Asianet Suvarna News Asianet Suvarna News

'ಚಕ್ರ​ಬಡ್ಡಿ ಹೊರ​ತಾದ ವಿನಾಯ್ತಿ ಅಸಾ​ಧ್ಯ, ಆರ್ಥಿ​ಕ​ತೆಗೆ ಧಕ್ಕೆ'

ಚಕ್ರ​ಬಡ್ಡಿ ಹೊರ​ತಾದ ವಿನಾಯ್ತಿ ಅಸಾ​ಧ್ಯ: ಕೇಂದ್ರ| ಹೆಚ್ಚು ವಿನಾಯ್ತಿ ನೀಡಿ​ದರೆ ಆರ್ಥಿ​ಕ​ತೆಗೆ ಧಕ್ಕೆ| ಸುಪ್ರೀಂಗೆ ಕೇಂದ್ರದ ಪರಿ​ಷ್ಕೃತ ಅಫಿ​ಡ​ವಿ​ಟ್‌

Loan Moratorium Any more relaxations will hurt economy, govt tells Supreme Court pod
Author
Bangalore, First Published Oct 11, 2020, 4:24 PM IST

ನವ​ದೆ​ಹ​ಲಿ(ಅ.11): ‘ಕೊರೋನಾ ಲಾಕ್‌​ಡೌನ್‌ ಹಿನ್ನೆ​ಲೆ​ಯಲ್ಲಿ ಸಾಲ ಮರು​ಪಾ​ವ​ತಿ​ಯಿಂದ 6 ತಿಂಗಳು ‘ವಿ​ನಾ​ಯಿ​ತಿ’ ಪಡೆ​ದ​ವರ ಸಾಲದ ಚಕ್ರ​ಬಡ್ಡಿ ಮನ್ನಾಗೆ ಒಪ್ಪಿ​ದ್ದೇವೆ. ಆದರೆ ಇದ​ಕ್ಕಿಂತ ಮುಂದು​ವ​ರಿದು ಇನ್ನು​ಳಿದ ವಲ​ಯ​ಗ​ಳಿಗೂ ವಿನಾ​ಯಿತಿ ನೀಡಲು ಮುಂದಾ​ದರೆ ಆರ್ಥಿ​ಕ​ತೆಗೆ ಧಕ್ಕೆ​ಯಾ​ಗು​ತ್ತದೆ’ ಎಂದು ಕೇಂದ್ರ ಸರ್ಕಾ​ರವು ಸುಪ್ರೀಂ ಕೋರ್ಟ್‌ಗೆ ಪರಿ​ಷ್ಕೃತ ಅಫಿ​ಡ​ವಿಟ್‌ ಸಲ್ಲಿ​ಸಿ​ದೆ.

ಅ.5ರಂದು ಕೇಂದ್ರ ಸರ್ಕಾ​ರವು ಅಫಿ​ಡ​ವಿಟ್‌ ಸಲ್ಲಿಸಿ, ‘6 ತಿಂಗಳು ಸಾಲ ಮರು​ಪಾ​ವತಿ ಮುಂದೂಡಿಕೆ ಆಯ್ಕೆ ಪಡೆ​ದ 2 ಕೋಟಿ ರು.ವ​ರೆ​ಗಿನ ಗೃಹ, ವಾಹನ ಸೇರಿ​ದಂತೆ ವೈಯ​ಕ್ತಿಕ ಸಾಲ​ಗಾ​ರರು ಹಾಗೂ ಸಣ್ಣ ಉದ್ದಿ​ಮೆ​ಗಳ ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡ​ಲಾ​ಗುವು​ದು’ ಎಂದು ತಿಳಿ​ಸಿತ್ತು. ಆದರೆ ಈ ಅಫಿ​ಡ​ವಿಟ್‌ ಒಪ್ಪಲು ನಿರಾ​ಕ​ರಿ​ಸಿದ್ದ ಸುಪ್ರೀಂ ಕೋರ್ಟ್‌, ‘ಕೇವಲ ಚಕ್ರಬಡ್ಡಿ ಮನ್ನಾ ಒಪ್ಪಲು ಸಾಧ್ಯವಿಲ್ಲ. ರಿಯಲ್‌ ಎಸ್ಟೇಟ್‌ ಸೇರಿ​ ಇತರ ವಲ​ಯ​ಗ​ಳಿಗೆ ಯಾವ ವಿನಾ​ಯಿತಿ ನೀಡು​ತ್ತೀರಿ? ಕಾಮತ್‌ ಸಮಿತಿ ಗುರು​ತಿ​ಸಿದ 26 ಸಂಕ​ಷ್ಟದ ವಲ​ಯ​ ಯಾವು​ವು ಎಂಬ ಬಗ್ಗೆ ಪರಿ​ಷ್ಕೃತ ಅಫಿ​ಡ​ವಿಟ್‌ ಸಲ್ಲಿಸಿ’ ಎಂದು ಸೂಚಿ​ಸಿ​ತ್ತು.

