ಯುವಕರಿದ್ದ SUV ಕಾರು ಭೀಕರ ಅಪಘಾತ| ಭೀಕರ ಕಾರು ಅಪಘಾತದಲ್ಲಿ ಆರು ಯುವಕರ ದುರ್ಮರಣ| ಹರಿಯಾಣದ ಕೈತಾಲ್ ಜಿಲ್ಲೆಯ ಪುಂಡ್ರಿ-ಧಂಡ್ ರಸ್ತೆ| 19 ರಿಂದ 25 ವರ್ಷದೊಳಗಿನ ಆರು ಯುವಕರ ದುರ್ಮರಣ|

ಹರಿಯಾಣ(ಫೆ.02): ಹರಿಯಾಣದ ಕೈತಾಲ್ ಜಿಲ್ಲೆಯ ಪುಂಡ್ರಿ-ಧಂಡ್ ರಸ್ತೆಯಲ್ಲಿ ಕಾರೊಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆರು ಯುವಕರು ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. 

Add Asianetnews Kannada as a Preferred SourcegooglePreferred

ಹರಿದ್ವಾರದಿಂದ ಕೈತಾಲ್ ಜಿಲ್ಲೆಯತ್ತ ತೆರಳುತ್ತಿದ್ದ ಆರು ಯುವಕರಿದ್ದ SUV ಕಾರು, ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಪುರ: ನಿಡಗುಂದಿ ಬಳಿ ಲಾರಿಗೆ ಡಿಕ್ಕಿ ಹೊಡೆದ ಶಾಲಾ ಬಸ್

ಮೃತ ಯುವಕರು 19 ರಿಂದ 25 ವರ್ಷದೊಳಗಿನವರಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಯುವಕರಿದ್ದ SUV ಕಾರಿಗೆ ಡಿಕ್ಕಿ ಹೊಡೆದ ಮತ್ತೊಂದು ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.