Asianet Suvarna News Asianet Suvarna News

ರಾಮಾಯಣ ಸ್ಪೂರ್ತಿಯಿಂದ ತನ್ನದೇ ಚರ್ಮದ ಚಪ್ಪಲಿ ಮಾಡಿಸಿ ತಾಯಿಗೆ ತೊಡಿಸಿದ ಮಗ!

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಗೆ ತನ್ನದೇ ಚರ್ಮದಿಂದ ಮಾಡಿದ ಚಪ್ಪಲಿಗಳನ್ನು ತೊಡಿಸಿ ತಾಯಿಭಕ್ತಿಗಾಗಿ ಸುದ್ದಿಯಲ್ಲಿದ್ದಾನೆ. 
 

Inspired by Ramayana man in MP gifts mother footwear made from his own skin skr
Author
First Published Mar 23, 2024, 10:27 AM IST

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಂದು ಹೃದಯಸ್ಪರ್ಶಿ ಸನ್ನೆಯು ಅನೇಕರ ಗಮನವನ್ನು ಸೆಳೆದಿದೆ. ಹಿಂದೆ ರೌಡಿ ಶೀಟರ್ ಆಗಿದ್ದ ವ್ಯಕ್ತಿಯೊಬ್ಬ ರಾಮಾಯಣದಿಂದ ಪ್ರೇರೇಪಿತನಾಗಿ ತನ್ನದೇ ಚಪ್ಪಲಿಯಿಂದ ತನ್ನ ತಾಯಿಗಾಗಿ ಚಪ್ಪಲಿ ಮಾಡಿಸಿ ತೊಡಿಸಿದ್ದಾನೆ. ಈ ಅತಿರೇಖದ ತಾಯಿ ಪ್ರೇಮವು ಬಹಳಷ್ಟು ಜನರ ಮೆಚ್ಚುಗೆ ಗಳಿಸಿದೆ. 

ಮಾಜಿ ರೌಡಿ ಶೀಟರ್ ರೌನಕ್ ಗುರ್ಜರ್ ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ತಾಯಿಯ ಕಾಲಿಗೆ ತಮ್ಮದೇ ಚರ್ಮದಿಂದ ಮಾಡಿಸಿದ ಚಪ್ಪಲಿ ತೊಡಿಸಿ ಕಣ್ಣೀರಾಗಿದ್ದಾರೆ. 

ಉಜ್ಜಯಿನಿಯ ಸಾಂದೀಪನಿ ನಗರದ ಅಖಾಡ ಮೈದಾನದಲ್ಲಿ ಜಿತೇಂದ್ರ ಮಹಾರಾಜ್ ನೇತೃತ್ವದಲ್ಲಿ ನಡೆದ ಏಳು ದಿನಗಳ ಭಗವತ್ ಕಥಾದಲ್ಲಿ ಅವರು ತಮ್ಮ ಚರ್ಮದಿಂದ ರಚಿಸಲಾದ ಒಂದು ಜೋಡಿ ಪಾದರಕ್ಷೆಯನ್ನು ತಮ್ಮ ತಾಯಿಗೆ ಉಡುಗೊರೆಯಾಗಿ ನೀಡಿದರು.

ಗಂಡಾಗಿ ಹುಟ್ಟಿ, ಹೆಣ್ಣಾದ ಈ ನಟಿ ಮೊದಲ ಚಿತ್ರದಲ್ಲೇ ಸೂಪರ್‌ಸ್ಟಾರ್ ಪತ್ನಿಯ ಪಾತ್ರ ನಿರ್ವಹಿಸಿದ್ದಾರೆ!
 

