ವಿವಿಧತೆಯಲ್ಲಿ ಏಕತೆ ಭಾರತದ ಹಿರಿಮೆ / ದೀಪಾವಳಿ ಸಂದರ್ಭ ದರ್ಗಾದಲ್ಲಿ ದೀಪ ಬೆಳಗಿದರು/ಎಲ್ಲ ಸಮುದಾಯಕ್ಕೆ ಸೇರಿದವರಿಂದ ಪ್ರಾರ್ಥನೆ/ ಸರ್ವಧರ್ಮ ಸಮನ್ವಯತೆ 

ನವದೆಹಲಿ (ನ.15) ಹಬ್ಬಗಳು ಧರ್ಮಗಳನ್ನು ಮೀರಿದ್ದು.. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಶಕ್ತಿ.. ಅದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೀಪಾವಳಿ ಸಂದರ್ಭ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾ ಅಲಂಕೃತಗೊಂಡಿದೆ. ಎಲ್ಲ ಜಾತಿ ಸಮುದಾಯಕ್ಕೆ ಸೇರಿದ ಜನರು ದರ್ಗಾಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಬೂಬ್-ಇ-ಇಲಾಹಿಯ ಅನುಯಾಯಿಗಳು ಭೇಟಿ ನೀಡುತ್ತಾರೆ. 

ದೀಪಾವಳಿ ವೇಳೆ ಇದರಲ್ಲೊಂದು ಕೆಲಸ ಮಾಡಿದರೆ ಅದೃಷ್ಟ ಒಲಿಯುತ್ತದೆ

 'ದಿಯಾ'ಗಳನ್ನು ಸಹ ಬೆಳಗಿಸುತ್ತಾರೆ. ಏಕತೆ ಸಾರಲು ದರ್ಗಾ ಒಂದು ವೇದಿಕೆ ಎಂದು ದರ್ಗಾ ಸಮಿತಿಯ ಪೀರ್ಜಾಡಾ ಅಲ್ತಮಾಶ್ ನಿಜಾಮಿ ಹೇಳುತ್ತಾರೆ. ಅನೇಕ ಭಕ್ತರು ಆಗಮಿಸಿ ದೀಪ ಬೆಳಗಿಸಿದ್ದು ವಿಶೇಷ. 

ಭಾರತದ ಹಲವು ಕಡೆ ಈ ರೀತಿ ಸರ್ವಧರ್ಮ ಸಮನ್ವಯ ಸಾರುವ ಕೇಂದ್ರಗಳಿವೆ. ಸಂಪ್ರದಾಯಗಳನ್ನು ಮೀರಿ ಅವರವರ ಆಚರಣೆಯನ್ನು ಅವರವರು ಮಾಡಿಕೊಂಡು ಹೋಗುತ್ತಾರೆ.