ಕಂಗನಾ ಮನೆ ಧ್ವಂಸ: ಬಿಎಸಿ ನಡೆ ಸಾಕಷ್ಟು ಅನುಮಾನಸ್ಪದ: ಕೋರ್ಟ್‌|  ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ

ಮುಂಬೈ(ಸೆ.29): ನಟಿ ಕಂಗನಾ ರಾಣಾವತ್‌ಗೆ ಸೇರಿದ ಮನೆಯ ಅಕ್ರಮ ಭಾಗ ಧ್ವಂಸ ಪ್ರಕರಣದಲ್ಲಿ ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆ ಧ್ವಂಸ ಪ್ರಶ್ನಿಸಿ ಮತ್ತು ಅದಕ್ಕೆ 2 ಕೋಟಿ ಪರಿಹಾರ ಕೋರಿ ಕಂಗನಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರವೂ ಮುಂದುವರೆಸಿದ ನ್ಯಾಯಾಲಯ, ಪಾಲಿಕೆಯ ಈ ನಡವಳಿಕೆ ಅನುಮಾನಸ್ಪದವಾಗಿದೆ ಎಂದು ಹೇಳಿದೆ.

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

ಮನೆ ಧ್ವಂಸ ವೇಳೆ ಬಿಎಂಸಿ ಪಾಲಿಸುವ ಕೆಲ ನಿಯಮಗಳನ್ನು ಈ ಪ್ರಕರಣದಲ್ಲಿ ಮುರಿಯಲಾಗಿದೆ ಎಂದು ಕೋರ್ಟ್‌ ಹೇಳಿದೆ. ಅಕ್ರಮವಾಗಿ ನಿರ್ಮಾಣ ಮಾಡಿದ ಕಟ್ಟಡಗಳ ಧ್ವಂಸಕ್ಕೂ ಮುನ್ನ ಫೋಟೋ ಸಹಿತ ನೀಡಲಾಗುವ ಕೆಲಸ ತಡೆ ನೋಟಿಸು, ಧ್ವಂಸಕ್ಕೂ ಮುನ್ನ ಕಾಲವಕಾಶ ನೀಡುವುದು ಮುಂತಾದ ಪದ್ಧತಿಯನ್ನು ಈ ಪ್ರಕರಣದಲ್ಲಿ ಪಾಲಿಸಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಕೋರ್ಟ್‌ ಹೇಳಿದೆ.