ಕಾಂಗ್ರೆಸ್ ಪಕ್ಷವು 90ರ ದಶಕದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಕಡೆಗಣಿಸಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದಲಿತರು ಮತ್ತು ಒಬಿಸಿ ಬೆಂಬಲ ಮರಳಿದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಓಡಬೇಕಾಗುತ್ತದೆ ಎಂದಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ಪಕ್ಷವು 90ರ ದಶಕದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇಲ್ಲಿ ಆಯೋಜಿತವಾಗಿದ್ದ ದಲಿತ ನಾಯಕರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ರಾಹುಲ್‌, ‘ಕೇವಲ ರಾಜಕೀಯದಲ್ಲಿ ದಲಿತ ಪ್ರತಿನಿಧಿಗಳನ್ನು ಹೊಂದುವುದು ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಎಲ್ಲರಿಗೂ ಸಾಂಸ್ಥಿಕವಾಗಿ ಮತ್ತು ಆರ್ಥಿಕವಾಗಿ ಸಮಾನ ಪಾಲು ದೊರೆಯಬೇಕು. ಈ ಸಮಪಾಲು ನಮ್ಮ ಪಕ್ಷ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದಾಗ ದೊರೆಯಲಿದೆ. ಒಮ್ಮೆ ಕಾಂಗ್ರೆಸ್‌ನ ಮೂಲ ಆಧಾರವಾದ ದಲಿತರು ಮತ್ತು ಒಬಿಸಿ ಬೆಂಬಲ ಮರಳಿದರೆ ಆಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಓಡಬೇಕಾಗುತ್ತದೆ. ಅಂಥ ದಿನಗಳು ಶೀಘ್ರದಲ್ಲೇ ಬರಲಿದೆ’ ಎಂದು ಹೇಳಿದರು.

ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯೇ ನಿಜವಾದ ಗಾಂಧಿ; ಇಂದಿರಾ, ರಾಹುಲ್ ನಕಲಿ ಗಾಂಧಿಗಳು; ಆರ್. ಅಶೋಕ

ಇದೇ ವೇಳೆ ಇಂದಿರಾ ಗಾಂಧಿ ಅವಧಿಯಲ್ಲಿ ದಲಿತರು ಮತ್ತು ಹಿಂದುಳಿದವರ ಮೇಲೆ ಸಂಪೂರ್ಣ ವಿಶ್ವಾಸ ಇತ್ತು. ಆದರೆ ಇದು 90ರ ದಶಕದಲ್ಲಿ ಸುಳ್ಳಾಯಿತು. ಪಕ್ಷದ ನ್ಯೂನ್ಯತೆ ತೊಡಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ನಾನು ಬಜೆಟ್‌ ವೇಳೆ ಹೇಳಿದಂತೆ ದೇಶದಲ್ಲಿ ಶೇ.50ರಷ್ಟು ಹಿಂದುಳಿದ ಜನರಿದ್ದಾರೆ. ಆದರೆ ಅವರಿಗೆ ಕೇವಲ ಶೇ.5ರಷ್ಟು ಪಾಲು ದೊರೆಯುತ್ತಿದೆ. ದಲಿತರ ಪಾಲು ಶೇ.15ರಷ್ಟಿದ್ದು, ಅವರಿಗೆ ಕೇವಲ ಶೇ.1ರಷ್ಟು ಪಾಲು ದೊರೆಯುತ್ತಿದೆ. ಸಮಸ್ಯೆ ಬಗೆಹರಿಯಬೇಕಾದರೆ ಎಲ್ಲರಿಗೂ ಸಮಪಾಲು ದೊರೆಯಬೇಕು ಎಂದು ಹೇಳಿದರು.

ಇದನ್ನೂ ಓದಿ: ಗಂಗಾಸ್ನಾನದಿಂದ ಬಡತನ ಹೋಗುತ್ತಾ? ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ!