Asianet Suvarna News Asianet Suvarna News

ಕಾಶ್ಮೀರ ವಿವಾದ: ಮೋದಿಗೆ ಮಾಜಿ IPS ಅಧಿಕಾರಿಗಳ ಪತ್ರ

  • ಕಾಶ್ಮೀರ ವಿವಾದದ ಕುರಿತು ಮಾಜಿ ಐಪಿಎಸ್ ಅಧಿಕಾರಿಗಳ ಪತ್ರ
  • ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಏನಿದೆ ?
Retired IPS officers write to Modi praise his dynamic approach to solve Kashmir Issue dpl
Author
Bangalore, First Published Jun 27, 2021, 11:10 AM IST

ದೆಹಲಿ(ಜೂ.27): ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದ ಒಂದು ದಿನದ ನಂತರ, 12ಕ್ಕೂ ಹೆಚ್ಚು ನಿವೃತ್ತ ಐಪಿಎಸ್ ಅಧಿಕಾರಿಗಳು ಕಾಶ್ಮೀರ ವಿವಾದ ಪರಿಹರಿಸುವ ಸರ್ಕಾರದ “ಧೈರ್ಯಶಾಲಿ ಮತ್ತು ನಿರ್ಣಾಯಕ” ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಮಧ್ಯಸ್ಥಗಾರರನ್ನು ತಲುಪಲು ಕೇಂದ್ರ ಸರ್ಕಾರದ ಇತ್ತೀಚಿನ ಉಪಕ್ರಮವು ಅನುಕರಣೀಯವಾಗಿದೆ. ಇದು ಕ್ರಿಯಾತ್ಮಕ ವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

3 ನೇ ಅಲೆಗೆ ಸಜ್ಜಾಗಿದೆ ಸರ್ಕಾರ, ಆಕ್ಸಿಜನ್, ಬೆಡ್‌ಗಳ ವ್ಯವಸ್ಥೆ ಹೀಗಿದೆ

ಟ್ರ್ಯಾಕ್ ದಿ ಟ್ರುತ್ ಎಂದು ಕರೆಯಲ್ಪಡುವ ಈ ಗುಂಪಿನಲ್ಲಿ ಎಸ್ಪಿ ವೈದ್ ಮತ್ತು ಕೆ ರಾಜೇಂದ್ರ ಕುಮಾರ್ ಸೇರಿದ್ದಾರೆ. ಇಬ್ಬರೂ ಜಮ್ಮು ಮತ್ತು ಕಾಶ್ಮೀರ ಪೊಲೀಸರಲ್ಲಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಐಪಿಎಸ್ ಅಧಿಕಾರಿಗಳಾದ ಕೆ ಸಿಂಗ್, ಬದ್ರಿ ಪ್ರಸಾದ್ ಸಿಂಗ್, ಗೀತಾ ಜೋಹ್ರಿ, ಕೆ ಅರವಿಂದ ರಾವ್, ಕೆ ರಾಜೇಂದ್ರ ಕುಮಾರ್, ಕೆಬಿ ಸಿಂಗ್, ನಾಗೇಶ್ವರ ರಾವ್, ಪಿಪಿ ಪಾಂಡೆ, ಆರ್.ಕೆ.ಎಸ್. , ಶಿವಾನಂದ್ ಝಾ, ಎಸ್.ಕೆ.ರೌಟ್ ಮತ್ತು ವಿವೇಕ್ ದುಬೆ ಇದ್ದಾರೆ.

ನಿವೃತ್ತ ಅಧಿಕಾರಿಗಳು ಜಮ್ಮುಕಾಶ್ಮೀರದ ಕುರಿತ ಕೆಲವು ಕೇಂದ್ರ ಸರ್ಕಾರದ ಉಪಕ್ರಮಗಳನ್ನು "ಅತ್ಯುತ್ತಮ ಸಾಧನೆಗಳು" ಎಂದು ಪಟ್ಟಿ ಮಾಡಿದ್ದಾರೆ.

ಜೆ & ಕೆ ಕಡೆಗೆ ಕೇಂದ್ರದ ಉಪಕ್ರಮಗಳನ್ನು ಪಟ್ಟಿ ಮಾಡುವುದರ ಜೊತೆಗೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಬಗ್ಗೆ ಪ್ರಧಾನ ಮಂತ್ರಿಯನ್ನು ಶ್ಲಾಘಿಸುವುದರ ಜೊತೆಗೆ, ಪಾಕಿಸ್ತಾನದ ಉಗ್ರರ ಮೇಲೆ "ಸರ್ಜಿಕಲ್ ಸ್ಟ್ರೈಕ್ " ನಡೆಸಿದ್ದಕ್ಕಾಗಿ ಮತ್ತು ಪಾಕಿಸ್ತಾನದ ಬಾಲ್ಕೋ‌ಟ್‌ ದಾಳಿಗಾಗಿ ಶ್ಲಾಘಿಸಿದ್ದಾರೆ.

Follow Us:
Download App:
  • android
  • ios