Asianet Suvarna News Asianet Suvarna News

ನಾಳೆ 6 ಪಥ ಸುರಂಗಕ್ಕೆ ಪ್ರಧಾನಿ ಮೋದಿ ಶಂಕು, ವನ್ಯಜೀವಿಗಳಿಗೂ ಇಲ್ಲ ಕುತ್ತು!

ಪ್ರಧಾನಿ ಮೋದಿ 6 ಪಥಗಳ ಗ್ರೀನ್‌ಫೀಲ್ಡ್ ರಾಯ್‌ಪುರ - ವಿಶಾಖಪಟ್ಟಣಂ ಕಾರಿಡಾರ್‌ನ ಛತ್ತೀಸ್‌ಗಢ ವಿಭಾಗದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

pm modi will unveil 2 8 kilometre 6 lane tunnel in chhattisgarh here is why it is special ash
Author
First Published Jul 6, 2023, 3:06 PM IST

ನವದೆಹಲಿ ( ಜುಲೈ 6, 2023): ಜುಲೈ 7 ರಂದು ಪ್ರಧಾನಿ ಮೋದಿ ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಪೈಕಿ, 2.8 ಕಿಮೀನ 6 ಪಥದ ಸುರಂಗವನ್ನು ಸಹ ಅನಾವರಣಗೊಳಿಸಲಿದ್ದಾರೆ. ಈ ಸುರಂಗ ಮಾರ್ಗ ವಿಶೇಷವಾದದ್ದು. ಏಕೆ ಅಂತೀರಾ..? ಇದರಿಂದ ಪ್ರಾಣಿಗಳ ಚಲನೆಗೆ ಸಹಕಾರಿಯಾಗಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ 7 ರಂದು ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದು, ಈ ವೇಳೆ 6 ಪಥಗಳ ಗ್ರೀನ್‌ಫೀಲ್ಡ್ ರಾಯ್‌ಪುರ - ವಿಶಾಖಪಟ್ಟಣಂ ಕಾರಿಡಾರ್‌ನ ಛತ್ತೀಸ್‌ಗಢ ವಿಭಾಗದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಅಂಶವೆಂದರೆ ಉದಾಂತಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅನಿಯಂತ್ರಿತ ವನ್ಯಜೀವಿ ಚಲನೆಗಾಗಿ 27 ಪ್ರಾಣಿಗಳ ಪಾಸ್‌ಗಳು ಮತ್ತು 17 ಮಂಗಗಳ ಕ್ಯಾನೋಪಿಗಳೊಂದಿಗೆ 2.8 ಕಿಮೀ ಉದ್ದದ ಆರು-ಪಥದ ಸುರಂಗ.

ಇದನ್ನು ಓದಿ: Breaking: ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ಅಪಘಾತ: ಯಮ ಸ್ವರೂಪಿ ಟ್ರಕ್‌ಗೆ 15 ಮಂದಿ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಹೆದ್ದಾರಿಗಳ ಅಭಿವೃದ್ಧಿಯಿಂದ ವನ್ಯಜೀವಿಗಳಿಗೆ ಹೆಚ್ಚು ತೊಂದರೆಯಾಗದಂತೆ ಮಾಡುವ ಪ್ರಧಾನಿ ಮೋದಿಯವರ ದೃಷ್ಟಿಗೆ ಈ ಸುರಂಗ ಹೊಂದಿಕೆಯಾಗುತ್ತದೆ. ಹಾಗೆ, ಪ್ರಧಾನಮಂತ್ರಿ ಮೋದಿಯವರ ಅಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿಗಳು / ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಯೊಂದಿಗೆ ವನ್ಯಜೀವಿಗಳ ಸುರಕ್ಷಿತ ಮಾರ್ಗ ಮತ್ತು ಅವುಗಳ ವಾಸಕ್ಕೆ ಇಂತಹ ಮೀಸಲಾದ ಮೂಲಸೌಕರ್ಯಗಳ ಅಭಿವೃದ್ಧಿಯು ಭಾರತದಲ್ಲಿ ಹೆದ್ದಾರಿ ಅಭಿವೃದ್ಧಿಯ ವೈಶಿಷ್ಟ್ಯವಾಗಿದೆ ಎಂದೂ ಮೂಲಗಳು ತಿಳಿಸಿವೆ.

