ಬೆಂಗಳೂರು- ಮೈಸೂರು ರೈಲು ಹಳಿ ಮೇಲೆ ನೀರಿನ ಗ್ಲಾಸ್ ಇಟ್ಟು ಪರೀಕ್ಷೆ..!
ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ| ಈ ವಿಡಿಯೋ ಟ್ವೀಟ್ ಮಾಡಿದ ರೈಲ್ವೆ ಸಚಿವ ಪಿಯೂಷ್ ಗೋಯಲ್| ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ ಎಂಬುದನ್ನು ನೀವೇ ಊಹಿಸಿ ಹೇಳಿದ ರೈಲ್ವೆ ಸಚಿವರು|
ನವದೆಹಲಿ(ಅ.31): ರೈಲ್ವೆ ಇಲಾಖೆ ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲ್ವೆ ಹಳಿಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ. ಕಾಮಗಾರಿಯ ನೈಪುಣ್ಯತೆಯನ್ನು ನೀರು ತುಂಬಿದ ಗಾಜಿನ ಲೋಟದ ಮೂಲಕ ಪರೀಕ್ಷೆ ಮೂಲಕ ಅದು ಜನರ ಮುಂದಿಟ್ಟಿದೆ.
ಈ ವೇಳೆ ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ. ಈ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿದ್ದು, ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ ಎಂಬುದನ್ನು ನೀವೇ ಊಹಿಸಿ ಹೇಳಿದ್ದಾರೆ.
ಕೊರೋನಾದ ನಡುವೆಯೂ ದೊಡ್ಡ ಶುಭ ಸಮಾಚಾರ ತಿಳಿಸಿದ ಪಿಯೂಶ್ ಗೋಯಲ್!
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಬೆಂಗಳೂರು- ಮೈಸೂರು ನಡುವಿನ ರೈಲ್ವೆ ಮಾರ್ಗ ಹಾಗೂ ಸೇತುವೆಗಳ ದುರಸ್ತಿ ಕಾಮಗಾರಿಯನ್ನು ಲಾಕ್ಡೌನ್ ವೇಳೆ ಕೈಗೊಳ್ಳಲಾಗಿತ್ತು.