ಈ ಹಿಂದೆ ಪೊಲೀಸರಿಂದ ಕಾಲಿಗೆ ಗುಂಡು ತಗುಲಿಸಿಕೊಂಡು ಗಾಯಗೊಂಡಿದ್ದ ಗುರ್ಜರ್, ತನ್ನ ತೊಡೆಯಿಂದ ಚರ್ಮವನ್ನು ತೆಗೆಯುವ ಪ್ರಕ್ರಿಯೆಗೆ ಒಳಗಾದ. ಈ ಚರ್ಮವನ್ನು ನಂತರ ನುರಿತ ಚಮ್ಮಾರರಿಗೆ ಕೊಟ್ಟು ಅನನ್ಯ ಪಾದರಕ್ಷೆಗಳನ್ನು ಮಾಡಿಕೊಡಲು ಹೇಳಲಾಯಿತು. ಇದನ್ನು ಆತ ತಾಯಿಯ ಕಾಲಿಗೆ ತೊಡಿಸಿದನು. ಕ್ರಿಮಿನಲ್ ಚಟುವಟಿಕೆಗಳಿಗಾಗಿ ಗಳಿಸಿದ ಕುಖ್ಯಾತಿಗಿಂತ ಹೆಚ್ಚಾಗಿ ಆತನ ಈ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. 

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಗುರ್ಜರ್ ತಮ್ಮ ಸ್ಫೂರ್ತಿಯನ್ನು ವಿವರಿಸುತ್ತಾ, 'ನಾನು ನಿಯಮಿತವಾಗಿ ರಾಮಾಯಣವನ್ನು ಪಠಿಸುತ್ತೇನೆ ಮತ್ತು ನಾನು ರಾಮನ ಪಾತ್ರದಿಂದ ಆಳವಾಗಿ ಪ್ರಭಾವಿತನಾಗಿದ್ದೇನೆ. ಒಬ್ಬರ ಚರ್ಮದಿಂದ ಚಪ್ಪಲಿಯನ್ನು ತಯಾರಿಸಿ ನೀಡುವುದು ಸಹ ತಾಯಿಗೆ ಸಾಕಾಗುವುದಿಲ್ಲ ಎಂದು ಶ್ರೀರಾಮನು ಹೇಳಿದ್ದಾನೆ. ಆದ್ದರಿಂದ, ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು ಮತ್ತು ನನ್ನ ಚರ್ಮದಿಂದ ಪಾದರಕ್ಷೆಗಳನ್ನು ತಯಾರಿಸಿ ನನ್ನ ತಾಯಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ' ಎಂದಿದ್ದಾನೆ.

ರಷ್ಯಾ ಮ್ಯೂಸಿಕ್ ಕನ್ಸರ್ಟ್ ಹಾಲ್ ಮೇಲೆ ಭಾರೀ ಉಗ್ರರ ದಾಳಿ, 60 ಜನರ ಬ ...
 

ಮುಂದವರಿದು, 'ಸ್ವರ್ಗವು ಪೋಷಕರ ಪಾದದ ಮೇಲೆ ಇದೆ ಎಂದು ನಾನು ಸಮಾಜಕ್ಕೆ ಹೇಳಲು ಬಯಸುತ್ತೇನೆ. ತಂದೆಯು ಸ್ವರ್ಗಕ್ಕೆ ಮೆಟ್ಟಿಲು, ಆದರೆ ತಾಯಿ ಅದನ್ನು ಅಲ್ಲಿಗೆ ತರುವವರು' ಎಂದು ಗುರ್ಜರ್ ಹೇಳಿದ್ದಾನೆ. 

ಗುರ್ಜರ್‌ನ ನಿಸ್ವಾರ್ಥ ಕಾರ್ಯವು ಅವನ ತಾಯಿಯನ್ನು ಆಳವಾಗಿ ಬೆಚ್ಚಿ ಬೀಳಿಸಿತು. ಅವರಿಗೆ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. 'ರೌನಕ್ ಅವರಂತಹ ಮಗನನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ದೇವರು ಅವನನ್ನು ಎಲ್ಲಾ ಕಷ್ಟಗಳಿಂದ ರಕ್ಷಿಸಲಿ ಮತ್ತು ಯಾವುದೇ ದುಃಖವಿಲ್ಲದ ಜೀವನವನ್ನು ಆಶೀರ್ವದಿಸಲಿ ' ಎಂದು ಗುರ್ಜರ್ ಅವರ ತಾಯಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. 

 

Follow Us:
Download App:
  • android
  • ios