Asianet Suvarna News Asianet Suvarna News

Omicron ದೇಶದಲ್ಲಿ ಮೂರನೇ ಅಲೆ ಆತಂಕ, ಲಸಿಕಾ ಅಭಿಯಾನಕ್ಕೆ ಮತ್ತಷ್ಟು ಒತ್ತು!

* ದೇಶದಲ್ಲಿ ಆವರಿಸಿದೆ ಒಮಿಕ್ರಾನ್ ಭೀತಿ

* ವೇಗವಾಗಿ ಹರಡುತ್ತೆ ಆದ್ರೆ ಮಾರಣಾಂತಿಕವಲ್ಲ ಎಂದ ತಜ್ಞರು

* ಕಠಿಣ ಮಾರ್ಗಸೂಚಿ ಅಗತ್ಯ ಎಂದ ಆರೋಗ್ಯ ತಜ್ಞರು

Omicron is not fatal but India should be prepared for third wave Top health expert pod
Author
Bangalore, First Published Dec 5, 2021, 9:08 AM IST

ನವದೆಹಲಿ(ಡಿ.05): ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದಾಗಿ (Covid 19 New Varient Omicron)    ಪ್ರಪಂಚದಾದ್ಯಂತ ಭೀತಿ ಆವರಿಸಿದೆ. ಭಾರತದಲ್ಲಿಯೂ ಆತಂಕ ವೇಗವಾಗಿ ಹೆಚ್ಚುತ್ತಿದೆ, ಆದರೆ ಆರೋಗ್ಯ ತಜ್ಞರಿಂದ ಪರಿಹಾರವನ್ನು ನೀಡುವ ಸಂಶೋಧನೆಗಳು ಹೊರಬರುತ್ತಿವೆ. ಹೀಗಿರುವಾಗ ಭಾರತದಲ್ಲಿನ ಆರೋಗ್ಯ ತಜ್ಞರು ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕ ಆದರೆ ಮಾರಣಾಂತಿಕವಲ್ಲ ಎಂದು ಹೇಳಿದ್ದಾರೆ. ಆದರೆ, ಮೂರನೇ ಅಲೆಯನ್ನು (Third Wave) ಎದುರಿಸಲು ಭಾರತ ಸಜ್ಜಾಗಬೇಕಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೂರನೇ ಅಲೆಯನ್ನು ತಪ್ಪಿಸಲು, ಮುಂಚಿತವಾಗಿ ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿ ಹೊಂದಿರಬೇಕು ಎಂದಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಜ್ಞರು ಕಾಯುತ್ತಿದ್ದಾರೆ

ಬೀಬಿನಗರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (AIIMS) ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿಕಾಸ್ ಭಾಟಿಯಾ, ಸಂಭವನೀಯ ಮೂರನೇ ಅಲೆಯಲ್ಲಿ ಹೈಬ್ರಿಡ್ ಇಮ್ಯುನಿಟಿಯ (Immunity) ಸಹಾಯದ ಕುರಿತು ಮಾತನಾಡುತ್ತಾ, ಅದರ ಬಗ್ಗೆ ಈಗಲೇ ಊಹಿಸುವುದು ತುಂಬಾ ಕಷ್ಟ. ಏಕೆಂದರೆ ಈ ಸಮಯದಲ್ಲಿಯೂ ಸಹ 30 ಕ್ಕೂ ಹೆಚ್ಚು ದೇಶಗಳು ಒಂದು ಅಥವಾ ಹೆಚ್ಚಿನ ಪ್ರಕರಣಗಳನ್ನು ವರದಿಯಾದರೂ, ನಾವು ಈ ಬಗೆಗಿನ ಕೆಲ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ. ಈ ಹಂತದಲ್ಲಿ ಮೂರನೇ ತರಂಗ (Third Wave) ಬರಬಹುದು ಎಂದು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಆದರೆ ಅದೇ ಸಮಯದಲ್ಲಿ ಈ ನಿರ್ದಿಷ್ಟ ವೈರಸ್ ಓಮಿಕ್ರಾನ್ ಹೆಚ್ಚು ಮಾರಣಾಂತಿಕವಲ್ಲ ಎಂದು ನಾವು ಕಂಡುಕೊಂಡರೆ ಅದು ಒಳ್ಳೆಯ ಸುದ್ದಿಯಾಗಬಹುದು ಎಂದು ಅವರು ಹೇಳಿದರು. ಅಲ್ಲದೆ ಇದುವರೆಗೆ ವಿಶ್ವದ ಯಾವುದೇ ಭಾಗದಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ಹೇಳಿದರು. ಇದು ಸೌಮ್ಯವಾದ ಕಾಯಿಲೆಯಾಗಿರಬಹುದು ಎಂದೂ ತಿಳಿಸಿದ್ದಾರೆ.

ಆಮ್ಲಜನಕದ ಮಟ್ಟ ಕುಸಿದರೆ ಚಿಂತಾಜನಕ ಪರಿಸ್ಥಿತಿ

ಡಾ. ಭಾಟಿಯಾ ಅವರು ಓಮಿಕ್ರಾನ್ ರೂಪಾಂತರದಿಂದಾಗಿ (Omicron Varient) ಆಮ್ಲಜನಕದ ಮಟ್ಟವು ಕುಸಿದರೆ ಅದು ಕಳವಳದ ವಿಷಯವಾಗಿದೆ ಎಂದು ಹೇಳಿದರು, ಆದರೆ ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕಾ ಅಭಿಯಾನದಿಂದ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಆಮ್ಲಜನಕದ ಮಟ್ಟದಲ್ಲಿನ ಕುಸಿತ ಮತ್ತು ಪ್ರಕರಣಗಳ ಸಾವಿನ ಪ್ರಮಾಣವು ನಮ್ಮ ಮುಖ್ಯ ಕಾಳಜಿಯಾಗಿದೆ ಎಂದು ಅವರು ಹೇಳಿದರು.

ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ

ಒಮಿಕ್ರಾನ್ ಆತಂಖವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಲಸಿಕೆ ಅಭಿಯಾನವನ್ನು ಮತ್ತೆ ತೀವ್ರಗೊಳಿಸಿವೆ. ಶನಿವಾರ ಒಂದು ಕೋಟಿಗೂ ಹೆಚ್ಚು ಜನರಿಗೆ ಕೊರೋನಾ ವಿರುದ್ಧ ಲಸಿಕೆ ಹಾಕಲಾಗಿದೆ. ಎರಡು ತಿಂಗಳಿಗಿಂತ ಹೆಚ್ಚು ಸಮಯದ ಬಳಿಕ, ಒಂದು ದಿನದಲ್ಲಿ ನೀಡಲಾದ COVID ಲಸಿಕೆ ಡೋಸ್‌ಗಳ ಸಂಖ್ಯೆ ಶನಿವಾರ ಒಂದು ಕೋಟಿಯನ್ನು ದಾಟಿದೆ. ಇಲ್ಲಿಯವರೆಗೆ ಲಸಿಕೆ ಸಂಖ್ಯೆ 127.5 ಕೋಟಿ ದಾಟಿದೆ. ಕೋಟಿಗಟ್ಟಲೇ ಲಸಿಕೆಗಳನ್ನು ನೀಡುವ ಸಾಧನೆಯನ್ನು ಭಾರತ ಮತ್ತೊಮ್ಮೆ ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಕೋವಿನ್ ಪೋರ್ಟಲ್ ಅನ್ವಯ, ಶನಿವಾರ ರಾತ್ರಿ 11 ಗಂಟೆಯವರೆಗೆ 1 ಕೋಟಿ ಮೂರು ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 127.62 ಕೋಟಿ ಕೊರೋನಾ ಡೋಸ್‌ಗಳನ್ನು ನೀಡಲಾಗಿದೆ. ಕೊರೋನಾ ಸೋಂಕಿನ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗಲು ಪ್ರಾರಂಭಿಸಿವೆ ಎಂಬುವುದು ಉಲ್ಲೇಖನೀಯ. ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 8,603 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಓಮಿಕ್ರಾನ್ ರೂಪಾಂತರದ ಅಪಾಯದ ದೃಷ್ಟಿಯಿಂದ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸುವಂತೆ ಕೇಳಿಕೊಳ್ಳಲಾಗಿದೆ. ಉದಯೋನ್ಮುಖ ಹಾಟ್‌ಸ್ಪಾಟ್‌ಗಳನ್ನು ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಜನರೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ತ್ವರಿತವಾಗಿ ಪತ್ತೆಹಚ್ಚಿದೆ. ಇದಲ್ಲದೆ, ಎಲ್ಲಾ ಸೋಂಕಿತರ ಮಾದರಿಗಳನ್ನು ಜೀನೋಮ್ ಟೆಸ್ಟ್‌ಗೆ ಕಳುಹಿಸಲು, ಪ್ರಕರಣಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಆರೋಗ್ಯ ಮೂಲಸೌಕರ್ಯದ ಸಿದ್ಧತೆಯನ್ನು ಪರಿಶೀಲಿಸಲು ಕೇಳಲಾಗಿದೆ.

ಇಲ್ಲಿಯವರೆಗೆ ನಾಲ್ವರಲ್ಲಿ ಒಮಿಕ್ರಾನ್ ಪತ್ತೆ

ಇಲ್ಲಿಯವರೆಗೆ, ದೇಶದಲ್ಲಿ ನಾಲ್ಕು ಓಮಿಕ್ರಾನ್ ರೋಗಿಗಳು ಕಂಡುಬಂದಿದ್ದಾರೆ. ನಾಲ್ಕನೇ ರೋಗಿ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. 33 ವರ್ಷದ ವ್ಯಕ್ತಿ ವಿದೇಶದಿಂದ ಮುಂಬೈ ಬಳಿಯ ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಪ್ರದೇಶಕ್ಕೆ ಮರಳಿದ್ದರು. ಅವರಿಗೆ ಕೊರೋನಾ ಹೊಸ ರೂಪಾಂತರ ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ದೆಹಲಿ-ಮುಂಬೈ ವಿಮಾನದಲ್ಲಿ ಬಂದ 25 ಜನರ ವರದಿ ನೆಗೆಟಿವ್ ಬಂದಿದೆ. ಓಮಿಕ್ರಾನ್ ರೂಪಾಂತರದ ಮೂರನೇ ಪ್ರಕರಣವು ಗುಜರಾತ್‌ನ ಜಾಮ್‌ನಗರದಲ್ಲಿ ವರದಿಯಾಗಿದೆ. ಸೋಂಕಿತ ವ್ಯಕ್ತಿ ಎರಡು ದಿನಗಳ ಹಿಂದೆ ಜಿಂಬಾಬ್ವೆಯಿಂದ ಬಂದಿದ್ದರು. ಇದಲ್ಲದೇ ಕರ್ನಾಟಕದಲ್ಲಿ ಇಬ್ಬರು ಓಮಿಕ್ರಾನ್ ರೋಗಿಗಳು ಪತ್ತೆಯಾಗಿದ್ದಾರೆ.

Follow Us:
Download App:
  • android
  • ios