Asianet Suvarna News Asianet Suvarna News

ದೀದಿ ಗಾಯ​ಗೊಂಡಿದ್ದು ಅಪಘಾತದಲ್ಲಿ : ನಿಜವಾಗಿಯೂ ಆಗಿದ್ದೇನು?

ಮಮತಾ ಬ್ಯಾನರ್ಜಿ ಗಾಯಗೊಂಡಿದ್ದು ಅಪಘಾತದಲ್ಲಿ. ಅವರ ಮೇಲೆ ದಾಳಿ ನಡೆದಿಲ್ಲ ಎನ್ನುವುದು ಇದೀಗ ಸ್ಪಷ್ಟವಾಗಿದೆ. ಇದೊಂದು ಅವ​ಘಡ ಎಂಬ ಅಂಶ​ವ​ನ್ನೊ​ಳ​ಗೊಂಡ ಪ್ರಾಥ​ಮಿಕ ವರ​ದಿ​ಯನ್ನು ಪೊಲೀ​ಸರು ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ದ್ದಾರೆ.

Nandigram incident that left Mamata injured was  accident snr
Author
Bengaluru, First Published Mar 12, 2021, 10:31 AM IST

ಕೋಲ್ಕ​ತಾ (ಮಾ.12): ಚುನಾ​ವಣಾ ನಾಮ​ಪತ್ರ ಸಲ್ಲಿ​ಕೆಗೆ ಬುಧ​ವಾರ ನಂದಿ​ಗ್ರಾ​ಮಕ್ಕೆ ಆಗ​ಮಿಸಿದ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯ​ವಾದ ಘಟ​ನೆಯು ಉದ್ದೇ​ಶ​ಪೂರ್ವಕ ಹಲ್ಲೆ​ಯಲ್ಲ. ಇದೊಂದು ಅವ​ಘಡ ಎಂಬ ಅಂಶ​ವ​ನ್ನೊ​ಳ​ಗೊಂಡ ಪ್ರಾಥ​ಮಿಕ ವರ​ದಿ​ಯನ್ನು ಪೊಲೀ​ಸರು ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ದ್ದಾರೆ.

ಬುಧ​ವಾರ ಇಲ್ಲಿಗೆ ಬಂದಿದ್ದ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆ​ದಿ​ರು​ವುದು ಹಲ್ಲೆಯೇ ಅಥವಾ ಆಕ​ಸ್ಮಿಕ ಘಟ​ನೆಯೇ ಎಂಬು​ದರ ಬಗ್ಗೆ ಸ್ಥಳೀಯ ಪೊಲೀ​ಸರು, ತೃಣ​ಮೂಲ ಕಾಂಗ್ರೆಸ್‌ ಕಾರ್ಯ​ಕ​ರ್ತರು, ಪ್ರತ್ಯ​ಕ್ಷ​ದ​ರ್ಶಿ​ಗಳು ಮತ್ತು ವಿಡಿಯೋ ಫುಟೇ​ಜ್‌​ಗ​ಳನ್ನು ಆಧ​ರಿಸಿ ಪೊಲೀ​ಸರು ವರ​ದಿ​ಯೊಂದನ್ನು ಸಿದ್ಧ​ಪ​ಡಿ​ಸಿದ್ದು, ಅದನ್ನು ಚುನಾ​ವಣಾ ಆಯೋ​ಗಕ್ಕೆ ರವಾ​ನಿ​ಸ​ಲಾ​ಗಿದೆ. ಈ ವರ​ದಿ​ಯ​ಲ್ಲಿನ ಅಂಶ​ಗಳು ತನಗೆ ಲಭ್ಯ​ವಾ​ಗಿದೆ. ಆ ಪ್ರಕಾರ ಇದು ಉದ್ದೇ​ಶ​ಪೂ​ರ್ವಕ ದಾಳಿ​ಯಲ್ಲ. ಬದ​ಲಿಗೆ ಅವ​ಘ​ವಷ್ಟೇ ಎಂದು ಉಲ್ಲೇಖಿ​ಸ​ಲಾ​ಗಿದೆ ಎಂದು ಆಂಗ್ಲ ಮಾಧ್ಯ​ಮ​ವೊಂದು ವರದಿ ಮಾಡಿದೆ.

ಶಾಂತಿ ಕಾಪಾಡಿ, ವ್ಹೀಲ್‌ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ! ..

