ಕೇಂದ್ರ  ಕಾನೂನು ಸಚಿವ ರವಿಶಂಕರ್ ಪ್ರಸಾದ್ ತೆರಳುತ್ತಿದ್ದ ಹೆಲಿಕಾಪ್ಟರ್ ಅಪಘಾತ/ ಸಚಿವರಿಗೆ ಯಾವುದೆ ಅಪಾಯ ಆಗಿಲ್ಲ/ ವದಂತಿಗಳಿಗೆ ಕಿವಿ ಕೊಡಬೇಡಿ/  ಸಚಿವರ ಕಚೇರಿ ಕಡೆಯಿಂದ ಅಧಿಕೃತ ಟ್ವೀಟ್

ಪಾಟ್ನಾ(ಅ. 17) ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಣ್ಣ ಅಪಘಾತಕ್ಕೆ ಗುರಿಯಾಗಿದ್ದು ಯಾವುದೆ ಅಪಾಯ ಸಂಭವಿಸಿಲ್ಲ. ಕೇಂದ್ರ ಸಚಿವರು ಸುರಕ್ಷಿತವಾಗಿದ್ದಾರೆ.

Add Asianetnews Kannada as a Preferred SourcegooglePreferred

ಭಾರತೀಯ ಸೇನೆ ಸೇರಿಕೊಂಡ ಅಪಾಚೆ ಹೆಲಿಕಾಪ್ಟರ್ ವಿಶೇಷಗಳೇನು?

ಕೇಂದ್ರ ಸಚಿವರಿಗೆ ಅಪಾಯ ಆಗಿದೆ ಎಂಬ ವದಂತಿಗಳು ಹರಿದಾಡಿದ್ದು ಸ್ಷಷ್ಟನೆ ನೀಡಲಾಗಿದೆ. ಹೆಲಿಕಾಪ್ಟರ್ ಬ್ಲೇಡ್ ಡ್ಯಾಮೇಜ್ ಆಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಪ್ರಸಾದ್ ಪಾಟ್ನಾಕ್ಕೆ ಆಗಮಿಸಿದ್ದರು.ಚುನಾವಣಾ ಪ್ರಚಾರದ ನಿಮಿತ್ತ ಝಂಜರ್‌ಪುರ್ ಕಡೆ ತೆರಳುತ್ತಿದ್ದಾಗ ಅವಘಡ ನಡೆದಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. 

Click and drag to move

Scroll to load tweet…
Scroll to load tweet…