ಈ ಹಿನ್ನೆ​ಲೆಯಲ್ಲಿ ಪರಿ​ಷ್ಕೃತ ಅಫಿ​ಡ​ವಿಟ್‌ ಸಲ್ಲಿ​ಸಿ​ರುವ ಕೇಂದ್ರ ಹಣ​ಕಾಸು ಸಚಿ​ವಾ​ಲಯ, ‘20 ಲಕ್ಷ ಕೋಟಿ ರು. ಆತ್ಮ​ನಿ​ರ್ಭರ ಪ್ಯಾಕೇಜ್‌ ಹಾಗೂ 1.70 ಲಕ್ಷ ಕೋಟಿ ರು. ಗರೀಬ್‌ ಕಲ್ಯಾಣ್‌ ಪ್ಯಾಕೇ​ಜ್‌​ನಂಥ ವಿತ್ತೀಯ ನೀತಿ ನಿರ್ಧಾ​ರ​ಗ​ಳನ್ನು ಈಗಾ​ಗಲೇ ತೆಗೆ​ದು​ಕೊ​ಳ್ಳ​ಲಾ​ಗಿ​ದೆ. ಎಲ್ಲ ಸಾಧಕ ಬಾಧ​ಕ​ಗ​ಳನ್ನು ಪರಿ​ಶೀ​ಲಿ​ಸಿಯೇ ನಿರ್ಧಾ​ರ ಕೈಗೊ​ಳ್ಳ​ಲಾ​ಗು​ತ್ತ​ದೆ. ಇನ್ನೂ ಮುಂದು​ವ​ರಿದು ವಿವಿಧ ವಲ​ಯ​ಗ​ಳಿಗೆ ಇಂಥದ್ದೇ ಸವಲತ್ತು ನೀಡ​ಲಾ​ಗದು. 2 ಕೋಟಿ ರು.ವ​ರೆ​ಗಿನ ಸಾಲದ ಚಕ್ರ​ಬಡ್ಡಿ ಮನ್ನಾ ಹೊರ​ತಾದ ಘೋಷ​ಣೆ​ಗ​ಳಿಂದ ಆರ್ಥಿ​ಕ​ತೆಗೆ ಹಾಗೂ ಬ್ಯಾಂಕಿಂಗ್‌ ವಲ​ಯಕ್ಕೆ ಧಕ್ಕೆ​ಯಾ​ಗು​ತ್ತದೆ’ ಎಂದಿ​ದೆ.

ಅಲ್ಲದೆ, ‘ವಿತ್ತೀಯ ನೀತಿ ನಿರೂ​ಪ​ಣೆ​ ಸರ್ಕಾ​ರದ ವ್ಯಾಪ್ತಿಗೆ ಬರು​ತ್ತ​ದೆ. ಇದ​ರಲ್ಲಿ ಕೋರ್ಟ್‌​ಗಳು ಹಸ್ತ​ಕ್ಷೇಪ ಮಾಡ​ಬಾ​ರ​ದು’ ಎಂಬ ಮಹ​ತ್ವದ ಅಭಿ​ಪ್ರಾ​ಯವನ್ನೂ ಸರ್ಕಾರ ವ್ಯಕ್ತ​ಪ​ಡಿ​ಸಿ​ದೆ.