ಇದೇ ರೀತಿ, ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಡಿಸೆಂಬರ್ 2021 ರಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು. ಈ ಆರ್ಥಿಕ ಕಾರಿಡಾರ್‌ ನಿಯಂತ್ರಿತ ವನ್ಯಜೀವಿ ಚಲನೆಗಾಗಿ ಏಷ್ಯಾದ ಅತಿದೊಡ್ಡ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ (12 ಕಿಮೀ) ಅನ್ನು ಹೊಂದಿರುತ್ತದೆ ಎಂದೂ ತಿಳಿದುಬಂದಿದೆ. ಇದು ಸಹ ಪ್ರಧಾನಿ ಮೋದಿಯ ದೃಷ್ಟಿಕೋನಕ್ಕೆ ಒಂದು ನಿದರ್ಶನ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಮಳೆಯ ಅಬ್ಬರಕ್ಕೆ 11 ಜನ ಬಲಿ: ಉತ್ತರಾಖಂಡದಲ್ಲಿ ಭೂಕುಸಿತದಿಂದ ಚಾರ್‌ಧಾಮ್‌ ಯಾತ್ರೆಗೆ ಅಡ್ಡಿ

ಇನ್ನು, ಇದೇ ರೀತಿ ವನ್ಯಜೀವಿಗಳ ಅನಿಯಂತ್ರಿತ ಚಲನೆಗೆಂದು ಮೀಸಲಾದ ಮೂಲಸೌಕರ್ಯದ ಅನೇಕ ಮೂಲಸೌಕರ್ಯಗಳು ದೇಶದಲ್ಲಿದೆ. ಇವುಗಳ ಪೈಕಿ,

* 4 ಅಂಡರ್‌ಪಾಸ್‌ಗಳೊಂದಿಗೆ 11.6 ಕಿಮೀ ಎಲಿವೇಟೆಡ್‌ ಕಾರಿಡಾರ್. ಇದರಲ್ಲಿ 360-ಮೀಟರ್ ಸುರಂಗ ಮತ್ತು ಗಣೇಶ್‌ಪುರ-ಡೆಹ್ರಾಡೂನ್ NH-72A ನಲ್ಲಿ ಎಲ್ಲಾ ರಚನೆಗಳ ಮೇಲೆ ಧ್ವನಿ ಮತ್ತು ಬೆಳಕಿನ ತಡೆಗೋಡೆ.
* ರಾಂಬನ್-ಬನಿಹಾಲ್ ಸುರಂಗವು ಒಟ್ಟು 2.967 ಕಿಮೀ ಉದ್ದದ 6 ಸುರಂಗಗಳನ್ನು ಹೊಂದಿದೆ
* ಬೆಂಗಳೂರು-ವಿಜಯವಾಡ ಮಾರ್ಗವು 3.75 ಕಿ.ಮೀ ಸುರಂಗ ಮತ್ತು 2.5 ಕಿ.ಮೀ ಉದ್ದದ ವಯಡಕ್ಟ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ಹೊಂದಿರುತ್ತದೆ.
* ಗ್ವಾಲಿಯರ್-ಶಿವಪುರಿ ಯೋಜನೆಯು ಎಲಿವೇಟೆಡ್ ಕಾರಿಡಾರ್ ಮತ್ತು ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುವ 5.5 ಕಿಮೀ ವ್ಯಾಪ್ತಿಯಲ್ಲಿ ಅಂಡರ್‌ಪಾಸ್‌ಗಳನ್ನು ಹೊಂದಿದೆ.

ಇದೇ ರೀತಿ, ಕೆಲವು ಇತರ ಯೋಜನೆಗಳ ಮಾಹಿತಿ ಈ ಟ್ವೀಟ್‌ನಲ್ಲಿದೆ ನೋಡಿ..

ಇದನ್ನೂ ಓದಿ: ಗುಜರಾತ್‌ನಲ್ಲಿ ಮಳೆಯ ಅಬ್ಬರಕ್ಕೆ 11 ಜನ ಬಲಿ: ಉತ್ತರಾಖಂಡದಲ್ಲಿ ಭೂಕುಸಿತದಿಂದ ಚಾರ್‌ಧಾಮ್‌ ಯಾತ್ರೆಗೆ ಅಡ್ಡಿ

Follow Us:
Download App:
  • android
  • ios