* ಗೋರಖ್‌ಪುರದಲ್ಲಿ 9,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸಗೊಬ್ಬರ ಕಾರ್ಖಾನೆ* ಎಐಐಎಂಎಸ್ ಮತ್ತು ಆರ್‌ಎಂಆರ್‌ಸಿಯ ಒಂಬತ್ತು ಬಿಎಸ್‌ಎಲ್-ಟು-ಪ್ಲಸ್ ಲ್ಯಾಬ್‌ಗಳನ್ನು ಉದ್ಘಾಟನೆ* 16 ಏಮ್ಸ್ ನಿರ್ಮಿಸುವ ಕೆಲಸ ನಡೆಯುತ್ತಿದೆ ಪ್ರಧಾನಿ

ಲಕ್ನೋ(ಡಿ.07): ಬಹು ನಿರೀಕ್ಷಿತ ಪೂರ್ವಾಂಚಲ್ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈಡೇರಿಸಿದ್ದಾರೆ. ಗೋರಖ್‌ಪುರದಲ್ಲಿ 9,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸಗೊಬ್ಬರ ಕಾರ್ಖಾನೆ ಎಐಐಎಂಎಸ್ ಮತ್ತು ಆರ್‌ಎಂಆರ್‌ಸಿಯ ಒಂಬತ್ತು ಬಿಎಸ್‌ಎಲ್-ಟು-ಪ್ಲಸ್ ಲ್ಯಾಬ್‌ಗಳನ್ನು ಅವರು ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಪಿಎಂ ಮೋದಿ ಇದರಿಂದ ಗೋರಖ್‌ಪುರ ಅಭಿವೃದ್ಧಿಯ ಹೊಸ ಕಥೆಗಳನ್ನು ಬರೆಯಲಿದೆ ಎಂದು ರಸಗೊಬ್ಬರ ಕಾರ್ಖಾನೆಯ ಶಂಕುಸ್ಥಾಪನೆ ಸಂದರ್ಭದಲ್ಲಿ ನಾನು ಹೇಳಿದ್ದೆ. ಇನ್ಮುಂದೆ ರೈತರಿಗೆ ಸಾಕಷ್ಟು ಗೊಬ್ಬರ ದೊರೆಯುತ್ತದೆ. ಇದರಿಂದ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಅನೇಕ ಅವಕಾಶಗಳು ಸೃಷ್ಟಿಯಾಗುತ್ತವೆ, ಅನೇಕ ಹೊಸ ಉದ್ಯಮಗಳು ಪ್ರಾರಂಭವಾಗುತ್ತವೆ. ಸಾರಿಗೆ ಮತ್ತು ಇತರ ವ್ಯವಹಾರಗಳ ಸಹಾಯವೂ ಸಿಗುತ್ತದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಎಸ್‌ಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಿಎಂ ಮೋದಿ ಯುಪಿಗೆ ರೆಡ್ ಕ್ಯಾಪ್ ನಾಯಕರೇ ರೆಡ್ ಅಲರ್ಟ್ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

16 ಏಮ್ಸ್ ನಿರ್ಮಿಸುವ ಕೆಲಸ ನಡೆಯುತ್ತಿದೆ ಪ್ರಧಾನಿ

ಅಟಲ್ ಬಿಹಾರಿ ಅವರು 6 ಏಮ್ಸ್‌ಗಳನ್ನು ಪಾಸು ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ದೇಶಾದ್ಯಂತ 16 ಏಮ್ಸ್‌ಗಳನ್ನು ನಡೆಸುವ ಕೆಲಸ ನಡೆಯುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಹೊಂದುವ ಗುರಿ ಹೊಂದಿದ್ದೇವೆ. ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕೆಲಸ ಇಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಇತ್ತೀಚೆಗಷ್ಟೇ 9 ಮೆಡಿಕಲ್‌ಗಳ ಶಂಕುಸ್ಥಾಪನೆ ಮಾಡಿದ್ದೇನೆ. ಇಷ್ಟೇ ಅಲ್ಲ, ಯುಪಿ ಇಂದು 17 ಕೋಟಿ ಲಸಿಕೆ ಪ್ರಮಾಣವನ್ನು ತಲುಪುತ್ತಿದೆ. ಸಾರ್ವಜನಿಕರ ಆರೋಗ್ಯ ನಮಗೆ ಅತೀ ಮುಖ್ಯ ಎಂದಿದ್ದಾರೆ.

ರೆಡ್ ಕ್ಯಾಪ್ ನಾಯಕರೇ ಯುಪಿಗೆ ರೆಡ್ ಅಲರ್ಟ್

ಎಸ್‌ಪಿಯನ್ನು ಗುರಿಯಾಗಿಸಿದ ಪಿಎಂ ಮೋದಿ, ಕೆಂಪು ಟೋಪಿ ಧರಿಸಿದವರು ಸರ್ಕಾರ ರಚಿಸಬೇಕು, ಭಯೋತ್ಪಾದಕರಿಗೆ ಕರುಣೆ ತೋರಿಸಲು ಮತ್ತು ಭಯೋತ್ಪಾದಕರನ್ನು ತೊಡೆದುಹಾಕಲು ಸರ್ಕಾರ ರಚಿಸಬೇಕು. ಈ ಜನರು ಯುಪಿಗೆ ರೆಡ್ ಅಲರ್ಟ್ ಎಂದು ಪ್ರಧಾನಿ ಮೋದಿ ಹೇಳಿದರು. ಯುಪಿಯಲ್ಲಿ ಹಗರಣಗಳಿಗಾಗಿ ಕೆಂಪು ಟೋಪಿ ಜನರಿಗೆ ಸರ್ಕಾರ ಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ರೆಡ್ ಕ್ಯಾಪ್ ಜನರು ಕೇವಲ ಅಧಿಕಾರ ಮತ್ತು ಕೆಂಪು ದೀಪದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದಿದ್ದಾರೆ.