‘ಸಾ​ಲ​ಗಾ​ರರು ಹಾಗೂ ಬ್ಯಾಂಕ್‌​ಗಳು ಕುಳಿತು ಸಾಲ ತಮ್ಮ​ತಮ್ಮ ಸಾಲ ಯೋಜ​ನೆ ಪುನಾ​ರ​ಚಿ​ಸಿ​ಕೊ​ಳ್ಳು​ವುದು ಇರುವ ಏಕೈಕ ಪರಿ​ಹಾರ. ಅಲ್ಲದೆ, ಕಾಮತ್‌ ಸಮಿತಿ ಶಿಫಾ​ರ​ಸಿನ ಪ್ರಕಾರ ವಿವಿಧ 26 ವಲ​ಯ​ಗ​ಳಿಗೆ ಪರಿ​ಹಾರ ನೀಡುವ ಒಂದೇ ನಿರ್ದಿಷ್ಟಸೂತ್ರ ರೂಪಿ​ಸಲು ಆಗ​ದು’ ಎಂದು ಸ್ಪಷ್ಟ​ಪ​ಡಿ​ಸಿ​ದೆ.

ಇದಕ್ಕೂ ಮುನ್ನ ಬೆಳಗ್ಗೆ ರಿಸವ್‌ರ್‍ ಬ್ಯಾಂಕ್‌ ಪ್ರತ್ಯೇಕ ಅಫಿ​ಡ​ವಿಟ್‌ ಸಲ್ಲಿ​ಸಿತ್ತು. ‘ಸಾಲ ಮರು​ಪಾ​ವತಿ ವಿನಾ​ಯಿತಿ ಅವ​ಧಿ ವಿಸ್ತ​ರಣೆ ಹೊಣೆ​ಯನ್ನು ಬ್ಯಾಂಕ್‌​ಗ​ಳಿಗೇ ಬಿಡ​ಬೇಕು. ಆದರೆ ವಿನಾ​ಯಿತಿ ನೀಡು​ವುದು ಆರ್ಥಿ​ಕ​ತೆಗೆ ಮಾರ​ಕ​ವಾ​ಗ​ಬ​ಹು​ದು’ ಎಂದು ತಿಳಿ​ಸಿ​ತ್ತು.

ಈ ವಿಷ​ಯ​ವನ್ನು ಅಕ್ಟೋ​ಬರ್‌ 13ರಂದು ಸುಪ್ರೀಂ ಕೋರ್ಟ್‌ ವಿಚಾ​ರ​ಣೆಗೆ ಕೈಗೆ​ತ್ತಿ​ಕೊ​ಳ್ಳ​ಲಿ​ದೆ.

ಚಕ್ರಬಡ್ಡಿ ಮನ್ನಾಗೆ ಕೇಂದ್ರದ ‘1 ತಿಂಗಳ ಸೂತ್ರ’

ನ​ವ​ದೆ​ಹ​ಲಿ: 2 ಕೋಟಿ ರು.ವ​ರೆ​ಗಿನ ಸಾಲದ 6 ತಿಂಗಳ ಅವ​ಧಿಯ ಚಕ್ರ​ಬಡ್ಡಿ ಮನ್ನಾ ಮಾಡುವ ಪರಿ​ಹಾರ ಸೂತ್ರ​ವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿ​ಸಿದ ಅಫಿ​ಡ​ವಿ​ಟ್‌​ನಲ್ಲಿ ಕೇಂದ್ರ ಸರ್ಕಾರ ಪ್ರಕ​ಟಿ​ಸಿ​ದೆ.

‘ಚಕ್ರ​ಬಡ್ಡಿ ಮನ್ನಾ ಅಧಿ​ಸೂ​ಚನೆ ಹೊರ​ಬಿದ್ದ ದಿನದಿಂದ 1 ತಿಂಗಳ ಅವ​ಧಿ​ಯಲ್ಲಿ ಬ್ಯಾಂಕ್‌​ಗಳು ಮನ್ನಾ ಕ್ರಮ ಜಾರಿಗೆ ತರ​ಬೇ​ಕು. ಬಳಿಕ ಮನ್ನಾ ಆದ ಹಣ​ ಭರಿ​ಸಿ​ಕೊ​ಡು​ವಂತೆ ಬ್ಯಾ​​​​ಂಕ್‌​ಗಳು ಕೇಂದ್ರ ಸರ್ಕಾ​ರಕ್ಕೆ ಕೋರಬ​ಹು​ದು​’ ಎಂದು ತಿಳಿ​ಸಿ​ದೆ.

Follow Us:
Download App:
  • android
  • ios