ಟ್ರ್ಯಾಕ್ಟರ್ನಲ್ಲಿ ಆ್ಯಕ್ಟರ್ ಆಗಲು ರಾಹುಲ್ ಯತ್ನ| ರಾಹುಲ್ ಗಾಂಧಿ ಟ್ರ್ಯಾಕ್ಟರ್ ರಾರಯಲಿ ಬಗ್ಗೆ ಸಚಿವ ಜೋಶಿ ವ್ಯಂಗ್ಯ| ದಿಲ್ಲಿಯಲ್ಲಿ ಒಂದಾಗಿರುವ ಎಡ, ಕಾಂಗ್ರೆಸ್ ಕೇರಳದಲ್ಲಿ ಕುಸ್ತಿ| ದಿಲ್ಲೀಲಿ ಕಾಂಗ್ರೆಸ್ ಜತೆ ನಿಲ್ಲುವ ಮಮತಾ ಬಂಗಾಳದಲ್ಲಿ ವಿರೋಧ| ವಿಪಕ್ಷಗಳ ಬೂಟಾಟಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ
ನವದೆಹಲಿ(ಫೆ.24): ಕೇಂದ್ರದ 3 ಕೃಷಿ ಕಾಯ್ದೆಗಳ ವಿರುದ್ಧ ತಾವು ಪ್ರತಿನಿಧಿಸುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಟ್ರ್ಯಾಕ್ಟರ್ ರಾರಯಲಿ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಪ್ರಹ್ಲಾದ್ ಜೋಶಿ ಅವರು, ‘ರಾಹುಲ್ ಗಾಂಧಿ ಅವರು ಟ್ರ್ಯಾಕ್ಟರ್ನಲ್ಲಿ ನಟನಾಗಲು ಯತ್ನಿಸುತ್ತಿದ್ದಾರೆ. ನೀವು(ರಾಹುಲ್ಗಾಂಧಿ) ಎಪಿಎಂಸಿ ಪರವಾಗಿದ್ದರೆ, ಕೇರಳದಲ್ಲಿ ಒಂದೇ ಒಂದು ಎಪಿಎಂಸಿಗಳಿಲ್ಲ ಏಕೆ?’ ಎಂದು ಪ್ರಶ್ನಿಸಿದರು. ಅಲ್ಲದೆ ನಿಮ್ಮದೇ ಕಾಂಗ್ರೆಸ್ ಸರ್ಕಾರ ಪಂಜಾಬ್ನಲ್ಲಿ ಒಪ್ಪಂದವನ್ನು ಉಲ್ಲಂಘಿಸುವ ರೈತರನ್ನು ಜೈಲಿಗೆ ಕಳಿಸುವ ಕಾನೂನನ್ನು ಜಾರಿಗೆ ತಂದಿದೆ ಎಂದು ರಾಹುಲ್ರನ್ನು ತರಾಟೆಗೆ ತೆಗೆದುಕೊಂಡರು.
ಕೇರಳದ ಆಡಳಿತಾರೂಢ ಎಡಪಂಥೀಯ ಎಲ್ಡಿಎಫ್ ಮೈತ್ರಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕುರಿತಾಗಿ ಪ್ರತಿಕ್ರಿಯಿಸಿದ ಜೋಶಿ ಅವರು, ಕೇರಳದಲ್ಲಿ ಮಾತ್ರ ಕುಸ್ತಿಯಾಡುತ್ತಿರುವ ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ದಿಲ್ಲಿಯಲ್ಲಿ ದೋಸ್ತಿಗಳಾಗಿವೆ. ಈ ಪಕ್ಷಗಳ ಬೂಟಾಟಿಕೆಯನ್ನು ನೀವೇ ನೋಡಿ. ಅದೇ ರೀತಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಲ್ಲಿಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ. ಆದರೆ ಅವರ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ವಿರೋಧಿಸುತ್ತಾರೆ ಎಂದು ವಿಪಕ್ಷಗಳ ನಾಟಕಗಳ ಕುರಿತಾಗಿ ವ್ಯಂಗ್ಯವಾಡಿದರು.
ಅಲ್ಲದೆ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರಿಸಿದ್ದಾರೆಯೇ ಅಥವಾ ಇಂಥ ಬೂಟಾಟಿಕೆಯಲ್ಲಿ ವಿಶ್ವಾಸವಿಟ್ಟಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಬೇಕೆಂದು ಜೋಶಿ ಅವರು ಒತ್ತಾಯಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 24, 2021, 10:38 AM IST