ಅಪಘಾತ ಎಂದು ಪರೋಕ್ಷ ಒಪ್ಪಿದ ದೀದಿ

ಕೋಲ್ಕತಾ: ನಂದಿ​ಗ್ರಾ​ಮ​ದಲ್ಲಿ ನಾಲ್ಕೈದು ಮಂದಿ ತಮ್ಮನ್ನು ತಳ್ಳಾ​ಡಿ​ದ್ದಾರೆ. ಇದ​ರಿಂದಾಗಿ ತಮ್ಮ ಕಾಲಿಗೆ ಗಾಯ​ವಾ​ಗಿದೆ ಎಂದು ಬುಧ​ವಾರ ದೂರಿದ್ದ ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಗುರು​ವಾರವೇ ಉಲ್ಟಾಹೊಡೆ​ದಿ​ದ್ದಾರೆ. ಕೋಲ್ಕ​ತಾ​ದ ಆಸ್ಪ​ತ್ರೆ​ಯೊಂದ​ರಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ರುವ ದೀದಿ ಅವರು, ತಮ್ಮ ಪರ ಪ್ರತಿ​ಭ​ಟನೆ ನಡೆ​ಸು​ತ್ತಿ​ರುವ ಪಕ್ಷದ ಕಾರ್ಯ​ಕ​ರ್ತರು ಹಾಗೂ ಬೆಂಬ​ಲಿ​ಗರು ಶಾಂತಿ​ಯಿಂದ ಇರು​ವಂತೆ ಕರೆ ನೀಡಿದ ವಿಡಿಯೋ ಸಂದೇ​ಶ​ವನ್ನು ಬಿಡು​ಗಡೆ ಮಾಡಿ​ದ್ದಾರೆ. ಈ ವಿಡಿ​ಯೋ ಸಂದೇ​ಶ​ದಲ್ಲಿ, ‘ನಾನು ಕಾರಿನ ಮುಂಭಾ​ಗ​ದಲ್ಲಿ ಕುಳಿ​ತಿದ್ದ ನಾನು ಎರಡೂ ಕೈಗ​ಳನ್ನು ಜೋಡಿಸಿ ಜನ​ತೆಗೆ ನಮಿ​ಸು​ತ್ತಿದ್ದೆ. ಈ ವೇಳೆ ಇದ್ದ​ಕ್ಕಿ​ದ್ದಂತೆ ಸಾಗ​ರದ ನೀರಿನ ರೀತಿ ಒಮ್ಮೆಲೆ ಬಂದ ಜನ​ಸ​ಮೂ​ಹವು ನಮ್ಮತ್ತ ಹರಿ​ದು​ಬಂದಿತು. ಈ ವೇಳೆ ನನ್ನನ್ನು ಒತ್ತ​ಡ​ದಿಂದ ಹಿಡಿದು ತಳ್ಳಿ​ದಂತಾ​ಯಿತು. ಜೊತೆಗೆ ಕಾರಿನ ಬಾಗಿ​ಲಿ​ನಿಂದ ನನ್ನ ಕಾಲು​ಗ​ಳಿಗೆ ಗಾಯ​ವಾ​ಯಿತು’ ಎಂದಿ​ದ್ದಾರೆ. ತನ್ಮೂ​ಲಕ ನಂದಿ​ಗ್ರಾ​ಮದ ಘಟ​ನೆಯು ಪೂರ್ವ ನಿಯೋ​ಜಿತ ಸಂಚು ಎಂಬ ತಮ್ಮ ಆರೋ​ಪ​ವನ್ನು ತಿರ​ಸ್ಕ​ರಿ​ಸಿ​ದಂತಾ​ಗಿದ್ದು, ತಾವು ಅವ​ಘ​ಡ​ದಲ್ಲಿ ಗಾಯ​ಗೊಂಡಿ​ದ್ದಾಗಿ ಒಪ್ಪಿ​ಕೊಂಡಂತಾ​ಗಿದೆ.

ನಿಜವಾಗಿಯೂ ಆಗಿದ್ದೇನು?

ಕೋಲ್ಕತಾ: ಕಾರಿನ ಹೊರಗೆ ವಿಶೇಷವಾಗಿ ಅಳವಡಿಸಿದ ಪಟ್ಟಿಯ ಮೇಲೆ ನಿಂತು ಮಮತಾ ಅಭಿಮಾನಿಗಳತ್ತ ಕೈಬೀಸುತ್ತಾ ರೋಡ್‌ ಶೋ ನಡೆಸುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದಲ್ಲಿ ನೆಟ್ಟಿದ್ದ ಎರಡು ಕಬ್ಬಿಣದ ಪಟ್ಟಿಗಳು ಮಮತಾ ಕಾರಿನ ಚಾಲಕನಿಗೆ ಕಂಡಿಲ್ಲ. ಪರಿಣಾಮ ಕಾರಿನ ಬಾಗಿಲು ಕಬ್ಬಿಣದ ಕಂಬಿಗೆ ಬಡಿದು, ಅದು ದಿಢೀರನೆ ಮಮತಾ ಕಾಲಿಗೆ ಬಡಿದು ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Follow Us:
Download App:
  • android
  • ios