ವಿವಾದಿತ ಸಲಹೆಗಾರರ ವಜಾ ಮಾಡಿ: ಸಿಧುಗೆ ಹೈಕಮಾಂಡ್ ಚಾಟಿ
- ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರವನ್ನು ಅಕ್ರಮವಾಗಿ ಇಟ್ಟುಕೊಂಡಿವೆ ಎಂಬ ಹೇಳಿಕೆ
- ಫೇಸ್ಬುಕ್ ಪೋಸ್ಟಮಾಡಿದ್ದ, ಇಬ್ಬರೂ ಸಿಧು ಸಲಹೆಗಾರರು
- ಇಬ್ಬರೂ ಸಲಹೆಗಾರರನ್ನು ವಜಾ ಮಾಡಲು ಆದೇಶ
ನವದೆಹಲಿ (ಆ.27): ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರವನ್ನು ಅಕ್ರಮವಾಗಿ ಇಟ್ಟುಕೊಂಡಿವೆ ಎಂದು ಫೇಸ್ಬುಕ್ ಪೋಸ್ಟಮಾಡಿದ್ದ, ನಿಮ್ಮ ಇಬ್ಬರೂ ಸಲಹೆಗಾರರನ್ನು ವಜಾ ಮಾಡಿ.
ಇಲ್ಲವೇ ನಾವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ಸಿಂಗ್ ಸಿಧುಗೆ ಪಕ್ಷದ ರಾಜ್ಯ ಉಸ್ತುವಾರಿ ಹರೀಶ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರ ಭಾರತದ್ದಲ್ಲ ಎಂದ ಸಿಧು ಸಲಹೆಗಾರನಿಗೆ ಕ್ಯಾಪ್ಟನ್ ಕ್ಲಾಸ್!
ಅಲ್ಲದೆ ಜಮ್ಮು-ಕಾಶ್ಮೀರವು ಭಾರತದ ಭಾಗವೆಂಬುದು ಪಕ್ಷದ ನೀತಿ. ಇದನ್ನು ಯಾರು ಸಹ ಮೀರಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಎಂ ಅಮರೀಂದರ್ ವಿರುದ್ಧ ಹಲ್ಲು ಮಸೆಯುತ್ತಿರುವ ಸಿಧುಗೆ ಒಂದಿಷ್ಟುಕಡಿವಾಣ ಹಾಕುವ ಯತ್ನವನ್ನು ಪಕ್ಷದ ಹೈಕಮಾಂಡ್ ಮಾಡಿದೆ.