* ದೇಶದಲ್ಲಿ ಕೊರೋನಾ ಸೋಂಕು ಇಳಿಕೆ ಬೆನ್ನಲ್ಲೇ ಐಆರ್‌ಸಿಟಿಸಿಯಿಂದ ಸ್ಪೆಷಲ್ ಆಫರ್* ಜು.24ರಿಂದ 2 ವಾರಗಳ ಕಾಲದ ‘ಭಾರತ ದರ್ಶನ ವಿಶೇಷ ಪ್ರವಾಸ ರೈಲು’ ಎಂಬ ಪ್ರವಾಸ * ಪ್ರವಾಸದ ವೇಳೆ 7 ಜ್ಯೋತಿರ್ಲಿಂಗ ದರ್ಶನ, ದ್ವಾರಕ, ಗುಜರಾತ್‌ನಲ್ಲಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಮೂರ್ತಿ ಇರುವ ಸ್ಥಳಗಳ ಭೇಟಿ 

ನವದೆಹಲಿ(ಜೂ.26): ಕಣ್ಣಿಗೆ ಕಾಣದ ಕೊರೋನಾ ಎಂಬ ವೈರಾಣು ಇಡೀ ವಿಶ್ವವನ್ನೇ ಕಂಗಾಲು ಮಾಡಿದೆ. ಈ ಸೋಂಕಿನ ಹೊಡೆತಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಸಾರಿಗೆ ಸೇರಿದಂತೆ ಬಹುತೇಕ ಕ್ಷೇತ್ರಗಳು ಭಾರೀ ನಷ್ಟವನ್ನೆದುರಿಸುತ್ತಿವೆ. ಹೀಗಿರುವಾಗ ಈ ಪರಿಸ್ಥಿತಿಯನ್ನು ಕೊಂಚ ಮಟ್ಟಿಗೆ ಸರಿದೂಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಇಲಾಖೆ 2 ವಾರಗಳ ಕಾಲದ ‘ಭಾರತ ದರ್ಶನ ವಿಶೇಷ ಪ್ರವಾಸ ರೈಲು’ ಎಂಬ ಪ್ರವಾಸ ಎಂಬ ನೂತನ ಯೋಜನೆ ಘೋಷಿಸಿದೆ.

Add Asianetnews Kannada as a Preferred SourcegooglePreferred

ರೈಲ್ವೆ ಇಲಾಖೆಯಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್

ಹೌದು ದೇಶದಲ್ಲಿ ಕೊರೋನಾ ಸೋಂಕು ಇಳಿಕೆ ಬೆನ್ನಲ್ಲೇ ಐಆರ್‌ಸಿಟಿಸಿ, ಜು.24ರಿಂದ ‘ಭಾರತ ದರ್ಶನ ವಿಶೇಷ ಪ್ರವಾಸ ರೈಲು’ ಎಂಬ 2 ವಾರಗಳ ಕಾಲದ ಪ್ರವಾಸ ಆರಂಭಿಸಿದೆ. ಆ.24ರಿಂದ ಆರಂಭವಾಗಿ ಸೆ.7ಕ್ಕೆ ಮುಗಿಯಲಿರುವ ಪ್ರವಾಸದ ವೇಳೆ 7 ಜ್ಯೋತಿರ್ಲಿಂಗ ದರ್ಶನ, ದ್ವಾರಕ, ಗುಜರಾತ್‌ನಲ್ಲಿರುವ ಸರ್ದಾರ್‌ ವಲ್ಲಭಭಾಯ ಪಟೇಲ್‌ ಅವರ ಏಕತಾ ಮೂರ್ತಿ ಇರುವ ಸ್ಥಳಗಳನ್ನು ತೋರಿಸಲಾಗುವುದು.

ಭಾರತ್ ದರ್ಶನ್ ಪ್ರವಾಸಕ್ಕೆ ಟಿಕೆಟ್​ಗಳನ್ನು ಕಾಯ್ದಿರಿಸುವುದು ಹೇಗೆ?

ಈ ಪ್ರವಾಸಕ್ಕೆ ಒಬ್ಬರಿಗೆ ಎಲ್ಲಾ ವೆಚ್ಚ ಸೇರಿ 12285 ರು. ದರ ನಿಗದಿ ಮಾಡಲಾಗಿದೆ. ದಿನಕ್ಕೆ 3 ಬಾರಿ ಸಸ್ಯಾಹಾರ ಊಟ, ಸ್ಥಳೀಯ ಹಾಲ್‌, ಛತ್ರಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ, ಸ್ಥಳೀಯವಾಗಿ ತಿರುಗಾಡಲು ಬಸ್‌ ವ್ಯವಸ್ಥೆ ಇರುತ್ತದೆ. ಆಸಕ್ತರು www.irctctourism.com ಅಥವಾ ದೂರವಾಣಿ ಸಂಖ್ಯೆ 8287930908, 8287930909, 8287930910 8287930911. ಸಂಪರ್ಕಿಸಬಹುದು.

ರೈಲು ಟಿಕೆಟ್ ಬುಕ್ ಮಾಡಿದ ಮಹಿಳೆಗೆ ಹಿಂದಿಯಲ್ಲಿ ಸಂದೇಶ: ಭುಗಿಲೆದ್ದ ಭಾಷಾ ಹೇರಿಕೆ ವಿವಾದ!

ಊಟ, ತಿಂಡಿ ವ್ಯವಸ್ಥೆ:

ಪ್ರವಾಸದ ಸಮಯದಲ್ಲಿ, ಎಲ್ಲ ಪ್ರಯಾಣಿಕರಿಗೆ ಮೂರು ಹೊತ್ತು ಸಸ್ಯಾಹಾರಿ ಆಹಾರ ನೀಡಲಾಗುವುದು. ಅದಲ್ಲದೆ, ಧರ್ಮಶಾಲಾದಲ್ಲಿ ಅವರಿಗೆ ವಾತಾನುಕೂಲಿತವಲ್ಲದ ವಸತಿ ಸೌಕರ್ಯ ಮತ್ತು ಸ್ಥಳೀಯ ಟೂರಿಸ್ಟ್​ ಸ್ಥಳಗಳಿಗೆ ಭೇಟಿ ನೀಡಲು ಬಸ್​ ವ್ಯವಸ್ಥೆ ಮಾಡಲಾಗುವುದು ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ.