಜಿಯಂ ಬಗ್ಗೆ ಆಕ್ಷೇಪಿಸಿದ್ದಕ್ಕೆ ಗರಂ
ನ್ಯಾಯಾ​ಧೀ​ಶರ ನೇಮಕಕ್ಕೆ ಶಿಫಾ​ರಸು ಮಾಡುವ ಸಮಿ​ತಿ​ಯಾದ ‘ಕೊ​ಲಿ​ಜಿ​ಯಂ’ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಆಡಿದ ಮಾತು​ಗ​ಳಿಗೆ ಸುಪ್ರೀಂಕೋರ್ಟ್‌ ಸೋಮ​ವಾರ ನೇರಾ​ನೇರ ಆಕ್ಷೇಪ ವ್ಯಕ್ತ​ಪ​ಡಿ​ಸಿದೆ. ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಕೊಲಿಜಿಯಂ ಬಗ್ಗೆ ಮಾತನಾಡಿದ್ದಾರೆ. ಅಗತ್ಯಬಿದ್ದರೆ ಕ್ರಮ ಜರುಗಿಸುತ್ತೇವೆ ಎಂದು ನ್ಯಾಯಪೀಠ ಕಿಡಿಕಾರಿದೆ.

ಇದನ್ನೂ ಓದಿ: ಮತ್ತೆ ಕೇಂದ್ರ ಸರ್ಕಾರ-ನ್ಯಾಯಾಂಗದ ಮಧ್ಯೆ ಸಂಘರ್ಷ?

ಮತ್ತೆ 20 ಜಡ್ಜ್‌ಗಳ ಹೆಸರು ವಾಪಸ್‌!
ವಿವಿಧ ಹೈಕೋರ್ಟ್‌ಗಳಿಗೆ ನೇಮಕ ಮಾಡುವಂತೆ ಕೊಲಿಜಿಯಂ ಕಳುಹಿಸಿದ್ದ 20 ಹೆಸರುಗಳ ಕಡತವನ್ನು ಕೇಂದ್ರ ಸರ್ಕಾರ ಮರಳಿಸಿದೆ ಎಂದು ತಿಳಿದುಬಂದಿದೆ. ಈ ಹೆಸರುಗಳನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರ ಹೇಳಿದೆ. ಜಡ್ಜ್‌ಗಳ ನೇಮಕದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನ ನಡುವೆ ಘರ್ಷಣೆ ನಡೆಯುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.

Follow Us:
Download App:
  • android
  • ios