* ಪಶ್ಚಿಮ ಬಂಗಾಳ ರಾಜ್ಯಪಾ​ಲ ಜಗ​ದೀಪ್‌ ಧನಕರ್‌ ವಿರುದ್ಧ ದೀದೀ ಆರೋಪ* ​ಬಂಗಾಳ ರಾಜ್ಯ​ಪಾ​ಲರ ಮೇಲೆ ದೀದಿ ಭ್ರಷ್ಟಾಚಾ​ರ ಆರೋ​ಪ* ಆರೋ​ಪ​ವನ್ನು ತಳ್ಳಿ​ಹಾ​ಕಿ​ರುವ ಧನ​ಖರ್‌

ಕೋಲ್ಕ​ತಾ(ಜೂ.29): ಪಶ್ಚಿಮ ಬಂಗಾಳ ರಾಜ್ಯಪಾ​ಲ ಜಗ​ದೀಪ್‌ ಧನಕರ್‌ ಮತ್ತು ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರ ನಡು​ವಿನ ವಾಕ್ಸ​ಮರ ಮತ್ತು ತಿಕ್ಕಾಟ ಮುಂದು​ವ​ರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

‘1996ರ ಹವಾಲಾ ಜೈನ್‌ ಪ್ರಕ​ರ​ಣ​ದ ಜಾಜ್‌ರ್‍ಶೀಟ್‌​ನಲ್ಲಿ ಗವ​ರ್ನರ್‌ ಹೆಸರು ಉಲ್ಲೇ​ಖ​ವಾ​ಗಿದೆ. ಭ್ರಷ್ಟಾ​ಚಾರ ಆರೋಪ ಎದು​ರಿ​ಸು​ತ್ತಿ​ರುವ ಧನ​ಖರ್‌ ಅವ​ರನ್ನು ರಾಜ್ಯಪಾಲ ಸ್ಥಾನ​ದಿಂದ ಹಿಂದಕ್ಕೆ ಕರೆ​ಸಿ​ಕೊ​ಳ್ಳಬೇಕು’ ಎಂದು ಕೇಂದ್ರ ಸರ್ಕಾ​ರಕ್ಕೆ ದೀದಿ ಒತ್ತಾ​ಯಿ​ಸಿ​ದ್ದಾರೆ.

ಇಂತಹ ಆರೋಪಗಳಿರುವ ರಾಜ್ಯಪಾಲರಿಗೆ ಕೇಂದ್ರ ಸರ್ಕಾರ ಏಕೆ ಅವಕಾಶ ನೀಡುತ್ತದೆ? ಕೇಂದ್ರ ಸರ್ಕಾರವು ಆರೋ‍‍ಪಪಟ್ಟಿ ತೆಗೆದು ಅವರ ಹೆಸರು ಇದೆಯೇ ಎಂದು ನೋಡಲಿ ಎಂದು ಹೇಳಿದ್ದಾರೆ.

ಧನಕರ್ ಅವರನ್ನು ಬಂಗಾಳ ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಕೇಂದ್ರಕ್ಕೆ ಬರೆದ ಮೂರು ಪತ್ರಗಳನ್ನು ಉಲ್ಲೇಖಿಸಿದ ಮಮತಾ, ಕೇಂದ್ರವು ಈಗಲಾದರೂ ತಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಹೇಳಿದರು.

ಈ ಆರೋ​ಪ​ವನ್ನು ತಳ್ಳಿ​ಹಾ​ಕಿ​ರುವ ಧನ​ಖರ್‌, ‘ಜೈನ್‌ ಹವಾಲ ಕೇಸ್‌​ನಲ್ಲಿ ನಮ್ಮ ಹೆಸ​ರಿಲ್ಲ. ಬ್ಯಾನರ್ಜಿ ಅವರು ಸುಳ್ಳು ಮತ್ತು ತಪ್ಪು ಮಾಹಿ​ತಿ​ಯನ್ನು ಹರ​ಡು​ತ್ತಿ​ದ್ದಾರೆ’ ಎಂದು ತಿರು​ಗೇಟು ನೀಡಿ​ದ್ದಾರೆ.