* ಚುನಾವಣೆಗೆ ಇನ್ನೊಂದೇ ವರ್ಷ, ಪಂಜಾಬ್‌ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ?* ಭಿನ್ನಮತ ಶಮನಗೊಳಿಸಲು ಸಿಧುಗೆ ಕೊಡ್ತಾರಾ ಅಧ್ಯಕ್ಷ ಸ್ಥಾನ? 

ಚಂಡೀಗಢ(ಜು.15): ಕ್ರಿಕೆಟರ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿದ ನವಜೋತ್‌ ಸಿಂಗ್ ಸಿಧುರನ್ನು ಅತೀ ಶೀಘ್ರದಲ್ಲೇ ಪಂಜಾಬ್‌ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಗಳಿವೆ. ಪಂಜಾಬ್‌ ಕಾಂಗ್ರೆಸ್‌ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಇಂತಹುದ್ದೊಂದು ಹೆಜ್ಜೆ ಇರಿಸಲು ಪಕ್ಷ ಮುಂದಾಗಿದೆ. ಪಂಜಾಬ್‌ನಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆಹೀಗಿರುವಾಗ ಪಕ್ಷದೊಳಗಿನ ಕಾದಾಟ ತಡೆಯುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. 

Add Asianetnews Kannada as a Preferred SourcegooglePreferred

ನವಜೋತ್‌ ಸಿಂಗ್ ಸಿಧು ಹಾಗೂ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವಿನ ಆಂತರಿಕ ಜಗಳ ದೀರ್ಘ ಸಮಯದಿಂದ ನಡೆದು ಬಂದಿದೆ. ಇನ್ನು ಇದೇ ವೇಳೆ ಇನ್ನಿತರ ಕೆಲ ನಾಯಕರಿಗೂ ಕೆಲ ಹುದ್ದೆ ನೀಡಲಾಗುತ್ತದೆ ಎನ್ನಲಾಗಿದೆ. 

ಒಪ್ಪಂದದ ಪ್ರಕಾರ, ಸಿಎಂ ಅಮರಿಂದರ್ ಸಿಂಗ್ ಅವರು ತಮ್ಮ ಮಂತ್ರಿ ಮಂಡಲದಲ್ಲಿ ಬದಲಾವಣೆ ಮಾಡಲಿದ್ದು, ಇದರಲ್ಲಿ ಚರಣಜಿತ್ ಚನ್ನಿ ಮತ್ತು ಗುರ್‌ಪ್ರೀತ್ ಕಾಂಗರ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕುವ ಸಾಧ್ಯತೆಗಳಿವೆ. ಮೂರ್ನಾಲ್ಕು ಮಂದಿಯನ್ನು ಸಚಿವ ಪರಿಷತ್ತಿನಲ್ಲಿ ಸೇರಿಸಿಕೊಳ್ಳಬಹುದು. ಇವರಲ್ಲಿ ವಿಧಾನಸಭೆ ಸ್ಪೀಕರ್ ರಾಣಾ ಕೆ.ಪಿ.ಸಿಂಗ್, ಶಾಸಕ ರಾಜ್ ಕುಮಾರ್ ವರ್ಕಾ ಹಾಗೂ ದಲಿತ ಸಮುದಾಯದ ಒಬ್ಬರಿರಬಹುದು ಎನ್ನಲಾಗಿದೆ.

ಶಾಸಕರ ಈ ಸಮಸ್ಯೆಯನ್ನು ಪರಿಹರಿಸಲು ಕಳೆದ ತಿಂಗಳು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ರಚಿಸಿದ ತ್ರಿಸದಸ್ಯ ಸಮಿತಿಯ ಮುಂದೆ ಮಂಡಿಸಿದ ಬೇಡಿಕೆಗಳಲ್ಲಿ ದಲಿತ ಸಮುದಾಯದ ಪ್ರಾತಿನಿಧ್ಯ ನಿರ್ಣಾಯಕವಾಗಿತ್ತು. ಇತರ ಬೇಡಿಕೆಗಳು ಮತ್ತು ಭಿನ್ನಾಭಿಪ್ರಾಯದ ಅಂಶಗಳು, 2015 ರ ಪವಿತ್ರ ಪ್ರಕರಣ ಮತ್ತು ಅಮರಿಂದರ್ ಸಿಂಗ್ ನೇತೃತ್ವದ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಗುಂಡಿನ ದಾಳಿ ವಿಚಾರಗಳನ್ನೂ ಇದು ಒಳಗೊಂಡಿತ್ತು.